
ಕೇರಳ ಮೂಲದ ಬೆಂಗಳೂರು ನಿವಾಸಿ
ಕೇರಳ ಮೂಲ: ರಾಜಸ್ಥಾನದ ಜೋಧ್ ಪುರ್ ದಲ್ಲಿ ಜನಿಸಿ, ಕರ್ನಾಟಕದ ಪರ ರಣಜಿ ಆಡುವ ಕರುಣ್ ನಾಯರ್ ಅವರ ಕುಟುಂಬದ ಮೂಲ ಕೇರಳದ ಆಳಪುಳ ಜಿಲ್ಲೆಯ ಚೆಂಗನೂರ್.
ಮೈದಾನದಲ್ಲಿ ಉಪಸ್ಥಿತರಿದ್ದ ಕರುಣ್ ಅವರ ತಂದೆ, ತಾಯಿ
ಮೈದಾನದಲ್ಲಿ ಉಪಸ್ಥಿತರಿದ್ದ ಕರುಣ್ ಅವರ ತಂದೆ, ತಾಯಿ, ಪಂದ್ಯದ ನಂತರ ಕರುಣ್ ರನ್ನು ಭೇಟಿ ಮಾಡದೆ ಹೋಟೆಲ್ ರೂಮಿನಲ್ಲೇ ಸಂಭ್ರಮಿಸುವುದಾಗಿ ಹೇಳಿದರು. ಕರುಣ್ ಜತೆ ಸಹ ಆಟಗಾರರು ಸಂಭ್ರಮಾಚರಣೆಯಲ್ಲಿ ತೊಡಗಲು ಅವಕಾಶ ಸಿಗಲಿ ಎಂಬುದು ನಮ್ಮ ಉದ್ದೇಶ ಎಂದು ಕರುಣ್ ಅವರ ತಂದೆ ಹೇಳಿದರು.

ದುರಂತದಿಂದ ಪಾರಾಗಿದ್ದ ಕರುಣ್
ಜುಲೈ ತಿಂಗಳಲ್ಲಿ ಕೇರಳದಲ್ಲಿ ಶ್ರೀ ಪಾರ್ಥ ಸಾರಥಿ ದೇಗುಲ 'ವಲ್ಲ ಸದ್ಯ' ಸಂಭ್ರಮಾಚರಣೆ ವೇಳೆಯಲ್ಲಿ ಕರುಣ್ ಹಾಗೂ 100 ಜನರಿದ್ದ ದೋಣಿ ಮಗುಚಿಕೊಂಡಿತ್ತು. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗದಂತೆ ಸ್ಥಳೀಯರು ರಕ್ಷಣೆ ಮಾಡಿದ್ದರು.
'ಐದು ವರ್ಷಗಳ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಉತ್ತಮ ಸಾಧನೆ ತೋರಿದ್ದಾನೆ. ರಣಜಿಯಲ್ಲಿ ಎರಡು ವರ್ಷ ತೋರಿದ ಸಾಧನೆ ಇಂದು ಈ ಮಟ್ಟಕ್ಕೆ ಅವನನ್ನು ಬೆಳೆಸಿದೆ' ಎಂದು ನಾಯರ್ ಹೇಳಿದರು.
ಕೇರಳದ ಸಂಪರ್ಕವುಳ್ಳ ಇತರೆ ಆಟಗಾರರು
ಇಲ್ಲಿ ತನಕ ಟಿನು ಯೋಹನನ್ ಹಾಗೂ ಎಸ್ ಶ್ರೀಶಾಂತ್ ಮಾತ್ರ ಕೇರಳ ಮೂಲದ ಆಟಗಾರರು ಟೆಸ್ಟ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಉಳಿದಂತೆ ಸುನಿಲ್ ವಿಲ್ಸನ್, ಅಜಯ್ ಜಡೇಜ ಹಾಗೂ ಅಬೇ ಕುರುವಿಲ್ಲಾ ಅವರು ಕೇರಳದ ಸಂಪರ್ಕವುಳ್ಳ ಇತರೆ ಆಟಗಾರರಾಗಿದ್ದಾರೆ
ಪೋಷಕರ ಜತೆ ಸಂಭ್ರಮದಲ್ಲಿ ಕರುಣ್ ನಾಯರ್
ಪೋಷಕರ ಜತೆ ಸಂಭ್ರಮದಲ್ಲಿರುವ ಕರುಣ್ ನಾಯರ್, ಆರ್ ಅಶ್ವಿನ್ ಕೂಡಾ ಶುಭ ಹಾರೈಸಲು ಬಂದಿದ್ದು ವಿಶೇಷ.


Click it and Unblock the Notifications











