ವಿಜೇಂದರ್ ಸಿಂಗ್ ರಂತೆ ಆಗಲು ಬಯಸಿದ್ದ ಸರಣ್
ನಾನು ವಿಜೇಂದರ್ ಸಿಂಗ್ ಹಾಗೂ ಇತರೆ ಹರ್ಯಾಣದ ಬಾಕ್ಸರ್ ಗಳ ರೀತಿ ಆಗಲು ಬಯಸಿದ್ದೆ. ಇದಕ್ಕಾಗಿ ತಯಾರಿ ನಡೆದ್ದಿದೆ. ಎರಡು ವರ್ಷ ಭಿವಾನಿಯಲ್ಲಿದ್ದೆ. ಆದರೆ, ಕ್ರಿಕೆಟ್ ನನಗೆ ಎಲ್ಲವನ್ನು ನೀಡಿದೆ. ಬೌಲಿಂಗ್ ಬಗ್ಗೆ ಅರಿವಿರಲಿಲ್ಲ. ಎಂಎಸ್ ಧೋನಿ, ವಿರಾಟ್ ಕೊಹ್ಲಿ ಬಗ್ಗೆ ಕೇಳಿ ತಿಳಿದಿದ್ದೆ. ಆದರೆ, ಇಂದು ಅವರ ಜೊತೆ ಆಡುವ ವೃತ್ತಿ ಬದುಕು ಆರಂಭಿಸುವ ಅವಕಾಶ ಸಿಕ್ಕಿದ್ದು ನಿಜಕ್ಕೂ ನನ್ನ ಅದೃಷ್ಟ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸರಣ್ ಹೇಳಿದ್ದಾರೆ.
ಎಡಗೈ ವೇಗಿ ಆಗಿರುವುದು ಉತ್ತಮ ಅವಕಾಶ
ಎಡಗೈ ವೇಗಿಯಾಗಿರುವುದು ಅನುಕೂಲಕರ ಹಾಗೂ ಭಾರತ ತಂಡದಲ್ಲಿ ವೇಗಿಯಾಗಿ ಸೇರಿಕೊಳ್ಳಲು ನೆರವಾದ ಎಲ್ಲರಿಗೂ ನನ್ನ ಧನ್ಯವಾದ ಸಲ್ಲಿಸುತ್ತೇನೆ. ವೈವಿಧ್ಯಮಯ ಬೌಲಿಂಗ್ ಬಗ್ಗೆ ಗಮನ ಹರಿಸುತ್ತೇನೆ ಡಿಸೆಂಬರ್ 20, 2015ರಂದು ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾದ ಬಳಿಕ ಪ್ರತಿಕ್ರಿಯಿಸಿದ ಸರಣ್ ಅವರು ಜನವರಿ 12, 2016ರಂದು ಪರ್ತ್ ನಲ್ಲಿ ಏಕದಿನ ಕ್ರಿಕೆಟ್ ಗೆ ಎಂಟ್ರಿ ಕೊಟ್ಟಿದ್ದಾರೆ.
ರಾಹುಲ್ ದ್ರಾವಿಡ್ ಕಿವಿಮಾತು ಸ್ಪೂರ್ತಿದಾಯಕ
ರಾಹುಲ್ ದ್ರಾವಿಡ್ ಅವರು ನಾಯಕರಾಗಿ ನಂತರ ಕೋಚ್ ಆಗಿದ್ದ ಐಪಿಎಲ್ ತಂಡ ರಾಜಸ್ಥಾನ್ ರಾಯಲ್ಸ್ ಪರ ಆಡುವ ಬರಿಂದರ್ ಸರಣ್ ಬಗ್ಗೆ ಎದುರಾಳಿ ನಾಯಕ ಸ್ಟೀವ್ ಸ್ಮಿತ್ ಕೂಡಾ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ರಾಯಲ್ಸ್ ಪರ ಸ್ಮಿತ್ ಕೂಡಾ ಆಡುತ್ತಾರೆ ಎಂಬುದನ್ನು ನೆನಪಿಸಬೇಕಾಗಿಲ್ಲ. ಜೊತೆಗೆ ತಂಡದಲ್ಲಿದ್ದ ಟಿಮ್ ಸೌಥಿ, ಜೇಮ್ಸ್ ಫಾಲ್ಕ್ನರ್ ರಿಂದ ಸಾಕಷ್ಟು ಕಲಿತೆ. ದ್ರಾವಿಡ್ ಸರ್ ಅವರು ನನ್ನಲ್ಲಿ ಸದಾ ಆತ್ಮವಿಶ್ವಾಸ ಹೆಚ್ಚಿಸಿದರು ಎಂದಿದ್ದಾರೆ.
|
ಜ್ಯೂನಿಯರ್ ಜಹೀರ್ ಖಾನ್ ಎಂದ ಯುವಿ
ಬರಿಂದರ್ ಸರಣ್ ನೋಡಿದರೆ ಜ್ಯೂನಿಯರ್ ಜಹೀರ್ ಖಾನ್ ರಂತೆ ಕಾಣುತ್ತಾರೆ. ಅವರಿಗೆ ಶುಭವಾಗಲಿ ಎಂದ ಕ್ರಿಕೆಟರ್ ಯುವರಾಜ್ ಸಿಂಗ್.