ಚೆಂಡು ವಿರೂಪ ಪ್ರಕರಣದ ದೋಷಿ ಡೇವಿಡ್ ವಾರ್ನರ್ ಆಸ್ಟ್ರೇಲಿಯಾ ಕ್ರಿಕೆಟ್ನಿಂದ ಒಂದು ವರ್ಷದ ಅವಧಿಗೆ ನಿಷೇಧ ಹೊಂದಿದ ಬೆನ್ನಲ್ಲೆ ಈಗ ವಿಶ್ವ ಕ್ರಿಕೆಟ್ನಿಂದ ದೂರ ಉಳಿಯುವ ನಿರ್ಣಯ ತಳೆದಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿದ ಅವರು ಚೆಂಡು ವಿರೂಪ ಪ್ರಕರಣದಲ್ಲಿ ನನ್ನ ಹಸ್ತಕ್ಷೇಪವನ್ನು ನಾನು ಸಂಪೂರ್ಣ ಒಪ್ಪಿಕೊಳ್ಳುತ್ತೇನೆ, ಹಾಗೂ ನನ್ನ ಕಡೆಯಿಂದ ಆಗಿರುವ ತಪ್ಪಿಗೆ ಬೇಷರತ್ ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಣ್ಣೀರು ಹಾಕಿದ ಅವರು, ಆಸ್ಟ್ರೇಲಿಯಾಕ್ಕಾಗಿ ಆಡಬೇಕೆಂಬುದು ನನ್ನ ಬಹು ದಿನಗಳ ಕನಸಾಗಿತ್ತು, ಆದರೆ ಇನ್ನು ಅದು ಸಾಧ್ಯವಿಲ್ಲ ಎನಿಸುತ್ತಿದೆ, ನಾನು ಇನ್ನು ಮುಂದೆ ದೇಶಕ್ಕಾಗಿ ಆಡುವ ಅವಕಾಶ ಕಳೆದುಕೊಂಡಿದ್ದೇನೆ ಎಂದ ಅವರು, ವಿಶ್ವಕ್ರಿಕೆಟ್ನಿಂದ ಹೊರ ಬಂದಿದ್ದಾರೆ.
ದಕ್ಷಿಣ ಆಫ್ರಿಕಾ ಆಟಗಾರರಲ್ಲಿ, ವಿಶ್ವ ಕ್ರಿಕೆಟ್ ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ಅವರು, ನಾನು ಜೀವನಪರ್ಯಂತ ಈ ತಪ್ಪಿಗಾಗಿ ಪಶ್ಚಾತಾಪ ಪಡುತ್ತೇನೆ ಎಂದಿದ್ದಾರೆ.