ಭಾರತ ಹಾಗೂ ಶ್ರೀಲಂಕಾ ನಡುವಣ ಏಷ್ಯಾ ಕಪ್ ಟಿ20 ಟೂರ್ನಿಯ ಸೂಪರ್ 4 ಹಂತದ ಪಂದ್ಯ ದುಬೈನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಉಭಯ ತಂಡಗಳು ಭರ್ಜರಿ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆಯಿತು. ಸೂಪರ್ 4 ಹಂತದ ಕೊನೆಯ ಪಂದ್ಯದಲ್ಲಿ ಎರಡೂ ತಂಡಗಳು ನಿಗದಿತ ಓವರ್ಗಳಲ್ಲಿ ಸಮ ರನ್ಗಳಿಸಿದವು. ಹೀಗಾಗಿ ಫಲಿತಾಂಶವನ್ನು ಅರಿಯಲು ಸೂಪರ್ ಓವರ್ ಮೊರೆ ಹೋಗಲಾಯಿತು. ಸೂಪರ್ ಓವರ್ನಲ್ಲಿ ಹೈಡ್ರಾಮಾ ಒಂದು ನಡೆಯಿತು. ಹಾಗಿದ್ದರೆ ಮೈದಾನದಲ್ಲಿ ಆಗಿದ್ದೇನು ಎಂಬ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಸೂಪರ್ 4 ಹಂತದ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 202 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಶ್ರೀಲಂಕಾ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 202 ರನ್ ಸೇರಿಸಿತು. ಶ್ರೀಲಂಕಾ ಪರ ಪತನು ನಿಸಂಕಾ ಭರ್ಜರಿ ಶತಕ ಬಾರಿಸಿ ಮಿಂಚಿದರು. ಆದರೂ ಈ ಪಂದ್ಯ ಟೈನಲ್ಲಿ ಅಂತ್ಯವಾಯಿತು. ಆಗ ಪಂದ್ಯದ ಫಲಿತಾಂಶವನ್ನು ಅರಿಯಲು ಸೂಪರ್ ಓವರ್ ಮೊರೆ ಹೋಗಲಾಯಿತು.

ನಿರೀಕ್ಷೆಯಂತೆ ಸೂಪರ್ ಓವರ್ ಬೌಲಿಂಗ್ ಮಾಡಲು ಟೀಮ್ ಇಂಡಿಯಾದ ಭರವಸೆಯ ವೇಗಿ ಅರ್ಷದೀಪ್ ಸಿಂಗ್ ಸಜ್ಜಾದರು. ಇವರು ತಮ್ಮ ವೈಡ್ ಯಾರ್ಕರ್ ಮೂಲಕ ಲಂಕಾ ಬ್ಯಾಟರ್ಗಳನ್ನು ಕಾಡಿದರು. ಅಲ್ಲದೆ ಈ ಓವರ್ನಲ್ಲಿ 2 ವಿಕೆಟ್ ಪಡೆದು ಬೀಗಿದರು. ಲಂಕಾ ತಂಡದ ಕುಶಾಲ್ ಪೆರೆರಾ ಮೊದಲ ಎಸೆತದಲ್ಲೇ ಔಟಾದರು. 202 ರನ್ಗಳ ಗುರಿಯನ್ನು ಬೆನ್ನಟ್ಟಿದ ಲಂಕಾ ಸೂಪರ್ ಓವರ್ನ್ಲಿ ಎಡವಿತು. 2 ರನ್ ಆಗುವಷ್ಟರಲ್ಲಿ ಲಂಕಾ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಸೂಪರ್ ಓವರ್ನಲ್ಲಿ ಒಂದು ನಾಟಕೀಯ ಘಟನೆಯೊಂದು ನಡೆಯಿತು. ಈ ಓವರ್ನ ನಾಲ್ಕನೇ ಎಸೆತದಲ್ಲಿ ಶನಕ ಅವರಿಗೆ ಅರ್ಷದೀಪ್ ಖೆಡ್ಡಾ ತೋಡಿದರು. ಅರ್ಷದೀಪ್ ವಿಕೆಟ್ಗೆ ಅಪೀಲ್ ಮಾಡಿದರು. ಅಷ್ಟೊತ್ತಿಗಾಗಲೇ ಶನಕ ಕ್ರೀಸ್ ಬಿಟ್ಟು ಆಗಿತ್ತು. ಇವರು ಕ್ರೀಸ್ ಬಿಟ್ಟಿದ್ದನ್ನು ಗಮನಿಸಿದ ಸಂಜು ಸ್ಯಾಮ್ಸನ್ ವಿಕೆಟ್ಗೆ ಬಡೆದರು. ಇದರರ್ಥದಲ್ಲಿ ಒಂದೇ ಚೆಂಡಿನಲ್ಲಿ 2 ಔಟ್ ಆದವು. ಆದರೆ ನಿಯಮ ಶ್ರೀಲಂಕಾದ ಪರವಾಯಿತು.
ಅರ್ಷದೀಪ್ ವಿಕೆಟ್ಗೆ ಅಪೀಲ್ ಮಾಡಿದ ಬಳಿಕ ಅಂಪೈರ್ ವಿಕೆಟ್ ನೀಡಿದರು. ಅಂಪೈರ್ ಕ್ಯಾಚ್ ಔಟ್ ನೀಡಿದ ತಕ್ಷಣ, ಚೆಂಡನ್ನು ಡೆಡ್ ಬಾಲ್ ಎಂದು ಪರಿಗಣಿಸಲಾಯಿತು. ಹೀಗಾಗಿ ಆ ಚೆಂಡು ಮಾನ್ಯವಾಗಿರಲಿಲ್ಲ. ಮೂರನೇ ಅಂಪೈರ್ ಮರು ಪರಿಶೀಲಿಸಿ ನಟೌಟ್ ಎಂದು ನೀಡಿದರು. ಇದರ ಲಾಭ ಪಡೆಯುವಲ್ಲಿ ಶನಕ ವಿಫಲರಾದರು. ಮುಂದಿನ ಎಸೆತದಲ್ಲೇ ಇವರು ಔಟ್ ಆದರು.
ಲಂಕಾ ನೀಡಿದ್ದ 3 ರನ್ಗಳ ಗುರಿಯನ್ನು ಬೆನ್ನಟ್ಟಿದ ಭಾರತ ವನಿಂದು ಹಸರಂಗ ಎಸೆದ ಮೊದಲ ಎಸೆತದಲ್ಲೇ 3 ರನ್ ಪಡೆದು ಬೀಗಿತು. ಈ ಮೂಲಕ ಫೈನಲ್ಗೂ ಮುನ್ನ ಆತ್ಮವಿಶ್ವಾಸ ಹೆಚ್ಚಿಕೊಂಡಿತು.