For Quick Alerts
ALLOW NOTIFICATIONS  
For Daily Alerts
 

ಹೃದಯವೈಶಾಲ್ಯ ಮೆರೆದ ಬಿಸಿಸಿಐ; ಭಾರತ ತಂಡದೊಂದಿಗೆ ಮರಳಲು 22 ಕ್ರೀಡಾ ಪತ್ರಕರ್ತರ ನೆರವಿಗೆ ಧಾವಿಸಿದ ಜಯ್ ಶಾ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಶ್ವದ ಅತ್ಯಂತ ಪ್ರಭಾವಿ ಮತ್ತು ಶ್ರೀಮಂತ ಕ್ರಿಕೆಟ್ ಮಂಡಳಿಗಳಲ್ಲಿ ಒಂದಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.

ಆದಾಗ್ಯೂ, ಬಿಸಿಸಿಐ ಕೂಡ ಸಿಂಹ ಹೃದಯ ಹೊಂದಿದೆ ಮತ್ತು ತಮ್ಮದೇ ಆದ ಜನರಿಗೆ ಸಹಾಯ ಮಾಡಲು ತಮ್ಮದೇ ಆದ ರೀತಿಯಲ್ಲಿ ಮುಂದಾಳತ್ವ ವಹಿಸುತ್ತದೆ ಎಂದು ತೋರಿಸಿದೆ.

BCCI Rushed to Help 22 Sports Journalists to Return with Indian Cricket Team From Barbados

ಬೆರಿಲ್ ಚಂಡಮಾರುತದಿಂದಾಗಿ ಭಾರತ ಕ್ರಿಕೆಟ್ ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯು ವೆಸ್ಟ್ ಇಂಡೀಸ್‌ನ ದ್ವೀಪ ಬಾರ್ಬಡೋಸ್‌ನಲ್ಲಿ ಸಿಲುಕಿಕೊಂಡಿದೆ. ಅಲ್ಲಿ ಸಿಕ್ಕಿಹಾಕಿಕೊಂಡಿದ್ದು ಭಾರತೀಯ ಆಟಗಾರರು ಮಾತ್ರವಲ್ಲ, ಆಟಗಾರರ ಜೊತೆಗೆ ಸುಮಾರು 22 ಕ್ರೀಡಾ ಪತ್ರಕರ್ತರು. ಅವರನ್ನು ಭಾರತಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸುವ ಮೂಲಕ ಬಿಸಿಸಿಐ ತನ್ನ ಹೃದಯವೈಶಾಲ್ಯವನ್ನು ಮೆರೆದಿದೆ.

ಬಿಸಿಸಿಐ ಸುರಕ್ಷಿತ ವಾಪಸಾತಿಗೆ ವ್ಯವಸ್ಥೆ ಮಾಡಿದೆ

ಬೆರಿಲ್ ಚಂಡಮಾರುತದ ಅಪ್ಪಳಿಸುವಿಕೆಯಿಂದಾಗಿ ಬಾರ್ಬಡೋಸ್‌ನಿಂದ ಭಾರತೀಯ ಪಡೆಯು ಭಾರತಕ್ಕೆ ಮರಳುವುದನ್ನು ಸ್ಥಗಿತಗೊಳಿಸಿದೆ ಅಥವಾ ಮುಂದೂಡಲ್ಪಟ್ಟಿದೆ.

2024ರ ಟಿ20 ವಿಶ್ವಕಪ್ ಫೈನಲ್ ಗೆದ್ದ ನಂತರ, ಬೆರಿಲ್ ಚಂಡಮಾರುತದ ಕಾರಣ ಭಾರತೀಯ ಕ್ರಿಕೆಟ್ ತುಕಡಿಯು ಇನ್ನೂ ಬಾರ್ಬಡೋಸ್ ಅನ್ನು ತೊರೆದಿಲ್ಲ. ಇದೇ ವೇಳೆ ಕ್ರಿಕೆಟಿಗರ ಜೊತೆಗೆ ಕೆಲವು ಭಾರತೀಯ ಕ್ರೀಡಾ ಪತ್ರಕರ್ತರೂ ಸಿಲುಕಿಕೊಂಡಿದ್ದಾರೆ. ಬೆರಿಲ್ ಚಂಡಮಾರುತದ ಬಾರ್ಬಡೋಸ್ ವಿಮಾನನಿಲ್ದಾಣ ಬಂದ್ ಮಾಡಿರುವ ಕಾರಣ, ಅವರ ಏರ್ ಟಿಕೆಟ್‌ಗಳನ್ನು ಸಹ ರದ್ದುಗೊಳಿಸಲಾಗಿದೆ.

