
ಅಶ್ವಿನ್ ಪಾಲಿಗೆ ವಿಭಿನ್ನ ನಿಯಮ
"350ಕ್ಕೂ ಹೆಚ್ಚಿನ ವಿಕೆಟ್ ಪಡೆದಿರುವ ಆರ್ ಅಶ್ವಿನ್ ಅವರಂತಾ ಆಟಗಾರನನ್ನು ಯಾವುದೇ ತಂಡವಾದರೂ ಸ್ವಾಗಸುತ್ತದೆ. ಅದರಲ್ಲೂ ಅಶ್ವಿನ್ ನಾಲ್ಕು ಟೆಸ್ಟ್ ಶತಕಗಳನ್ನು ದಾಖಲಿಸಿದ್ದಾರೆ. ಆದರೆ ಒಂದು ಪಂದ್ಯದಲ್ಲಿ ಅಶ್ವಿನ್ ವಿಕೆಟ್ ಪಡೆಯಲು ವಿಫಲರಾದರೆ ಮುಂದಿನ ಪಂದ್ಯದಲ್ಲಿ ಮುಲಾಜಿಲ್ಲದೆ ಅವರನ್ನು ಹೊರಗಿರಿಸಲಾಗುತ್ತದೆ. ಆದರೆ ತಂಡದಲ್ಲಿ ನೆಲೆಯೂರಿರುವ ಬ್ಯಾಟ್ಸ್ಮನ್ ಓರ್ವ ವಿಫಲನಾದರೆ ಆತನಿಗೆ ಮತ್ತೊಂದು ಮಗದೊಂದು ಅಂತ ಸಾಲು ಸಾಲು ಅವಕಾಶಗಳು ದೊರೆಯುತ್ತದೆ. ಆದರೆ ಅಶ್ವಿನ್ ಪಾಲಿಗೆ ವಿಭಿನ್ನ ನಿಯಮಗಳು ಬಳಕೆಯಾಗುತ್ತದೆ" ಎಂದು ಗವಾಸ್ಕರ್ ಹೇಳಿದ್ದಾರೆ.

ಇನ್ನೋರ್ವ ಧ್ವನಿಯೆತ್ತಲಾರ
"ತಂಡದಲ್ಲಿನ ಈ ವಿಭಿನ್ನ ನಿಯಮಗಳಿಂದ ಅಚ್ಚರಿಗೊಂಡಿರುವ ಇನ್ನೋರ್ವ ಆಟಗಾರ ಟಿ ನಟರಾಜನ್. ಖಂಡಿತಾ ಆತ ಈ ಬಗ್ಗೆ ಯಾವುದೇ ರೀತಿಯಲ್ಲೂ ಧ್ವನಿಯೆತ್ತಲಾರ ಯಾಕೆಂದರೆ ಆತ ಹೊಸಬ" ಎಂದು ಮತ್ತೊಂದು ಪ್ರಸಂಗವನ್ನು ಗವಾಸ್ಕರ್ ವಿವರಿಸಿದ್ದಾರೆ. "ಎಡಗೈ ಯಾರ್ಕರ್ ಸ್ಪೆಶಲಿಸ್ಟ್ ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯದಲ್ಲಿ ಪದಾರ್ಪಣೆ ಮಾಡಿ ಅತ್ಯುತ್ತಮ ಪ್ರದರ್ಶನದ ಮೂಲಕ ಮ್ಯಾಚ್ವಿನ್ನರ್ ಎನಿಸಿಕೊಂಡರು. ಆದರೆ ಆತ ಕೂಡ ಐಪಿಎಲ್ ಪ್ಲೇ ಆಫ್ ಪಂದ್ಯ ನಡೆಯುವ ಸಂದರ್ಭದಲ್ಲಿ ಮೊದಲ ಮಗುವಿನ ತಂದೆಯಾದರು. ಐಪಿಎಲ್ನಲ್ಲಿನ ಅವರ ಪ್ರದರ್ಶನವನ್ನು ಗಮನಿಸಿ ಯುಎಇಯಿಂದ ನೇರವಾಗಿ ಆಸ್ಟ್ರೇಲಿಯಾಗೆ ಆಯ್ಕೆ ಮಾಡಿ ಕಳುಹಿಸಲಾಯಿತು."

ಮ್ಯಾಚ್ ವಿನ್ನರ್-ನೆಟ್ಬೌಲರ್
"ಅಲ್ಲಿ ನೀಡಿದ ಉತ್ತಮ ಪ್ರದರ್ಶನದ ಬಳಿಕ ಅವರನ್ನು ಟೆಸ್ಟ್ ಸರಣಿಗೂ ಉಳಿಸಿಕೊಳ್ಳಲಾಯಿತು. ಆದರೆ ಭಾರತೀಯ ತಂಡದ ಭಾಗವಾಗಿ ಅಲ್ಲ. ಬದಲಾಗಿ ನೆಟ್ ಬೌಲರ್ ಆಗಿ. ಯೋಚನೆ ಮಾಡಿ, ಮ್ಯಾಚ್ ವಿನ್ನರ್ ಆದರೆ ಇನ್ನೊಂದು ಮಾದರಿಯಲ್ಲಿ ಆತನನ್ನು ನೆಟ್ ಬೌಲರ್ ಆಗಿ ಉಳಿಸಿಕೊಳ್ಳಲಾಗಿದೆ. ಆತ ಸರಣಿ ಅಂತ್ಯವಾದ ಬಳಿಕ ಜನವರಿ ಮೂರನೇ ವಾರದಲ್ಲಿ ತನ್ನ ಮಗುವನ್ನು ಮೊಟ್ಟ ಮೊದಲಿಗೆ ನೋಡಬೇಕಾಗಿದೆ".

ವಿಭಿನ್ನ ವ್ಯಕ್ತಿಗಳಿಗೆ ವಿಭಿನ್ನ ನಿಯಮಗಳು
"ಆದರೆ ಇಲ್ಲಿ ನಾಯಕ ವಿರಾಟ್ ಕೊಹ್ಲಿ ಮೊದಲ ಟೆಸ್ಟ್ ಪಂದ್ಯದ ಬಳಿಕ ಮೊದಲ ಮಗುವಿನ ಜನನದ ಹಿನ್ನೆಲೆಯಲ್ಲಿ ತವರಿಗೆ ವಾಪಾಸಾಗಿದ್ದಾರೆ. ಇದು ಭಾರತೀಯ ಕ್ರಿಕೆಟ್. ವಿಭಿನ್ನ ವ್ಯಕ್ತಿಗಳಿಗೆ ವಿಭಿನ್ನ ನಿಯಮಗಳು. ನೀವು ಇದನ್ನು ನಂಬದಿದ್ದರೆ ರವಿ ಅಶ್ವಿನ್ ಮತ್ತು ಟಿ. ನಟರಾಜನ್ ಬಳಿ ಕೇಳಿ" ಎಂದು ಸುನಿಲ್ ಗವಾಸ್ಕರ್ ತಮ್ಮ ಅಂಕಣವನ್ನು ಕೊನೆಗೊಳಿಸಿದ್ದಾರೆ.


Click it and Unblock the Notifications
