ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್
ಮನೀಷ್ ಪಾಂಡೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ, ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೆ ಮುಂದಿನ ದಿನಗಳಲ್ಲಿ ಭಾರತ ತಂಡದಲ್ಲಿ ಸ್ಥಾನ ನೀಡುವ ಯೋಚನೆಯನ್ನು ಬಿಸಿಸಿಐ ನಡೆಸುತ್ತಿತ್ತು. ಆದರೆ ಮನೀಷ್ ಪಾಂಡೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದೆ ಹಾಳು ಮಾಡಿಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟೆ ಟ್ರೋಲ್ ಆಗುತ್ತಿದ್ದಾರೆ.
ಒಂದೇ ಒಂದು ಅರ್ಧ ಶತಕವನ್ನೂ ಸಿಡಿಸಲಿಲ್ಲ
ಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಎಲ್ಲಾ ಪಂದ್ಯಗಳಲ್ಲೂ ಆಡುವ ಅವಕಾಶವನ್ನು ಪಡೆದ ಮನೀಷ್ ಪಾಂಡೆ ಯಾವುದೇ ಪಂದ್ಯದಲ್ಲಿಯೂ ಅರ್ಧಶತಕವನ್ನು ಬಾರಿಸಲಿಲ್ಲ. ಲಂಕಾ ವಿರುದ್ಧದ ಎರಡನೇ ಪಂದ್ಯದಲ್ಲಿ ಮನೀಷ್ ಪಾಂಡೆ ಸಿಡಿಸಿದ 37 ರನ್ ಇಡೀ ಸರಣಿಯಲ್ಲಿ ಅವರು ಬಾರಿಸಿದ ಅತಿ ಹೆಚ್ಚು ರನ್ ಆಗಿದೆ.
ಪಾಂಡೆ ಕ್ರಿಕೆಟ್ ಕೆರಿಯರ್ ಇಷ್ಟೇ ಎನ್ನುತ್ತಿದ್ದಾರೆ ನೆಟ್ಟಿಗರು
ಇನ್ನು ಪಾಂಡೆ ನೀರಸ ಪ್ರದರ್ಶನ ನೀಡಿದ ನಂತರ ದೊಡ್ಡ ಮಟ್ಟದ ನಿರೀಕ್ಷೆಯನ್ನು ಇಟ್ಟುಕೊಂಡಿದ್ದ ಕ್ರೀಡಾಭಿಮಾನಿಗಳು ಪಾಂಡೆ ಕ್ರಿಕೆಟ್ ಜೀವನ ಇಲ್ಲಿಗೆ ಮುಗಿದಂತೆ ಎನ್ನುತ್ತಿದ್ದಾರೆ. ಈ ಸರಣಿಯಲ್ಲಿ ಮನೀಷ್ ಪಾಂಡೆ ನೀಡಿದ ನೀರಸ ಪ್ರದರ್ಶನವೇ ಅವರ ಹಾದಿಗೆ ಮುಳ್ಳಾಗಿ ಪರಿಣಮಿಸಲಿದೆ ಎನ್ನುವ ಮಾತುಗಳು ಸಹ ಕೇಳಿಬರುತ್ತಿವೆ.