|
ಬಲಿಪಶು ಆಗುವ ಮೊದಲು
ಎಬಿಡಿ ಅವರ ನಿರ್ಧಾರವನ್ನು ಗೌರವಿಸುತ್ತೇನೆ. ತಮ್ಮ ನಿರ್ಧಾರವನ್ನು ಯಾವಾಗ ತೆಗೆದುಕೊಳ್ಳಬೇಕು ಎನ್ನುವುದು ಮಹಾನ್ ವ್ಯಕ್ತಿಗಳಿಗೆ ತಿಳಿದಿರುತ್ತದೆ. ಕೆಟ್ಟ ಸಮಯ ಅಥವಾ ಹೊಟ್ಟೆಕಿಚ್ಚಿನ ಜನರಿಗೆ ಬಲಿಪಶುವಾಗಿ ಹೊರಡುವಂತಾಗುವ ಮೊದಲು ನೀವು ಏನು ಮಾಡುತ್ತಿದ್ದೀರೋ ಅದರ ಔನ್ನತ್ಯದಲ್ಲಿ ಇರುವಾಗಲೇ ಹೊರಡುವುದು ಸೂಕ್ತ ಎಂದು 'ದಿ ವಾಲ್' ರಾಹುಲ್ ದ್ರಾವಿಡ್, ಎಬಿಡಿ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
|
360 ಡಿಗ್ರಿ ಸಕ್ಸಸ್ ಸಿಗಲಿ
ಕ್ರೀಡಾಂಗಣದಲ್ಲಿನ ನಿಮ್ಮ ಆಟದಂತೆಯೇ ಮೈದಾನದಾಚೆಗೂ ನಿಮಗೆ 360 ಡಿಗ್ರಿ ಸಕ್ಸಸ್ ಸಿಗಲಿ. ನಿಮ್ಮನ್ನು ಖಂಡಿತಾ ಮಿಸ್ ಮಾಡಿಕೊಳ್ಳುತ್ತೇವೆ. ನನ್ನ ಶುಭ ಹಾರೈಕೆ ನಿಮಗೆ ಎಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹಾರೈಸಿದ್ದಾರೆ.
|
ಕ್ರಿಕೆಟ್ ಬಡವಾಗಲಿದೆ
ಜಗತ್ತಿನ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗನಿಗೆ ಅದ್ಭುತ ಕ್ರೀಡಾ ಬದುಕಿಗಾಗಿ ಶುಭಾಶಯಗಳು. ನೀವಿಲ್ಲದೆ ಅಂತರರಾಷ್ಟ್ರೀಯ ಕ್ರಿಕೆಟ್ ಬಡವಾಗಲಿದೆ. ಆದರೆ ಜಗತ್ತಿನಾದ್ಯಂತ ಕ್ರಿಕೆಟ್ ಅಭಿಮಾನಿಗಳು ನಿಮ್ಮ ಆರಾಧನೆಯನ್ನು ಮುಂದುವರಿಸುತ್ತಾರೆ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
|
ಕ್ರಿಕೆಟ್ ಉತ್ಕೃಷ್ಟಗೊಳಿಸಿದವರು
ಅದ್ಭುತ ಕ್ರಿಕೆಟ್ ಜೀವನ ನಡೆಸಿದ್ದಕ್ಕೆ ಎಬಿ ಡಿವಿಲಿಯರ್ಸ್ ನಿಮಗೆ ಶುಭಾಶಯಗಳು. ನಿಮ್ಮ ಸಾಮರ್ಥ್ಯ, ಹಾಜರಿ ಮತ್ತು ನಡತೆಯಿಂದ ಈ ಆಟವನ್ನು ಉತ್ಕೃಷ್ಟಗೊಳಿಸಿದ್ದೀರಿ. ಮಹತ್ವಾಕಾಂಕ್ಷಿ ಕ್ರಿಕೆಟಿಗರಿಗೆ ನೀವು ಮಾದರಿ ವ್ಯಕ್ತಿಯಾಗುವುದು ಮುಂದುವರಿಯಲಿದೆ. ನಿವೃತ್ತಿ ನಂತರದ ಬದುಕಿಗೆ ಶುಭವಾಗಲಿ ಎಂದು ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿದ್ದಾರೆ.
