
ಕಲಾಂ ಅವರು ಭಾರತಕ್ಕೆ ಸ್ಪೂರ್ತಿ
ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ವಿರಾಟ್ ಕೊಹ್ಲಿ, ವಿವಿಎಸ್ ಲಕ್ಷ್ಮಣ್, ಬಿಷನ್ ಸಿಂಗ್ ಬೇಡಿ, ಸುರೇಶ್ ರೈನಾ, ಆರ್ ಅಶ್ವಿನ್, ವಿನಯ್ ಕುಮಾರ್ ಸೇರಿದಂತೆ ಹಲವಾರು ಕ್ರಿಕೆಟರ್ಸ್ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರಿಂದ ಟ್ವೀಟ್
ಸಚಿನ್ ತೆಂಡೂಲ್ಕರ್ ಅವರು ಟ್ವೀಟ್ ಮಾಡಿ, ರಾಷ್ಟ್ರಪತಿ, ವಿಜ್ಞಾನಿ, ಶ್ರೇಷ್ಠ ಮಾನವತಾವಾದಿ ಎಂದಿದ್ದಾರೆ.
ವಿರಾಟ್ ಕೊಹ್ಲಿಯಿಂದ ಟ್ವೀಟ್
ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಟ್ವೀಟ್ ಮಾಡಿ ಕಲಾಂ ಅವರು ನಮಗೆಲ್ಲ ಮಾದರಿ ವ್ಯಕ್ತಿಯಾಗಿದ್ದರು ಎಂದಿದ್ದಾರೆ.
ಅನಿಲ್ ಕುಂಬ್ಳೆ ಅವರಿಂದ ಟ್ವೀಟ್
ಮಾಜಿ ಕ್ರಿಕೆಟರ್ ಅನಿಲ್ ಕುಂಬ್ಳೆ ಅವರು ಟ್ವೀಟ್ ಮಾಡಿ, ದೇಶದ ಲಕ್ಷಾಂತರ ಮಂದಿಗೆ ನೀವು ಸ್ಪೂರ್ತಿಯಾಗಿದ್ದೀರಿ ಎಂದಿದ್ದಾರೆ.
ಕಲಾಂ ಅವರ ಕನಸು ನನಸು ಮಾಡೋಣ
ಕಲಾಂ ಅವರು ಕಂಡ ವಿಷನ್ 2020 ಕನಸು ನನಸು ಮಾಡೋಣ ಎಂದ ಸ್ಪಿನ್ನರ್ ಆರ್ ಅಶ್ವಿನ್.
ಮಗುವಿನಂಥ ಕುತೂಹಲ ಹೊಂದಿದ್ದ ವ್ಯಕ್ತಿ
ಕಲಾಂ ಅವರು ಮಗುವಿನಂಥ ಕುತೂಹಲ ಹೊಂದಿದ್ದ ವ್ಯಕ್ತಿಯಾಗಿದ್ದರು. ಯಶಸ್ಸಿನ ಸೂತ್ರ ಏನು ಎಂದು ಕೇಳಿದರೆ, hard work, hard work ಎಂದರು.
ಮಾಜಿ ಕ್ರಿಕೆಟರ್ ವಿವಿಎಸ್ ಲಕ್ಷ್ಮಣ್ ಟ್ವೀಟ್
ಮಾಜಿ ಕ್ರಿಕೆಟರ್ ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿ ಜ್ಞಾನವನ್ನು ಯುವ ಜನತೆಗೆ ಹಂಚಿದ ಮಹಾನ್ ಗುರು ಎಂದಿದ್ದಾರೆ.
ಕಲಾಂ ನಿಧನ, ತುಂಬಲಾರದ ನಷ್ಟ: ವಿನಯ್
ಕಲಾಂ ಅವರ ನಿಧನ, ತುಂಬಲಾರದ ನಷ್ಟ ಎಂದು ಕರ್ನಾಟಕದ ನಾಯಕ ವಿನಯ್ ಕುಮಾರ್ ಅವರು ಕಂಬನಿ ಮಿಡಿದಿದ್ದಾರೆ.
ಕಲಾಂ ಅವರ ಉಕ್ತಿಗಳ ಟ್ವೀಟ್
ಕಲಾಂ ಅವರ ಸ್ಪೂರ್ತಿದಾಯಕ ಉಕ್ತಿಯನ್ನೊಂದು ಟ್ವೀಟ್ ಮಾಡಿದ ಆಶೋಕ್ ಚೋಪ್ರಾ.
ಕನಸು ಕಾಣಿ ಎಂದ ಮಹಾನ್ ಗುರು
ಸದಾ ಕನಸು ಕಾಣಿ ಎಂದ ಮಹಾನ್ ಗುರು ಎಂದು ಬಣ್ಣಿಸಿದ ಮಾಜಿ ಕ್ರಿಕೆಟರ್ ಸಂಜಯ್ ಮಂಜೇಕ್ರರ್.
ಭಾರತದ ನಿಜವಾದ ರತ್ನವಾಗಿದ್ದ ಕಲಾಂ
ಭಾರತದ ನಿಜವಾದ ರತ್ನವಾಗಿದ್ದ ಕಲಾಂ ಅವರ ನಿಧನ ತುಂಬಲಾರದ ನಷ್ಟ ಎಂದ ಶ್ರೀಶಾಂತ್.


Click it and Unblock the Notifications











