ವಿಶ್ವಕಪ್ ಸೋಲಿನಿಂದಲೇ ಶುರು
ಏಷ್ಯಾಕಪ್ ಬಳಿಕ ಜೂನ್ 13ರಂದು ಬೆಂಗಳೂರಿನಲ್ಲಿ ಸರಣಿ ಪರಾಮರ್ಶೆ ಸಭೆಗಳು ನಡೆದಿದ್ದವು. ಇದರಲ್ಲಿ ಅರೊಥೆ, ಬಿಸಿಸಿಐ ಜನರಲ್ ಮ್ಯಾನೇಜರ್ ಸಾಬಾ ಕರೀಮ್ ಮತ್ತು ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಪಾಲ್ಗೊಂಡಿದ್ದರು.
ಮಹಿಳಾ ವಿಶ್ವಕಪ್ ಟಿ 20ಗೆ ಐದು ತಿಂಗಳು ಇರುವಾಗಲೇ ತಂಡದೊಳಗೆ ಅಸಮಾಧಾನ ಭುಗಿಲೆದ್ದಿದೆ ಎನ್ನಲಾಗಿದೆ.
ಫೆಬ್ರುವರಿಯಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಎಲ್ಲವೂ ಸರಿಯಾಗಿತ್ತು. ಆಗ ಭಾರತ ಸೀಮಿತ ಓವರ್ಗಳ ಸರಣಿಯನ್ನು ಗೆದ್ದುಕೊಂಡಿತ್ತು.
ಆದರೆ, ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮತ್ತು ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಜತೆಗಿನ ತ್ರಿಕೋನ ಸರಣಿಗಳಲ್ಲಿ ಕಳಪೆ ಪ್ರದರ್ಶನ ನೀಡಿತ್ತು.
ಕಳೆದ ವರ್ಷ ವಿಶ್ವಕಪ್ ಫೈನಲ್ನಲ್ಲಿನ ಸೋಲು ಅರೋಥೆ ಮತ್ತು ತಂಡದ ಕೆಲವರ ನಡುವೆ ಭಿನ್ನಾಭಿಪ್ರಾಯ ಮೂಡಿಸಿತ್ತು. ಏಷ್ಯಾ ಕಪ್ ಫೈನಲ್ನಲ್ಲಿನ ಸೋಲಿನ ನಂತರ ಅದು ಉಲ್ಬಣಿಸಿದೆ.
ಕ್ರಿಕೆಟ್ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಐಸಿಸಿಯಿಂದ ಆಪ್
ಅರೊಥೆ ತರಬೇತಿ ವಿಧಾನಕ್ಕೆ ಅಸಮಾಧಾನ
ಅರೊಥೆ ಅವರ ವಿರುದ್ಧದ ಅಸಮಾಧಾನಕ್ಕೆ ಅವರ ತರಬೇತಿಯ ವಿಧಾನವೂ ಒಂದು ಕಾರಣ ಎನ್ನಲಾಗಿದೆ. 2017ರ ಏಪ್ರಿಲ್ನಲ್ಲಿ ಕೋಚ್ ಆಗಿ ನೇಮಕವಾದ ಅರೊಥೆ ಅವರು ಬೆಳಿಗ್ಗೆ ಮತ್ತು ಸಂಜೆ ಸುಮಾರು ಎರಡೂವರೆ ಗಂಟೆಗಳ ಕಾಲದ ಎರಡು ಕಡ್ಡಾಯ ಅಭ್ಯಾಸ ಅವಧಿಗಳನ್ನು ನಡೆಸುತ್ತಿದ್ದರು.
ಮಧ್ಯಾಹ್ನದ ಅವಧಿಯಲ್ಲಿ ಎಲ್ಲ ಆಟಗಾರರ ಆಲ್ರೌಂಡ್ ಕೌಶಲಗಳನ್ನು ಅದರಲ್ಲೂ ಕೊನೆಯ ಬ್ಯಾಟ್ಸ್ಮನ್ಗಳ ಆಟವನ್ನು ಪರಿಶೀಲನೆ ಹಾಗೂ ತರಬೇತಿ ನೀಡಲಾಗುತ್ತಿತ್ತು.
