
ಐರ್ಲೆಂಡ್ ಸರಣಿಗೆ ಪ್ರಕಟಿಸಲಾಗಿರುವ ಭಾರತ ತಂಡ
ಹಾರ್ದಿಕ್ ಪಾಂಡ್ಯ (ನಾಯಕ), ಭುವನೇಶ್ವರ್ ಕುಮಾರ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಇಶನ್ ಕಿಶನ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ರಾಹುಲ್ ತ್ರಿಪಾಠಿ, ದೀಪಕ್ ಹೂಡಾ, ವೆಂಕಟೇಶ್ ಅಯ್ಯರ್, ಅಕ್ಷರ್ ಪಟೇಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅವೇಶ್ ಖಾನ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್ , ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಾಲ್, ರವಿ ಬಿಷ್ಣೋಯ್.

ಈ ಆಟಗಾರರಿಗೆ ಆಯ್ಕೆಗಾರರ ಮನ ಗೆಲ್ಲಲು ಇದು ಸುವರ್ಣಾವಕಾಶ, ಯಾರಿಗೆ ಸಿಗಬಹುದು ಟಿಕೆಟ್?
ಇನ್ನು ಅನುಭವಿ ಆಟಗಾರರು ಇಂಗ್ಲೆಂಡ್ ಪ್ರವಾಸದಲ್ಲಿ ನಿರತರಾಗಿರುವ ಕಾರಣ ಯುವ ಆಟಗಾರರಿಗೆ ಮತ್ತು ಫಾರ್ಮ್ ಕಳೆದುಕೊಂಡಿರುವ ಕೆಲ ಆಟಗಾರರಿಗೆ ಈ ಸರಣಿಯಲ್ಲಿ ಅವಕಾಶ ಲಭಿಸಿದೆ. ಅದರಲ್ಲಿಯೂ ಪ್ರಮುಖವಾಗಿ ವಿಶ್ವಕಪ್ ತಂಡವನ್ನು ಪ್ರತಿನಿಧಿಸಬೇಕು ಎಂಬ ಛಲ ಹೊಂದಿರುವ ದಿನೇಶ್ ಕಾರ್ತಿಕ್, ಕಮ್ ಬ್ಯಾಕ್ ಮಾಡಿರುವ ಹಾರ್ದಿಕ್ ಪಾಂಡ್ಯ, ಚಹಾಲ್ ಮತ್ತು ಭುವನೇಶ್ವರ್ ಕುಮಾರ್ ಅವರಿಗೆ ಇದು ಸುವರ್ಣಾವಕಾಶವಾಗಿದ್ದು, ಯುವ ಆಟಗಾರರಿಗೂ ಆಯ್ಕೆಗಾರರ ಮನ ಗೆಲ್ಲಲು ಇದು ಒಳ್ಳೆಯ ಅವಕಾಶ ಎನ್ನಬಹುದು. ಇನ್ನು ಆಸ್ಟ್ರೇಲಿಯಾದಲ್ಲಿ ಮುಂದಿನ ಟಿ ಟ್ವೆಂಟಿ ವಿಶ್ವಕಪ್ ನಡೆಯುವುದರಿಂದ ಅಲ್ಲಿನ ನೆಲದಲ್ಲಿ ಉತ್ತಮವಾಗಿ ಬ್ಯಾಟ್ ಬೀಸುವ ಸಾಮರ್ಥ್ಯವಿರುವ ಸಂಜು ಸ್ಯಾಮ್ಸನ್ ಮೇಲೂ ಕೂಡ ಚೇತನ್ ಶರ್ಮಾ ಕಣ್ಣಿಡಲಿದ್ದು, ಸಂಜು ಸ್ಯಾಮ್ಸನ್ ಆಯ್ಕೆಗಾರರ ಮನ ಗೆಲ್ಲಬೇಕಿದೆ. ಹೀಗೆ ಈ ತಂಡದಲ್ಲಿರುವ ಬಹುತೇಕರು ಸರಣಿಯಲ್ಲಿ ಮಿಂಚಿ ಆಯ್ಕೆಗಾರರ ಮನ ಗೆಲ್ಲಲು ಪ್ರಯತ್ನಿಸಲಿದ್ದು, ಯಾವ ಆಟಗಾರರಿಗೆ ಟಿ ಟ್ವೆಂಟಿ ವಿಶ್ವಕಪ್ ತಂಡ ಪ್ರತಿನಿಧಿಸುವ ಅವಕಾಶ ಲಭಿಸಲಿದೆಯೋ ಕಾದು ನೋಡಬೇಕಿದೆ.

ಐರ್ಲೆಂಡ್ ತಂಡ
ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಹ್ಯಾರಿ ಟೆಕ್ಟರ್, ಗರೆಥ್ ಡೆಲಾನಿ, ಪಾಲ್ ಸ್ಟಿರ್ಲಿಂಗ್, ಕರ್ಟಿಸ್ ಕ್ಯಾಂಫರ್, ಸ್ಟೀಫನ್ ಡೊಹೆನಿ, ಲೋರ್ಕನ್ ಟಕರ್, ಮಾರ್ಕ್ ಅಡೇರ್, ಜಾರ್ಜ್ ಡಾಕ್ರೆಲ್, ಜೋಶುವಾ ಲಿಟಲ್, ಆಂಡಿ ಮೆಕ್ಬ್ರೈನ್, ಬ್ಯಾರಿ ಮೆಕಾರ್ಥಿ, ಕಾನರ್ ಓಲ್ಫರ್ಟ್, ಕ್ರೇಗ್ ಯಂಗ್.


Click it and Unblock the Notifications
