ನವದೆಹಲಿ, ಜುಲೈ 25 : ಐಸಿಸಿ ಮಹಿಳಾ ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ತೋರಿರುವ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಹರ್ಮನ್ ಪ್ರೀತ್ ಕೌರ್ ಗೆ ಡಿಸಿಪಿ ಹುದ್ದೆ ಆಫರ್ ಬಂದಿದೆ.
ಸದ್ಯ ಪಶ್ಚಿಮ ರೈಲ್ವೆ ಇಲಾಖೆಯ ಮುಂಬೈ ರೈಲ್ವೆ ವಿಭಾಗದ ಮುಖ್ಯ ಕಚೇರಿಯಲ್ಲಿ ಅಧೀಕ್ಷಕರಾಗಿರುವ ಹರ್ಮನ್ ಕೌರ್ ಗೆ ಇದೀಗ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅಭಿನಂದನೆಗಳನ್ನು ತಿಳಿಸಿ ಡಿಸಿಪಿ ಹುದ್ದೆ ನೀಡುವುದಾಗಿ ಟ್ವೀಟ್ ಮಾಡಿದ್ದಾರೆ.

ಲಂಡನ್ ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಸೆಣೆಸಿತ್ತು. ಆದರೆ 9 ರನ್ ಗಳ ಅಂತರದಲ್ಲಿ ಸೋತು ಭಾರತ ತಂಡ ನಿರಾಸೆ ಮೂಡಿಸಿತ್ತು.
ಈ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದು ತಂಡವನ್ನು ಗೆಲುವಿನ ದಡ ಮುಟ್ಟಿಸಲು ಕಠಿಣ ಶ್ರಮ ವಹಿಸಿದ್ದರು.