ನಾಲ್ಕು ದೂರುಗಳು ಬಂದಿದ್ದವು
'ಗಂಗೂಲಿ ಕುಟುಂಬದ ನಾಲ್ವರೂ ಕೆಲವು ಆರೋಗ್ಯ ಸಮಸ್ಯೆಗಳ ಬಗ್ಗೆ ದೂರು ನೀಡಿದ್ದರು. ಈ ದೂರುಗಳು COVID-19ನ ರೋಗಲಕ್ಷಣಗಳನ್ನು ಹೋಲುತ್ತದೆ. ಆದರೆ ಅವರು ಮತ್ತೊಂದು ನಿವಾಸದಲ್ಲಿದ್ದಾಗ ಈ ದೂರುಗಳು ಬಂದಿದ್ದವೇ ಹೊರತು ಬೆಹಾಲಾದ ಗಂಗೂಲಿಯ ಪೂರ್ವಜರ ಮನೆಯಲ್ಲಿ ಇದ್ದಾಗ ಅಲ್ಲ,' ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮೂವರು ಆಸ್ಪತ್ರೆಗೆ ದಾಖಲು
ಕೊರೊನಾ ಪರೀಕ್ಷೆ ನಡೆಸಿದ ಗಂಗೂಲಿ ಕುಟುಂಬಸ್ಥರಲ್ಲಿ ಮೂವರಿಗೆ (ಗಂಗೂಲಿ ಸಹೋದರ ಸ್ನೇಹಸಿಶ್ ಪತ್ನಿಗೆ ಮತ್ತು ಪತ್ನಿಯ ಹೆತ್ತವರಿಗೆ) ಸೋಂಕು ತಗುಲಿದ್ದು, ಅವರು ಖಾಸಗಿ ನರ್ಸಿಂಗ್ ಹೋಮ್ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂದ್ಹಾಗೆ, ಸ್ನೇಹಶಿಶ್ ಸದ್ಯ ಕ್ರಿಕೆಟ್ ಅಸೋಸಿಯೇಶನ್ ಆಫ್ ಬೆಂಗಾಲ್ (ಸಿಎಬಿ) ಕಾರ್ಯದರ್ಶಿಯಾಗಿದ್ದಾರೆ.
ಪರೀಕ್ಷೆಯ ಮೇಲೆ ನಿರ್ಧರಿಸಲಾಗುತ್ತದೆ
'ಸೋಂಕಿಗೀಡಾದವರ ಹೆಚ್ಚಿನ ಪರೀಕ್ಷೆಗಳನ್ನು ಶನಿವಾರ ಮಾಡಲಾಗುವುದು, ಅದರ ಆಧಾರದ ಮೇಲೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕೆ ಅಥವಾ ಬೇಡವೇ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 'ಅವರನ್ನು ಬಿಡುಗಡೆ ಮಾಡಲಾಗುತ್ತದೆಯೋ ಇಲ್ಲವೋ ಎಂಬುದು ಪರೀಕ್ಷೆಗಳ ಫಲಿತಾಂಶವನ್ನು ಅವಲಂಬಿಸಿರುತ್ತದೆ,' ಎಂದು ನರ್ಸಿಂಗ್ಹೋಮ್ನ ಅಧಿಕಾರಿಗಳು ಹೇಳಿದ್ದಾರೆ.
ಕೊರೊನಾ ವಿರುದ್ಧ ಸಹಾಯ ನೀಡಿದ್ದ ದಾದ
ದಾದಾ ಗಂಗೂಲಿ, ಕೊರೊನಾವೈರಸ್ ಭಾರತದಲ್ಲಿ ಹಬ್ಬಲಾರಂಭಿಸಿದಾಗಿನಿಂದಲೂ ಸಾಮಾಜಿಕವಾಗಿ ಸಹಾಯ ನೀಡುತ್ತಾ ಬಂದಿದ್ದಾರೆ. 50 ಲಕ್ಷ ರೂ. ದೇಣಿಗೆ ನೀಡಿದ್ದ ಗಂಗೂಲಿ, ಅಕ್ಕಪಕ್ಕದ ಊರಿನ ಬಡವರಿಗೆ 2000 ಕೆಜಿ ಅಕ್ಕಿ ವಿತರಿಸಿದ್ದರು. ಜೂನ್ 20ರ ಶನಿವಾರದ ವೇಳೆಗೆ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,95,048ಕ್ಕೆ ಏರಿತ್ತು.