|
ಕ್ರಿಕೆಟ್ನ ಫೆಡರರ್
ಕ್ರಿಕೆಟ್ನ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಮಹೋನ್ನತ ಕ್ರೀಡಾಜೀವನ ನಡೆಸಿದ್ದಕ್ಕೆ ಶುಭಾಶಯಗಳು. ಕ್ರಿಕೆಟ್ನ ಫೆಡರರ್, ಈ ಗ್ರಹದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ. ನಿಮ್ಮ ಭವಿಷ್ಯದ ಬದುಕಿಗೆ ಶುಭ ಹಾರೈಕೆಗಳು ಎಂದು ಮೊಹಮ್ಮದ್ ಕೈಫ್ ಹೇಳಿದ್ದಾರೆ.
|
ಆಘಾತಕಾರಿ ನಿರ್ಧಾರ
ಅಂತರರಾಷ್ಟ್ರೀಯ ಕ್ರಿಕೆಟ್ಗೆ ಎಬಿ ಡಿವಿಲಿಯರ್ಸ್ ವಿದಾಯ ಹೇಳಲು ನಿರ್ಧರಿಸಿರುವುದನ್ನು ಕೇಳಿ ಆಘಾತವಾಗಿದೆ. ಆದರೆ ಇದು ಕೇವಲ ಬದುಕು. ಅವರಿಗೆ ವಿದಾಯ ಹೇಳಬೇಕು ಎಂದೆನಿಸಿದೆ. ಪಂದ್ಯ ಗೆಲ್ಲಿಸುವ ಅಚ್ಚರಿದಾಯಕ ಆಟಗಳಿಗಾಗಿ, ಕುಶಲ ನಾಯಕ ಮತ್ತು ವಿನಮ್ರತೆಯ ಮಹಾನ್ ಆಟಗಾರನಿಗೆ ಧನ್ಯವಾದಗಳು ಎಂದು ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಅಲನ್ ಡೊನಾಲ್ಡ್ ಹೇಳಿದ್ದಾರೆ.
|
ಹಲವು ನೆನಪುಗಳಿಗೆ ಧನ್ಯವಾದ
ಅನೇಕ ನೆನಪುಗಳಿಗೆ ಧನ್ಯವಾದಗಳು ಎಬಿ ಡಿವಿಲಿಯರ್ಸ್. ಬ್ಯಾಟಿಂಗ್ ಅಷ್ಟೊಂದು ಸುಲಭ ಎಂದು ಕಾಣುವಂತೆ ಮಾಡಿದ್ದಕ್ಕೆ, ಎಲ್ಲ ಹೊಸ ಬಗೆಯ ಆಟವನ್ನು ಸಾಧ್ಯವಾಗಿಸಿರುವುದಕ್ಕೆ ಧನ್ಯವಾದಗಳು. ಶ್ರೇಷ್ಠ ಆಟಕ್ಕಾಗಿ ಶುಭಾಶಯಗಳು. ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ಎಂದು ಕರ್ನಾಟಕ ತಂಡದ ಆಟಗಾರ ಮಯಂಕ್ ಅಗರ್ವಾಲ್ ಬೇಸರದಿಂದ ಹೇಳಿದ್ದಾರೆ.
|
ಬೆಂಗಳೂರಿಗೆ ಮರಳಬೇಕು
ಅನಿರೀಕ್ಷಿತ, ಆದರೆ ಈ ನಿರ್ಧಾರದ ಹಿಂದೆ ಸಾಕಷ್ಟು ಗಾಢವಾದ ಆಲೋಚನೆ ಮತ್ತು ಚಿಂತನೆ ಇರುತ್ತದೆ ಎಂಬ ಭರವಸೆ ನಮಗಿದೆ. ನೀವು 2019ರಲ್ಲಿ ಮತ್ತೆ ಬೆಂಗಳೂರಿಗೆ ಮರಳಬೇಕು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶುಭ ಹಾರೈಸಿದೆ.