
ಜೋಶಿ ನೇತೃತ್ವದ ಆಯ್ಕೆ ಸಮಿತಿಯಿಂದ ತಂಡ ಪ್ರಕಟ
ಮಾರ್ಚ್ ಹನ್ನೆರಡರಂದು ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ಸರಣಿಗೆ ಭಾರತ ತಂಡವನ್ನು ಭಾನುವಾರ (ಮಾ 8) ಅಹಮದಾಬಾದ್ ನಲ್ಲಿ ಜೋಶಿ ನೇತೃತ್ವದ ಸಮಿತಿ ಸಭೆ ಸೇರಿ, ಹದಿನೈದು ಆಟಗಾರರ ತಂಡವನ್ನು ಪ್ರಕಟಿಸಿತ್ತು. ಆ ವೇಳೆ, ಮುಂಬರುವ ಟಿ20 ವಿಶ್ವಕಪ್ ಅಥವಾ ಎಂ.ಎಸ್.ಧೋನಿ ಬಗ್ಗೆ ಯಾವ ಪ್ರಸ್ತಾವನೆಯೂ ಇರಲಿಲ್ಲ.

ಐಪಿಎಲ್ ನಿಗದಿತ ವೇಳೆಯಲ್ಲಿ ಆರಂಭವಾಗುವುದು ಅನುಮಾನ
ಈ ಮಾಸಾಂತ್ಯದಲ್ಲಿ ಆರಂಭವಾಗುವ ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಧೋನಿಯ ಪ್ರದರ್ಶನದ ಮೇಲೆ ಅವರ ಆಯ್ಕೆ ನಿಂತಿದೆ ಎಂದು ಹೇಳಲಾಗುತ್ತಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಐಪಿಎಲ್ ಟೂರ್ನಮೆಂಟ್ ನಿಗದಿತ ವೇಳೆಯಲ್ಲಿ ಆರಂಭವಾಗುವುದು ಅನುಮಾನ ಎನ್ನುವ ಸುದ್ದಿ ಹರಿದಾಡುತ್ತಿದೆ.

ಕೊರೊನೊ ವೈರಸ್ ಭೀತಿ
ವಿಶ್ವದಾದ್ಯಂತ ಕೊರೊನೊ ವೈರಸ್ ಭೀತಿ ಹೆಚ್ಚಾಗುತ್ತಿರುವುದರಿಂದ, ಐಪಿಎಲ್ ಮುಂದೂಡಲ್ಪಡುವ ಸಾಧ್ಯತೆಯಿಲ್ಲದಿಲ್ಲ. ಈಗಾಗಲೇ ಹಲವು ರಾಜ್ಯಗಳು ಈ ಟೂರ್ನಮೆಂಟ್ ಮುಂದೂಡುವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದೆ. ಬಹುದೊಡ್ಡ ಮತ್ತು ದೀರ್ಘಾವಧಿಗೆ ಈ ಕ್ರಿಕೆಟ್ ಟೂರ್ನಿ ನಡೆಯುವುದರಿಂದ, ಮುಂಜಾಗೃತಾ ಕ್ರಮವಾಗಿ ಐಪಿಎಲ್ ಮುಂದಕ್ಕೆ ಹೋಗುವ ಸಾಧ್ಯತೆಯಿದೆ.

ಐಪಿಎಲ್ ಮತ್ತು ಧೋನಿಯ ಭವಿಷ್ಯ ಕೂಡಾ ನಿಂತಿದೆ
ಒಂದು ವೇಳೆ ಈ ಟೂರ್ನಮೆಂಟ್ ಮುಂದಕ್ಕೆ ಹೋದರೆ, ಐಪಿಎಲ್ ಪ್ರದರ್ಶನವೇ ಧೋನಿಗೆ ಪ್ರಮುಖವಾಗಿರುವಾಗ, ರಾಂಚಿ ಆಟಗಾರನ ಭವಿಷ್ಯ ಐಪಿಎಲ್ ಮೇಲೆ ನಿಂತಿದೆ. ಐಪಿಎಲ್ ಆರಂಭವಾಗಲು ಇನ್ನೂ ಎರಡು ವಾರ ಇರುವುದರಿಂದ, ಈ ವೈರಸ್ ಭೀತಿ ಯಾವ ರೀತಿ ಹರಡಲಿದೆ ಎನ್ನುವುದರ ಮೇಲೆ ಐಪಿಎಲ್ ಮತ್ತು ಧೋನಿಯ ಭವಿಷ್ಯ ಕೂಡಾ ನಿಂತಿದೆ.


Click it and Unblock the Notifications