ಆದರೆ, ದಿನದಲ್ಲಿ ಒಮ್ಮೆ ಸುದೀರ್ಘ ಅವಧಿಯ ತರಬೇತಿ ನೀಡಿದರೆ ಸೂಕ್ತವಾಗುತ್ತದೆ ಎಂದು ಅನೇಕ ಆಟಗಾರ್ತಿಯರು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಇದರಿಂದ ಜಿಮ್ನಲ್ಲಿ ತರಬೇತಿ ನೀಡಲು ಅವಕಾಶವಾಗುತ್ತದೆ ಹಾಗೂ ಒಂದು ಹೆಚ್ಚುವರಿ ಅವಧಿ ಬೇಕಾದರೂ ಸಿಗುತ್ತದೆ ಎಂದು ಏಷ್ಯಾ ಕಪ್ಗೂ ಮುನ್ನ ಅರೊಥೆ ಅವರಿಗೆ ಅನಿಸಿಕೆ ತಿಳಿಸಿದ್ದರು. ಈ ವಿಚಾರವು ಸಿಒಎ ಸದಸ್ಯರು ಮತ್ತು ಆಯ್ಕೆದಾರರ ಜತೆಗಿನ ಸಭೆಗಳಲ್ಲಿಯೂ ಪ್ರಸ್ತಾಪವಾಗಿತ್ತು ಎನ್ನಲಾಗಿದೆ.
ರೊಡ್ರಿಗಸ್ಗೆ ಸಿಗದ ಅವಕಾಶ
ಆಟಗಾರರ ಆಯ್ಕೆ ವಿಷಯವೂ ಸಮಸ್ಯೆಗೆ ಕಾರಣಗಳಲ್ಲಿ ಒಂದು. ಮುಖ್ಯವಾಗಿ, ಏಷ್ಯಾಕಪ್ ಟೂರ್ನಿಯ ಹನ್ನೊಂದರ ಬಳಗದಲ್ಲಿ 17 ವರ್ಷದ ಪ್ರತಿಭೆ ಜೆಮಿಮಹ್ ರೋಡ್ರಿಗಸ್ ಅವರನ್ನು ಹೊರಗಿಟ್ಟಿದ್ದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ. ತಂಡದಲ್ಲಿದ್ದ ಇತರೆ ಪ್ರತಿ ಆಟಗಾರರೂ ಕನಿಷ್ಠ ಒಂದು ಪಂದ್ಯವನ್ನಾದರೂ ಆಡುವ ಅವಕಾಶ ಪಡೆದುಕೊಂಡಿದ್ದರೆ, ರೋಡ್ರಿಗಸ್ ಬೆಂಚು ಕಾಯಬೇಕಾಗಿತ್ತು.
ನೆಟ್ಸ್ ಮತ್ತು ಮಲೇಷ್ಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ರೋಡ್ರಿಗಸ್ ಉತ್ತಮ ಪ್ರದರ್ಶನ ನೀಡದ ಕಾರಣ ಅವರಿಗೆ ಅವಕಾಶ ನೀಡಲಿಲ್ಲ ಎಂದು ನಂಬಲಾಗಿದೆ. ಅವರನ್ನು ಹೊರಕ್ಕೆ ಕೂರಿಸುವ ನಿರ್ಧಾರವನ್ನು ನಾಯಕಿ ಹರ್ಮನ್ಪ್ರೀತ್ ಹಾಗೂ ಉಪನಾಯಕಿ ಸ್ಮೃತಿ ಮಂದಾನ ಅವರ ಅಭಿಪ್ರಾಯ ಪಡೆದೇ ತೆಗೆದುಕೊಳ್ಳಲಾಗಿತ್ತು ಎಂದು ಹೇಳಲಾಗಿದೆ.
