ಗುಜರಾತ್ ಟೈಟಾನ್ಸ್ ತಂಡದ ಮುಖ್ಯ ಕೋಚ್ ಆಶಿಶ್ ನೆಹ್ರಾ ಅವರು ಗುಜರಾತ್ ಟೈಟಾನ್ಸ್ ತಂಡದ ನಾಯಕತ್ವ ಬದಲಾವಣೆ ಕುರಿತು ಮಾಹಿತಿ ನೀಡಿದ್ದಾರೆ.
ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ, ಗುಜರಾತ್ ಟೈಟನ್ಸ್ ತಂಡದ ನಾಯಕತ್ವವನ್ನು ಶುಭಮನ್ ಗಿಲ್ಗೆ ನೀಡುವ ಸಂಬಂಧ ಕೇಳಿದ ಪ್ರಶ್ನೆಗೆ, ಅವರು ಗಿಲ್ ಅವರ ನಾಯಕತ್ವದ ಗುಣವನ್ನು ಶ್ಲಾಘಿಸಿದರು ಆದರೆ ಹಾರ್ದಿಕ್ ಪಾಂಡ್ಯ ಅವರ ಸ್ಥಾನವನ್ನು ತುಂಬುವುದು ಕಷ್ಟ ಎಂದು ಹೇಳಿದ್ದಾರೆ.

ದುಬೈನಲ್ಲಿ ಐಪಿಎಲ್ 2024 ಗಾಗಿ ಮಂಗಳವಾರ ನಡೆದ ಹರಾಜಿನ ನಂತರ ಮಾತನಾಡಿರುವ ಅವರು, 'ಹಾರ್ದಿಕ್ ಪಾಂಡ್ಯ ಹೊಂದಿರುವ ಸಾಮರ್ಥ್ಯ ಮತ್ತು ಅವರ ಅನುಭವವನ್ನು ಪರಿಗಣಿಸಿ, ಅವರಂತಹ ಆಟಗಾರನನ್ನು ಬದಲಾಯಿಸುವುದು ಕಷ್ಟದ ಕೆಲಸ. ಕಳೆದ 3-4 ವರ್ಷಗಳಲ್ಲಿ ಶುಭ್ಮನ್ ಹೇಗೆ ತಮ್ಮ ಆಟವನ್ನು ಸುಧಾರಿಸಿದ್ದಾರೆ ಎಂಬುದನ್ನು ನೋಡಿದ್ದೇವೆ ಎಂದಿದ್ದಾರೆ.
ಶುಭ್ಮನ್ ವಯಸ್ಸು ಕೇವಲ 24 ರಿಂದ 25 ವರ್ಷಗಳು ಆದರೆ ಅವರ ಹೆಗಲ ಮೇಲೆ ದೊಡ್ಡ ಜವಾಬ್ದಾರಿಗಳಿವೆ. ನಾವು ಅವರನ್ನು ನಂಬುತ್ತೇವೆ. ಹೀಗಾಗಿ ಅವರನ್ನು ನಾಯಕರನ್ನಾಗಿ ಮಾಡಿದ್ದೇವೆ. ನಾನು ಫಲಿತಾಂಶಗಳನ್ನು ಮಾತ್ರ ನೋಡುವ ವ್ಯಕ್ತಿಯಲ್ಲ.
ಆದರೆ ಲೀಗ್ನಲ್ಲಿ ಫಲಿತಾಂಶಗಳು ಬಹಳ ಮುಖ್ಯ. ಆದರೆ ನಾಯಕತ್ವದ ವಿಷಯಕ್ಕೆ ಬಂದರೆ, ನೀವು ಇತರ ವಿಷಯಗಳನ್ನು ಸಹ ನೋಡಬೇಕು. ನಾಯಕತ್ವಕ್ಕೆ ಗಿಲ್ ಪರಿಪೂರ್ಣ ಆಟಗಾರ ಎಂದು ನಮಗೆ ಸಂಪೂರ್ಣ ವಿಶ್ವಾಸವಿದೆ.

ಹಾರ್ದಿಕ್ ಮುಂಬೈಗೆ ಹೋಗಿದ್ದರಿಂದ ಗಿಲ್ ಗೆ ನಾಯಕತ್ವ ಸಿಕ್ಕಿತು. ಐಪಿಎಲ್ ಹರಾಜಿಗೂ ಮುನ್ನ ಗುಜರಾತ್ ಟೈಟಾನ್ಸ್ ತಂಡ ಹಾರ್ದಿಕ್ ಪಾಂಡ್ಯ ಅವರನ್ನು ಟ್ರೇಡ್ ಮಾಡಿತ್ತು. ಹೀಗಾಗಿ ಹಾರ್ದಿಕ್ ಮುಂಬೈ ಇಂಡಿಯನ್ಸ್ಗೆ ಸೇರಬೇಕಾಗಿತ್ತು.
ಮುಂಬೈ ಕ್ಯಾಮರೂನ್ ಗ್ರೀನ್ ಅನ್ನು ಆರ್ಸಿಬಿ ಟ್ರೇಡ್ ಮಾಡುವ ಮೂಲಕ ಹಾರ್ದಿಕ್ಗೆ ಹಣವನ್ನು ಸಂಗ್ರಹಿಸಿತು. ಮತ್ತು ಗುಜರಾತ್ ಟೈಟಾನ್ಸ್ನೊಂದಿಗೆ ಈ ವೇಗದ ಬೌಲಿಂಗ್ ಆಲ್ರೌಂಡರ್ಗಾಗಿ ಒಪ್ಪಂದ ಮಾಡಿಕೊಂಡಿತು. ಇತ್ತೀಚೆಗಷ್ಟೇ ಮುಂಬೈ ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಅವರನ್ನು ತಂಡದ ನಾಯಕನನ್ನಾಗಿ ಮಾಡಿದೆ.
ಅವರ ನಾಯಕತ್ವದಲ್ಲಿ, ಹಾರ್ದಿಕ್ ಕಳೆದ ಎರಡು ಋತುಗಳಲ್ಲಿ ಗುಜರಾತ್ ಟೈಟಾನ್ಸ್ ಅನ್ನು ಫೈನಲ್ಗೆ ಕರೆದೊಯ್ದರು. 2022ರಲ್ಲಿ ಗುಜರಾತ್ ತಂಡವೂ ಚಾಂಪಿಯನ್ ಆಯಿತು. ಹಾರ್ದಿಕ್ ನಿರ್ಗಮನದ ನಂತರ, ಗುಜರಾತ್ ಫ್ರಾಂಚೈಸಿ ಶುಭ್ಮನ್ ಗಿಲ್ ಅವರನ್ನು ಹೊಸ ನಾಯಕನಾಗಿ ನೇಮಿಸಿತು.