BCCI Rushed to Help 22 Sports Journalists to Return with Indian Cricket Team From Barbados

ಜುಲೈ 7ರ ಮೊದಲು ಹೊಸ ಏರ್ ಟಿಕೆಟ್‌ಗೆ ಅವಕಾಶವಿಲ್ಲದೇ 22 ಭಾರತೀಯ ಕ್ರೀಡಾ ಪತ್ರಕರ್ತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಬಿಸಿಸಿಐ ಮಧ್ಯಪ್ರವೇಶಿಸಿ ಭಾರತೀಯ ಆಟಗಾರರೊಂದಿಗೆ ಮರಳಲು ಅವಕಾಶ ಕಲ್ಪಿಸಿದೆ.

ರಕ್ಷಣೆಗೆ ಧಾವಿಸಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ

ತಮ್ಮ ಕಷ್ಟವನ್ನು ಹೇಳಲು ಎಕ್ಸ್ (ಟ್ವಿಟ್ಟರ್) ಪೋಸ್ಟ್ ಮಾಡಿದ್ದ ಪತ್ರಕರ್ತರು, ಪರಿಸ್ಥಿತಿಯ ಬಗ್ಗೆ ಜಯ್ ಶಾ ಅವರಿಗೆ ವಿವರಿಸಿದ್ದರು. ನಂತರ ಕ್ರೀಡಾ ಪತ್ರಕರ್ತರನ್ನು ಸುರಕ್ಷಿತವಾಗಿ ಹಿಂದಿರುಗಲು ವ್ಯವಸ್ಥೆ ಮಾಡುವುದಾಗಿ ಜಯ್ ಶಾ ಭರವಸೆ ನೀಡಿದರು.

ಬಳಿಕ 2024ರ ಐಸಿಸಿ ಟಿ20 ವಿಶ್ವ ಚಾಂಪಿಯನ್ ಭಾರತೀಯ ಕ್ರಿಕೆಟಿಗರನ್ನು ತವರಿಗೆ ಕರೆತರಲಿರುವ ಏರ್ ಇಂಡಿಯಾ ವಿಮಾನದಲ್ಲಿ ಕ್ರೀಡಾ ಪತ್ರಕರ್ತರಿಗೆ ಜಯ್ ಶಾ ಟಿಕೆಟ್ ವ್ಯವಸ್ಥೆ ಮಾಡಿದರು.

ಬಿಸಿಸಿಐನ ಬದ್ಧತೆಯು ಕೇವಲ ಕ್ರಿಕೆಟಿಗರ ಯೋಗಕ್ಷೇಮಕ್ಕೆ ಮಾತ್ರ ಸೀಮಿತಗೊಳಿಸುವುದಿಲ್ಲ. ಅದು ಸಂಕಷ್ಟದಲ್ಲಿದ್ದ ಪತ್ರಕರ್ತರಿಗೂ ವಿಸ್ತರಿಸುತ್ತದೆ ಎಂಬುದನ್ನು ಇದು ತೋರಿಸಿದೆ.

ಭಾರತ ತಂಡದ ಆಗಮನದಲ್ಲಿ ವಿಳಂಬ

ನಾಲ್ಕು ದಿನಗಳ ವಿಳಂಬದ ನಂತರ ಟಿ20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾ ಅಂತಿಮವಾಗಿ ಭಾರತಕ್ಕೆ ಆಗಮಿಸಲಿದೆ. ಬೆರಿಲ್ ಚಂಡಮಾರುತದಿಂದಾಗಿ ಪ್ರತಿಕೂಲ ಹವಾಮಾನದ ಕಾರಣ, ಬಾರ್ಬಡೋಸ್‌ನಲ್ಲಿ ಸಿಲುಕಿಕೊಂಡಿದ್ದರು. ಇದೀಗ ಆಕಾಶವು ಶುಭ್ರವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತ ತಂಡ ಗುರುವಾರ ಬೆಳಿಗ್ಗೆ 6 ಗಂಟೆಗೆ ನವದೆಹಲಿಗೆ ಆಗಮಿಸಲಿದೆ.

ನೂತನ ವಿಶ್ವ ಚಾಂಪಿಯನ್ ಕಿರೀಟ ತೊಟ್ಟ ಭಾರತೀಯ ಆಟಗಾರರನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ಭಾರೀ ಜನಸ್ತೋಮವನ್ನು ನಿರೀಕ್ಷಿಸಬಹುದು.

Story first published: Wednesday, July 3, 2024, 12:30 [IST]
Other articles published on Jul 3, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+