
ಯಾರೂ ಪ್ರಶ್ನಿಸುವಂತಿಲ್ಲ
ಕ್ರೀಡಾಭಿಮಾನಿಗಳ, ಕ್ರೀಡಾ ಪರಿಣಿತರ ಅಭಿಪ್ರಾಯವನ್ನು ಅಲ್ಲಗೆಳೆದಿರುವ ಎಡುಲ್ಜಿ ನಡೆ, ತಂಡ ನಿರ್ವಹಣಾ ಸಮಿತಿಗೆ ಗುರಾಣಿ ಹಿಡಿಯುತ್ತಿದ್ದಾರೋ ಅನ್ನೋ ಅನುಮಾನಕ್ಕೀಡುಮಾಡುವಂತಿದೆ. ಯಾಕೆಂದರೆ ತಂಡ ನಿರ್ವಹಣಾ ಸಮಿತಿಯ ನಿರ್ಧಾರವನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದು ಡಯಾನಾ ಹೇಳಿದ್ದಾರೆ.

ಕೌರ್ ಉತ್ತಮ ನಾಯಕಿಯಲ್ಲ
ಮಿಥಾಲಿಯನ್ನು ತಂಡದಿಂದ ಹೊರಗಿಟ್ಟಿದ್ದನ್ನು ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಕೂಡ ಸಮರ್ಥಿಸಿಕೊಂಡಿದ್ದರು. ಆದರೆ ಅನಂತರ ಕೌರ್ ಬಗ್ಗೆಯೇ ಅಸಮಾಧಾನ ಕೇಳಿ ಬಂದಿತ್ತು. ಕೌರ್ ಒಬ್ಬಳು ಸುಳ್ಳಿನ ವಂಚಕಿ, ಹಠ ಸಾಧಿಸುವಾಕೆ ಜೊತೆಗೆ ಆಕೆ ಉತ್ತಮ ನಾಯಕಿಗೂ ಯೋಗ್ಯತೆ ಇಲ್ಲದವಳು ಎಂದು ಮಿಥಾಲಿ ರಾಜ್ ಅವರ ಕೋಚ್ ಅನ್ನಿಶಾ ಗುಪ್ತಾ ಹೇಳಿದ್ದರು.

ಒಂದು ವೇಳೆ ಗೆದ್ದಿದ್ದರೆ?
'ಆಡುವ 11 ಆಟಗಾರರ ತಂಡವನ್ನು ನಾವು ಪ್ರಶ್ನಿಸುವಂತಿಲ್ಲ. ಅವತ್ತಿನದ್ದು ನಿಜವಾಗಿ ಗೆಲ್ಲುವ ತಂಡವಾಗಿತ್ತು. ಆದರೆ ಸೋತಿತು. ಒಂದು ವೇಳೆ ಆ ಪಂದ್ಯವನ್ನು ಗೆದ್ದಿದ್ದರೆ ಈ ವಿವಾದವೇ ಹುಟ್ಟುತ್ತಿರಲಿಲ್ಲ' ಎಂದು ಡಯಾನಾ ತಂಡ ನಿರ್ವಹಣಾ ಸಮಿತಿಯ ತಪ್ಪಿಗೆ ತೇಪೆ ಹುಯ್ದಿದ್ದಾರೆ.

ಜೋಹ್ರಿಗೂ ಕ್ಲೀನ್ ಚಿಟ್ ಕೊಟ್ಟಿದ್ದ ಡಯಾನಾ
ಇಂಟರ್ವ್ಯೂವ್ಗೆ ಬರಹೇಳಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಅನಾಮಧೇಯಳೊಬ್ಬಳು ಘಟನೆಯನ್ನು ಎಳೆಎಳೆಯಾಗಿ ವಿವರಿಸಿ ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಮೇಲೆ ಮೀಟೂ ಆರೋಪ ಮಾಡಿದ್ದರು. ಆದರೆ ಆ ಆರೋಪವನ್ನು ಸಾರಾಸಗಟ ತಳ್ಳಿ ಹಾಕಿದ್ದ ಡಯಾನಾ, ಜೋಹ್ರಿ ತನ್ನ ಕರ್ತವ್ಯದಲ್ಲಿ ಮುಂದುವರೆಯಲು ದಾರಿ ಮಾಡಿದ್ದರು. ಹೀಗಾಗಿಯೇ ಡಯಾನಾ, ಬಿಸಿಸಿಯಲ್ಲಿನ ತಪ್ಪುಗಳನ್ನು ಮುಚ್ಚಿ ಹಾಕುತ್ತಿದ್ದಾರೋ ಎಂಬ ಅನುಮಾನಕ್ಕೆ ಎಡೆ ಮಾಡಿದೆ.


Click it and Unblock the Notifications












