ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಪಂದ್ಯದ ಹಣವನ್ನು ಯೋಧರ ಕುಟುಂಬಗಳಿಗೆ ನೀಡಲಿದೆ ಸಿಎಸ್‌ಕೆ

ಐಪಿಎಲ್ ಪಂದ್ಯದ ಹಣವನ್ನು ಯೋಧರ ಕುಟುಂಬಗಳಿಗೆ ನೀಡಲಿದೆ ಸಿಎಸ್‌ಕೆ..!? | Oneindia Kannada
CSK to donate proceeds from first match to families of Pulwama attack victims

ಚೆನ್ನೈ, ಮಾರ್ಚ್ 21: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ಈ ಬಾರಿಯ ಐಪಿಎಲ್ ಆರಂಭಿಕ ಪಂದ್ಯದ ಸಂಭಾವನೆಯನ್ನು ಪುಲ್ವಾಮಾ ದಾಳಿಯಲ್ಲಿ ಅಸುನೀಗಿದ ಭಾರತೀಯ ಯೋಧರ ಕುಟುಂಬಗಳಿಗೆ ನೀಡಲು ನಿರ್ಧರಿಸಿದೆ.

ಆಸೀಸ್ ವಿರುದ್ಧ ಭಾರತ ಏಕದಿನ ಸರಣಿ ಸೋತಿದ್ದು ಒಳ್ಳೇದೆ ಆಯ್ತು: ದ್ರಾವಿಡ್ಆಸೀಸ್ ವಿರುದ್ಧ ಭಾರತ ಏಕದಿನ ಸರಣಿ ಸೋತಿದ್ದು ಒಳ್ಳೇದೆ ಆಯ್ತು: ದ್ರಾವಿಡ್

ಮಾರ್ಚ್ 23ರಂದು ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಡಲಿವೆ. ಈ ಪಂದ್ಯದ ಗಳಿಕೆಯನ್ನು ಸಿಎಸ್‌ಕೆ ಮೃತ ಸೈನಿಕರ ಕುಟುಂಬಗಳಿಗೆ ನೀಡಲಿದೆ. ಸಿಎಸ್‌ಕೆ ನಾಯಕ ಎಂಎಸ್ ಧೋನಿ ಚೆಕ್ ವಿತರಿಸಲಿದ್ದಾರೆ.

'ಚೆನ್ನೈನಲ್ಲಿ ನಡೆಯಲಿರುವ ಐಪಿಎಲ್ ಆರಂಭಿಕ ಪಂದ್ಯದ ಟಿಕೆಟ್ ಹಣ ಪುಲ್ವಾಮಾ ದಾಳಿಯಲ್ಲಿ ಸಾವನ್ನಪ್ಪಿದ ಯೋಧರ ಕುಟುಂಬಗಳಿಗೆ ತಲುಪಲಿದೆ.ಸಿಎಸ್‌ಕೆ ನಾಯಕ, ಭಾರತ ಪ್ರಾದೇಶಿಕ ಸೇನೆಯ ಗೌರವ ಲೆಫ್ಟಿನೆಂಟ್ ಕೊಲೊನೆಲ್ ಆಗಿರುವ ಎಂಎಸ್ ಧೋನಿ ಚೆಕ್ ವಿತರಿಸಲಿದ್ದಾರೆ' ಎಂದು ಸಿಎಸ್‌ಕೆ ನಿರ್ದೇಶಕ ರಾಕೇಶ್ ಸಿಂಗ್ ಟ್ವಿಟರ್ ಮೂಲಕ ತಿಳಿಸಿದ್ದಾರೆ.

ಕೊಹ್ಲಿ ನಾಯಕತ್ವದ ಆರ್‌ಸಿಬಿಗೆ ಭೀತಿಯೊಡ್ಡುವಂತಿದೆ ಧೋನಿ ಅಂಕಿ-ಅಂಶಗಳು!ಕೊಹ್ಲಿ ನಾಯಕತ್ವದ ಆರ್‌ಸಿಬಿಗೆ ಭೀತಿಯೊಡ್ಡುವಂತಿದೆ ಧೋನಿ ಅಂಕಿ-ಅಂಶಗಳು!

ಐಪಿಎಲ್ 12ನೇ ಆವೃತ್ತಿಯ ಆರಂಭಿಕ ಪಂದ್ಯದ ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದ ಟಿಕೆಟ್ ಹಣವನ್ನು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಫೆಬ್ರವರಿ 14ರಂದು ನಡೆದಿದ್ದ ಉಗ್ರರ ದಾಳಿಯಲ್ಲಿ ಮೃತರಾದ ಭಾರತೀಯ ಸೈನಿಕರ ಕುಟುಂಬಗಳಿಗೆ ಚೆನ್ನೈ ತಂಡ ನಿರ್ಧರಿಸಿದೆ.

Story first published: Thursday, March 21, 2019, 12:26 [IST]
Other articles published on Mar 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X