ಮುಂಬೈ, ಏಪ್ರಿಲ್ 17: ಕೊರೊನಾವೈರಸ್ ವಿರುದ್ಧದ ಹೋರಾಟಕ್ಕೆ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ (ಸಿಸಿಐ) ಏಪ್ರಿಲ್ 17ರಂದು 51 ಲಕ್ಷ ರೂ. ದೇಣಿಗೆ ಘೋಷಿಸಿದೆ. ವೇಗವಾಗಿ ಹಬ್ಬುತ್ತಿರುವ ಮಾರಕ ಸೋಂಕನ್ನು ಹತ್ತಿಕ್ಕುವುದಕ್ಕಾಗಿ ಸಿಸಿಐ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ಹಣವನ್ನು ನೀಡಲಿದೆ.
ಕ್ರಿಕೆಟ್ ವೃತ್ತಿ ಜೀವನದ ಮೇಲೆ ರಾಹುಲ್ ದ್ರಾವಿಡ್ ದೊಡ್ಡ ಪ್ರಭಾವ: ಕರುಣ್ ನಾಯರ್
ಕೊರೊನಾವೈರಸ್ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡುವ ಸಲುವಾಗಿ ತನ್ನ ಸದಸ್ಯರಿಂದ 50 ಲಕ್ಷ ರೂ. ಹಣ ಸಂಗ್ರಹಿಸಿರುವುದಾಗಿ ಸಿಸಿಐ ಅಧ್ಯಕ್ಷ ಪ್ರೇಮಲ್ ಉದಾನಿ ಪಿಟಿಐಗೆ ತಿಳಿಸಿದ್ದಾರೆ. ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ ಸಹ ಸದಸ್ಯ ಆಗಿರುವ ಸಿಸಿಐ ಅದರ ಬ್ರಬೋರ್ನ್ ಸ್ಟೇಡಿಯಂನಲ್ಲಿ ಟೆಸ್ಟ್ ಮತ್ತು ಏಕದಿನ ಪಂದ್ಯಗಳಿಗೆ ಆತಿಥ್ಯ ವಹಿಸುತ್ತಿದೆ.
ಸಿಡಿದಿದ್ದ ಸಚಿನ್-ಸಿಧು: ಆವತ್ತು ಪಾಕ್ ವಿರುದ್ಧ ಭಾರತ ದಾಖಲೆ ಜಯ ಸಾಧಿಸಿತ್ತು!
'ಇನ್ನುಳಿದ 50 ಲಕ್ಷ ರೂ.ವನ್ನು ಸಮುದಾಯದ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತದೆ. ಕೆಲಸ ಇಲ್ಲದಿದ್ದರೂ ನಾವು ಪ್ರತಿ ಸಿಬ್ಬಂದಿಗೂ ಮತ್ತು ಎಲ್ಲಾ ಕೆಲಸಗಾರರಿಗೂ ವೇತನ ನೀಡಲಿದ್ದೇವೆ.' ಎಂದು ಉದಾನಿ ಮಾಹಿತಿ ನೀಡಿದ್ದಾರೆ.
ಆಸಿಸ್ ವಿರುದ್ಧದ ಐತಿಹಾಸಿಕ ಕೊಲ್ಕತ್ತಾ ಗೆಲುವಿನ ಡ್ರೆಸ್ಸಿಂಗ್ ರೂಮ್ ಸಂಭ್ರಮವನ್ನು ಹಂಚಿಕೊಂಡ ಗಂಗೂಲಿ: ವಿಡಿಯೋ
'ಅಲ್ಲದೆ ನಮಗೆ ಬಹಳಷ್ಟು ಮಾಜಿ ಸಿಬ್ಬಂದಿಗಳೂ ಇದ್ದಾರೆ. ಅವರ ಏರಿಯಾದಲ್ಲೆಲ್ಲಾ ನಾವು ದೇಣಿಗೆ ನೀಡಬೇಕಿದೆ,' ಎಂದು ಉದಾನಿ ಹೇಳಿದ್ದಾರೆ. ಭಾರತದಲ್ಲಿ ಕೊರೊನಾವೈರಸ್ ಸೋಂಕಿತರ ರಾಜ್ಯಗಳಲ್ಲಿ ಮಹಾರಾಷ್ಟ್ರದ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಅಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಸುಮಾರು 3000 ದಾಟಿದೆ.