ಕೀಳು ಅಭಿರುಚಿ ತೋರಿಕೆ
ಕಾಫೀ ವಿತ್ ಕರಣ ಶೋನಲ್ಲಿ ತಾನು ಮೊದಲು ಸೆಕ್ಸ್ನಲ್ಲಿ ಪಾಲ್ಗೊಂಡ ಬಗ್ಗೆ, ಮಹಿಳೆಯ ಬಗೆಗಿನ ತನಗಿರುವ ಕೀಳು ಅಭಿರುಚಿಯ ಬಗ್ಗೆ ಹಾರ್ದಿಕ್ ಹೇಳಿಕೊಂಡಿದ್ದರು. ಸಚಿನ್ ಮತ್ತು ಕೊಹ್ಲಿ ಇವರಲ್ಲಿ ಯಾರು ಉತ್ತಮ ಬ್ಯಾಟ್ಸ್ಮನ್ ಎಂಬ ಕರಣ್ ಜೋಹರ್ ಪ್ರಶ್ನೆಗೆ ಪಾಂಡ್ಯ, ರಾಹುಲ್ ಇಬ್ಬರೂ ವಿರಾಟ್ ಕೊಹ್ಲಿ ಎಂದು ಉತ್ತರಿಸಿದ್ದಾರೆ.
ಹಿರಿಯ ಆಟಗಾರರ ಬಗ್ಗೆ ತಾತ್ಸಾರ
ವಿರಾಟ್ ಕೊಹ್ಲಿ ಈಗ ಗಮನಾರ್ಹ ರೀತಿಯಲ್ಲಿ ಬೆಳೆಯುತ್ತಿದ್ದಾರೆ ನಿಜ. ಆದರೆ ಹಿರಿಯ ಆಟಗಾರ ಸಚಿನ್ ಅವರ ಕೊಡುಗೆಯೂ ದೇಸಿ ಕ್ರಿಕೆಟ್ಗೆ ಪ್ರಮುಖವೆ. ಎಲ್ಲದಕ್ಕಿಂತ ಮಿಗಿಲಾಗಿ ಇಬ್ಬರೂ ಯುವ ಆಟಗಾರರಿಗೆ ದೇಶದ ಹಿರಿಯ ಆಟಗಾರರ ಮೇಲಿರುವ ತಾತ್ಸಾರದ ಭಾವನೆ ಬಿಸಿಸಿಐಯನ್ನು ಕೆರಳಿಸಿದೆ.
ಕ್ಷಮೆ ಕೇಳಿದ ಪಾಂಡ್ಯ
ಟಿವಿ ಶೋ ಎಪಿಸೋಡ್ ಪ್ರಸಾರ ಆದ ನಂತರ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡ ಬಳಿಕ ಹಾರ್ದಿಕ್ ಪಾಂಡ್ಯ ಕ್ಷಮೆ ಕೇಳಿದ್ದಾರೆ. ಯಾರನ್ನೂ ನೋಯಿಸುವ ಉದ್ದೇಶ ಇರಲಿಲ್ಲ. ಶೋಗೆ ತಕ್ಕಂತೆ ಮಾತನಾಡಿದೆನಷ್ಟೆ. ನನ್ನನ್ನು ಕ್ಷಮಿಸಿ ಎಂದು ಹಾರ್ದಿಕ್ ಟ್ವೀಟ್ ಮಾಡಿದ್ದಾರೆ.
ಬಿಸಿಸಿಐ ಗರಂ
ಕಾರ್ಯಕ್ರಮದ ವೇಳೆ ಪಾಂಡ್ಯ ಬಳಸಿದ ಪದ ಬಳಕೆ, ತೋರಿಕೊಂಡ ಮನೋಭಾವ ಒಬ್ಬ ಭಾರತದ ಕ್ರಿಕೆಟ್ ಆಟಗಾರನ ಮನೋಭಾವಕ್ಕಿಂತ ದೂರವಿತ್ತು. ಈ ಕಾರಣಕ್ಕೆ ಹಾರ್ದಿಕ್ಗೆ ಬಿಸಿಸಿಐ ಬಿಸಿ ಮುಟ್ಟಿಸಲಿದೆ ಎನ್ನಲಾಗುತ್ತಿದೆ. ಮಾಹಿತಿಯ ಪ್ರಕಾರ ಬಿಸಿಸಿಐ ಅಧಿಕಾರಿಗಳು ಪಾಂಡ್ಯ ಪಾಲ್ಗೊಂಡ ಎಲ್ಲಾ ಕಾಫೀ ವಿಟ್ ಕರಣ್ ಎಪಿಸೋಡ್ಗಳನ್ನು ಗಮನಿಸಿದ್ದಾರೆ, ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.