ಕೆರಿಬಿಯನ್ ಮತ್ತು ಯುನೈಟೆಡ್ ಸ್ಟೇಟ್ಸ್ನಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ತಮ್ಮ ವಿನಾಶಕಾರಿ ಅಭಿಯಾನದ ನಂತರ, ಶ್ರೀಲಂಕಾ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಸ್ಥಾನದಿಂದ ಕ್ರಿಸ್ ಸಿಲ್ವರ್ವುಡ್ ಕೆಳಗಿಳಿದ್ದಾರೆ.
ಕ್ರಿಸ್ ಸಿಲ್ವರ್ವುಡ್ ತನ್ನ ರಾಜೀನಾಮೆಗೆ 'ವೈಯಕ್ತಿಕ ಕಾರಣಗಳನ್ನು' ನೀಡಿದ್ದಾರೆ ಮತ್ತು ಮುಖ್ಯ ಕೋಚ್ ಆಗಿ ತೀವ್ರವಾದ ಕೆಲಸದ ನಂತರ, ತನ್ನ ಕುಟುಂಬ ಮತ್ತು ಪ್ರೀತಿಪಾತ್ರರ ಜೊತೆಗೆ 'ಗುಣಮಟ್ಟದ ಸಮಯವನ್ನು ಕಳೆಯಲು' ಬಯಸುತ್ತೇನೆ ಎಂದು ತಿಳಿಸಿದರು.

ಕ್ರಿಸ್ ಸಿಲ್ವರ್ವುಡ್ ಇಂಗ್ಲೆಂಡ್ ಪುರುಷರ ತಂಡದ ಮುಖ್ಯ ಕೋಚ್ ಆಗಿ ಮುಂದುವರೆದ ನಂತರ, ಏಪ್ರಿಲ್ 2022ರಲ್ಲಿ ಶ್ರೀಲಂಕಾ ತಂಡದ ಕೋಚಿಂಗ್ ಜವಾಬ್ದಾರಿಯನ್ನು ವಹಿಸಿಕೊಂಡರು. ಕ್ರಿಸ್ ಸಿಲ್ವರ್ವುಡ್ ಅವರ ಕೋಚಿಂಗ್ ಅಡಿಯಲ್ಲಿ ಶ್ರೀಲಂಕಾ ತಂಡವು 8 ಟೆಸ್ಟ್, 26 ಏಕದಿನ ಮತ್ತು 18 ಟಿ20 ಪಂದ್ಯಗಳನ್ನು ಗೆದ್ದಿದೆ.
ಸದ್ಯ ನಡೆಯುತ್ತಿರುವ ಟಿ20 ವಿಶ್ವಕಪ್ನಲ್ಲಿ ವನಿಂದು ಹಸರಂಗ ನಾಯಕತ್ವದ ಶ್ರೀಲಂಕಾ ತಂಡವು ಸೂಪರ್ 8ರ ಹಂತಕ್ಕೆ ಅರ್ಹತೆ ಪಡೆಯಲು ವಿಫಲವಾದ ನಂತರ ಕ್ರಿಸ್ ಸಿಲ್ವರ್ವುಡ್ ಮುಖ್ಯ ಕೋಚ್ ಹುದ್ದೆಯಿಂದ ಹಿಂದೆ ಸರಿಯಲು ನಿರ್ಧರಿಸಿದರು.
"ಅಂತಾರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿರುವುದು ಎಂದರೆ, ಪ್ರೀತಿಪಾತ್ರರಿಂದ ದೂರವಿರುವುದು ಎಂದರ್ಥ. ನನ್ನ ಕುಟುಂಬದೊಂದಿಗೆ ಸುದೀರ್ಘ ಸಂಭಾಷಣೆಯ ನಂತರ ಮತ್ತು ಭಾರವಾದ ಹೃದಯದಿಂದ, ನಾನು ಮನೆಗೆ ಮರಳಲು ನಯಸುತ್ತೇನೆ. ಕುಟುಂಬದ ಒಟ್ಟಿಗೆ ಕೆಲವು ಗುಣಮಟ್ಟದ ಸಮಯವನ್ನು ಕಳೆಯುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ," ಎಂದು ಕ್ರಿಸ್ ಸಿಲ್ವರ್ವುಡ್ ಅವರು ಶ್ರೀಲಂಕಾ ಕ್ರಿಕೆಟ್ (ಎಸ್ಎಲ್ಸಿ) ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ನಾನು ಶ್ರೀಲಂಕಾ ತಂಡದಲ್ಲಿದ್ದಾಗ ನೀಡಿದ ಬೆಂಬಲಕ್ಕಾಗಿ ಆಟಗಾರರು, ಕೋಚ್ಗಳು, ಬ್ಯಾಕ್ರೂಮ್ ಸಿಬ್ಬಂದಿ ಮತ್ತು ಶ್ರೀಲಂಕಾ ತಂಡದ ಮ್ಯಾನೇಜ್ಮೆಂಟ್ಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಿಮ್ಮ ಬೆಂಬಲವಿಲ್ಲದಿದ್ದರೆ, ಯಾವುದೇ ಯಶಸ್ಸು ಸಾಧ್ಯವಾಗುತ್ತಿರಲಿಲ್ಲ," ಎಂದಿದ್ದಾರೆ.
"ಶ್ರೀಲಂಕಾ ಕ್ರಿಕೆಟ್ನ ಭಾಗವಾಗಲು ನನಗೆ ನಿಜವಾದ ಗೌರವವಾಗಿದೆ ಮತ್ತು ನಾನು ಅನೇಕ ಅಚ್ಚುಮೆಚ್ಚಿನ ನೆನಪುಗಳನ್ನು ದೂರ ಮಾಡುತ್ತೇನೆ," ಎಂದು ಕ್ರಿಸ್ ಸಿಲ್ವರ್ವುಡ್ ಅಭಿಪ್ರಾಯಪಟ್ಟಿದ್ದಾರೆ.
2014ರ ಚಾಂಪಿಯನ್ ಶ್ರೀಲಂಕಾ ವಿಶ್ವಕಪ್ನಲ್ಲಿ ಉತ್ತಮ ಸಮಯವನ್ನು ಹೊಂದಿರಲಿಲ್ಲ. ಶ್ರೀಲಂಕಾ ತಮ್ಮ ಅಭಿಯಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತರು, ನಂತರ ಬಾಂಗ್ಲಾದೇಶದ ವಿರುದ್ಧವೂ ಸೋಲು ಅನುಭವಿಸಿದರು.
ಫ್ಲೋರಿಡಾದಲ್ಲಿ ಮಳೆಯಿಂದಾಗಿ ರೋಹಿತ್ ಪೌಡೆಲ್ ನಾಯಕತ್ವದ ನೇಪಾಳ ವಿರುದ್ಧದ ಪಂದ್ಯವನ್ನು ರದ್ದುಗೊಳಿಸಲಾಯಿತು. ಆ ಬಳಿಕ ನೆದರ್ಲ್ಯಾಂಡ್ಸ್ ತಂಡವನ್ನು ಸೋಲಿಸಿದರೂ, ಆ ವೇಳೆಗಾಗಲೇ ಪಂದ್ಯಾವಳಿಯಿಂದ ಹೊರಬಿದ್ದಿತ್ತು.
ಕಳೆದ ವರ್ಷ ಭಾರತ ತಂಡದಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲಿ ಲೀಗ್ ಹಂತದಲ್ಲೇ ಹೊರಬಿದ್ದ ಬಳಿಕ, ಶ್ರೀಲಂಕಾ ತಂಡವು 2025ರಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ.