
ಹೊರಗಿಡಲು ಹೇಗೆ ಸಾಧ್ಯ!
"ವಿಶ್ವದ ಅತ್ಯುತ್ತಮ ಹಾಗೂ ಅತ್ಯುತ್ಸಾಹದ ಆಟಗಾರನನ್ನು ನೀವು ಹೇಗೆ ಆಡುವ ಬಳಗದಿಂದ ಹೊರಗಿಡಲು ಸಾಧ್ಯ. ಟಿ20 ಮಾದರಿಯ ಅಗ್ರಕ್ರಮಾಂಕದಲ್ಲಿ ಆತ ಅತ್ಯುತ್ತಮ ಆಟಗಾರ ಎಂದು ನಾನು ಹೇಳುತ್ತೇನೆ. ಸೂರ್ಯಕುಮಾರ್ ಯಾದವ್ ಕಾಯಬೇಕಾಬಹುದು. ಅವರ ಅವಕಾಶ ಮುಂದೆ ಬರಲಿದೆ. ರಾಹುಲ್ ಕೂಡ ಸುದೀರ್ಘ ಕಾಲ ಕಾದಿದ್ದಾರೆ" ಎಂದಿದ್ದಾರೆ ಎಂಎಸ್ಕೆ ಪ್ರಸಾದ್.

ಇಶಾನ್- ಸೂರ್ಯಕುಮಾರ್ಗೆ ಅವಕಾಶಗಳು ದೊರೆಯಬಹುದು
"ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಕಿಶನ್ ಅವರನ್ನು ಭಾರತ ತಂಡ ಮೊದಲ ಮೂರು ತಂಡಗಳ ನಂತರ ಪ್ರಯತ್ನಿಸಬಹುದು. ರೊಟೇಶನ್ ಪದ್ದತಿಯನ್ನು ಪಾಲಿಸಿ ನಾಯಕ ವಿರಾಟ್ ಕೊಹ್ಲಿ ಅಥವಾ ಉಪನಾಯಕ ರೋಹಿತ್ ಶರ್ಮಾಗೆ ಅಂತಿಮ ಎರಡು ಪಂದ್ಯಗಳಲ್ಲಿ ವಿಶ್ರಾಂತಿಯನ್ನು ನೀಡಿ ಈ ಆಟಗಾರರಿಗೆ ಅವಕಾಶವನ್ನು ನೀಡಬಹುದು" ಎಂದಿದ್ದಾರೆ.

ಟೆಸ್ಟ್ಗಿಂತ ಉತ್ತಮ ಪ್ರದರ್ಶನ ನೀಡಲಿದೆ
ಇನ್ನು ಇದೇ ಸಂದರ್ಭದಲ್ಲಿ ಮಾಜಿ ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್ಕೆ ಪ್ರಸಾದ್ ಈ ಸರಣಿಯಲ್ಲೊ ಭಾರತ ಟೆಸ್ಟ್ ಸರಣಿಗಿಂತ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರೆ. ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಭಾರತ 3-1 ಅಂತರದಿಂದ ಸರಣಿಯನ್ನು ಗೆದ್ದುಕೊಂಡಿತ್ತು.


Click it and Unblock the Notifications