ಶಿಬಿರ ದಿಢೀರ್ ರದ್ದು
ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಜೂನ್ 15-25ರವರೆಗೆ ತರಬೇತಿ ಶಿಬಿರ ನಡೆಯಬೇಕಿತ್ತು. ಅರೊಥೆ ಅವರ ವಿಚಾರದಲ್ಲಿ ತಂಡದ ಪ್ರಮುಖರು ಮಂಡಳಿಯ ಹಿರಿಯ ಅಧಿಕಾರಿಗಳ ಬಳಿ ದೂರುತ್ತಿದ್ದಾರೆ ಎಂಬ ಮಾಹಿತಿ ಬಂದ ಬಳಿಕ ಬಿಸಿಸಿಐ ಕೊನೆಯ ಕ್ಷಣದಲ್ಲಿ ಶಿಬಿರವನ್ನು ರದ್ದುಪಡಿಸಿತ್ತು. ಅಲ್ಲದೆ, ಮಾಧ್ಯಮದವರೊಂದಿಗೆ ಮಾತನಾಡದಂತೆ ಎಲ್ಲ ಆಟಗಾರ್ತಿಯರು ಹಾಗೂ ಸಿಬ್ಬಂದಿ ಮೇಲೆ ನಿರ್ಬಂಧ ಹೇರಿತ್ತು.
ಎನ್ಸಿಎದಲ್ಲಿ ಸ್ಥಳಾವಕಾಶದ ಕೊರತೆಯ ನೆಪವೊಡ್ಡಿ ಜೂನ್ 12ರಂದು ಶಿಬಿರವನ್ನು ರದ್ದುಗೊಳಿಸಿ ಅಲ್ಲಿಂದ ತೆರವುಗೊಳಿಸುವಂತೆ ತಂಡಕ್ಕೆ ಸೂಚನೆ ನೀಡಲಾಗಿತ್ತು.
ಇದಕ್ಕೂ ಮುನ್ನ, ಆಟಗಾರ್ತಿಯರಿಗೆ ಬೇಕಾದ ಸೌಲಭ್ಯಗಳ ಪಟ್ಟಿಯನ್ನು ನೀಡುವಂತೆ ಬಿಸಿಸಿಐ ತಂಡದ ಸಿಬ್ಬಂದಿಗೆ ಸೂಚನೆ ನೀಡಿತ್ತು. ಆದರೆ, ಈ ಬೆಳವಣಿಗೆಯ ಕುರಿತು ಅವರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಇಎಸ್ಪಿಎನ್ ಕ್ರಿಕ್ ಇನ್ಫೊ ವೆಬ್ಸೈಟ್ ವರದಿ ತಿಳಿಸಿದೆ.
ಮಹಿಳಾ ತಂಡಕ್ಕೆ ಶಿಬಿರ
ಜುಲೈ 25ರ ಸುಮಾರಿಗೆ ಆರಂಭವಾಗಲಿರುವ ಕೆಎಸ್ಎಲ್ನಲ್ಲಿ ಹರ್ಮನ್ ಪ್ರೀತ್ ಮತ್ತು ಮಂದಾನ ಅವರನ್ನು ಹೊರತುಪಡಿಸಿ ಉಳಿದವರು ಭಾಗವಹಿಸಲಿದ್ದಾರೆ. ಬ್ಯಾಟ್ಸ್ವುಮೆನ್ ಗಳು ಹಾಗೂ ವೇಗದ ಬೌಲರ್ಗಳನ್ನು ಆಯ್ಕೆ ಮಾಡುವ ಎರಡು ಕೌಶಲ ಶಿಬಿರಗಳು ಜೂನ್ 30-ಜುಲೈ 5ರವರೆಗೆ ನಡೆಯಲಿವೆ.
ಭಾರತ ತಂಡ ಸೆಪ್ಟೆಂಬರ್ನಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಬಳಿಕ ವಿಶ್ವ 20-20ಯಲ್ಲಿ ಪಾಲ್ಗೊಳ್ಳುವ ಮೂಲಕ ವೆಸ್ಟ್ ಇಂಡೀಸ್ನಲ್ಲಿ ದ್ವಿರಾಷ್ಟ್ರ ಸರಣಿಯಲ್ಲಿ ಆಡಲಿದೆ.