
'ಮಾಸ್ಟರ್ಸ್' ಪದವಿಗಾಗಿ ಪಯಣ
ಜಿಆರ್ಇ ಮತ್ತು ಟಿಒಇಎಫ್ಎಲ್ ಪರೀಕ್ಷೆ ತೆಗೆದುಕೊಂಡಿದ್ದ ಸೌರಭ್ 2015ರಲ್ಲಿ ಸ್ನಾತಕೋತ್ತರ ಪದವಿಗಾಗಿ ಅಮೆರಿಕಾದ ಕಾರ್ನೆಲ್ ಯೂನಿವರ್ಸಿಟಿಗೆ ತೆರಳಿದ್ದರು. ನೇತ್ರವಾಲ್ಕರ್ ಅವರನ್ನು ಕ್ರಿಕೆಟ್ ಮತ್ತೆ ಸೆಳೆಯಿತು. ಈಗ ಸೌರಭ್ ಯುಎಸ್ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.

ದಾಳಿಯಾತ್ಮಕ ಬೌಲರ್
2010ರ ಅಂಡರ್ 19 ವರ್ಲ್ಡ್ ಕಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಸೌರಭ್ ದಾಳಿಯಾತ್ಮಕ ಬೌಲರ್ ಎಂದು ಗುರುತಿಸಿಕೊಂಡಿದ್ದರು. ಈಗ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕರಾಗಿರುವ ಜೋ ರೂಟ್ ಮತ್ತು ಪಾಕಿಸ್ತಾನದ ಅಪಾಯಕಾರಿ ಆರಂಭಿಕ ಆಟಗಾರ ಅಹ್ಮದ್ ಶೆಹಝಾದ್ ವಿಕೆಟ್ಗಳನ್ನು ಆಗ ಸೌರಭ್ ಕೆಡವಿದ್ದರು.

ಕರ್ನಾಟಕ ವಿರುದ್ಧ ಪಾರಮ್ಯ
ಅದಾಗಿ ಮೂರು ವರ್ಷಗಳ ಬಳಿಕ ಅಂದರೆ 2013-14ರಲ್ಲಿ ಮುಂಬೈ ಪರ ಒಂದೇ ಒಂದು ರಣಜಿ ಟ್ರೋಫಿ ಪಂದ್ಯದಲ್ಲಿ ಪಾಲ್ಗೊಂಡಿದ್ದ ಎಡಗೈ ಬೌಲರ್ ಸೌರಭ್ ನೇತ್ರವಾಲ್ಕರ್, ಕರ್ನಾಟಕದ ಮೂರು ವಿಕೆಟ್ ಉರುಳಿಸಿ ಪಾರಮ್ಯ ಮೆರೆದಿದ್ದೂ ಉಲ್ಲೇಖನೀಯ.

ಅಮೆರಿಕಾದ ಬೆಸ್ಟ್ ಕ್ರಿಕೆಟರ್
ಮಹಾರಾಷ್ಟ್ರದ ಮುಂಬೈಯಲ್ಲಿ 16 ಅಕ್ಟೋಬರ್ 1991ರಲ್ಲಿ ಜನಿಸಿದ್ದ ಸೌರಭ್, 2018ರ ಜನವರಿಯಲ್ಲಿ ವೆಸ್ಟ್ ಇಂಡೀಸ್ ನಲ್ಲಿ ನಡೆದಿದ್ದ '2017-18 ರೀಜಿನಲ್ ಸೂಪರ್ 50' ಟೂರ್ನಮೆಂಟ್ ಗಾಗಿ ಅಮೆರಿಕಾ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ಈಗ ಅಮೆರಿಕಾದಲ್ಲೇ ಬೆಸ್ಟ್ ಕ್ರಿಕೆಟರ್ ಎನಿಸಿದ್ದಾರೆ.

ಕೆಲಿಕೆಯೆಡೆಗೆ ಮುಖ ಮಾಡಿದ್ದೆ
ಹಿಂದಿನ ದಿನಗಳನ್ನು ಸ್ಮರಿಸಿಕೊಂಡು ಮಾತನಾಡಿದ ಸೌರಭ್, ಎರಡು ವರ್ಷಗಳ ಕಾಲ ಸಂಪೂರ್ಣವಾಗಿ ಕ್ರಿಕೆಟ್ ಗಾಗಿ ಸಮಯ ಮೀಸಲಿಟ್ಟಿದ್ದೆ. ಆದರೆ ಕ್ರಿಕೆಟ್ನಲ್ಲಿ ದೊಡ್ಡ ಮಟ್ಟಕ್ಕೇರುವುದು ನನ್ನಿಂದ ಸಾಧ್ಯವಾಗಲಾರದು ಅನ್ನಿಸಿ ಕ್ರಿಕೆಟ್ ತೊರೆದು ಕೆಲಿಕೆಯೆಡೆಗೆ ಮುಖ ಮಾಡಿದ್ದೆ. ಈಗ ಮತ್ತೆ ಕ್ರಿಕೆಟ್ನೆಡೆಗೆ ಬಂದಿದ್ದೇನೆ' ಎಂದರು.


Click it and Unblock the Notifications












