'ಮೊದಲು ದೇಶಭಕ್ತನಾಗು'; ರಿಯಾನ್ ಪರಾಗ್ ಹೇಳಿಕೆಗೆ ತಿರುಗೇಟು ಕೊಟ್ಟ ಟೀಮ್ ಇಂಡಿಯಾ ಮಾಜಿ ವೇಗಿ
ಜುಲೈ 2 ಮಂಗಳವಾರ, ಐಪಿಎಲ್ 2024ರಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ರಾಜಸ್ಥಾನ ರಾಯಲ್ಸ್ ಬ್ಯಾಟರ್ ರಿಯಾನ್ ಪರಾಗ್ ಅವರನ್ನು ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಐಪಿಎಲ್ 2024ರಲ್ಲಿ 16 ಪಂದ್ಯಗಳಲ್ಲಿ 573 ರನ್ ಗಳಿಸುವ ಮೂಲಕ ಪರಾಗ್ ಮೂರನೇ ಅತಿ ಹೆಚ್ಚು ರನ್ ಕಲೆ ಹಾಕಿದ ಆಟಗಾರರಾಗಿದ್ದರು. 2024 ಟಿ20 ವಿಶ್ವಕಪ್ಗೆ ಆಯ್ಕೆ ಕುರಿತು ಚರ್ಚೆಗಳು ನಡೆದಿದ್ದರೂ, ಪರಾಗ್ಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿರಲಿಲ್ಲ. ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಟೀಮ್ ಇಂಡಿಯಾ ಚಾಂಪಿಯನ್ ಆಯಿತು.

ರಿಯಾನ್ ಪರಾಗ್ ವಿಚಿತ್ರ ಹೇಳಿಕೆ
ಬಿಸಿಸಿಐ ಆಯ್ಕೆದಾರರಿಂದ ನಿರ್ಲಕ್ಷಿಸಿದ ನಂತರ, ಪರಾಗ್ ಅವರು ಟಿ20 ವಿಶ್ವಕಪ್ ಅನ್ನು ವೀಕ್ಷಿಸುವುದಿಲ್ಲ ಎಂದು ಹೇಳಿದ್ದರು. ಟಿ20 ವಿಶ್ವಕಪ್ನ ಟೀಮ್ ಇಂಡಿಯಾದಲ್ಲಿ ಆಡಲು ಬಯಸುತ್ತೇನೆ ಎಂದು ಪರಾಗ್ ಹೇಳಿದ್ದರು.
ಟಿಆರ್ಎಸ್ ಪಾಡ್ಕ್ಯಾಸ್ಟ್ನಲ್ಲಿ ನಡೆದ ಸಂಭಾಷಣೆಯಲ್ಲಿ ಪರಾಗ್, "ನಾನು ನಿಜವಾಗಿಯೂ ಟಿ20 ವಿಶ್ವಕಪ್ ಅನ್ನು ನೋಡುವುದಿಲ್ಲ. ನಾನು ಫೈನಲ್ ಅನ್ನು ಮಾತ್ರ ನೋಡುತ್ತೇನೆ.
ನಾನು ಇನ್ನು ಮುಂದೆ ಕ್ರಿಕೆಟ್ ವೀಕ್ಷಿಸಲು ಬಯಸುವುದಿಲ್ಲ. ಏಕೆಂದರೆ ನಾನು ವಿಶ್ವಕಪ್ ಆಡಲು ಬಯಸುತ್ತೇನೆ. ಇದು ಒಳ್ಳೆಯ ಭಾವನೆ ಎಂದು ಭಾವಿಸುತ್ತೇನೆ. ನಾನು ದೇಶಕ್ಕಾಗಿ ಆಡಲು ಬಯಸುತ್ತೇನೆ ಎಂದು ಹೇಳಿಕೆ ನೀಡಿದ್ದರು.
ಶ್ರೀಶಾಂತ್ ತಿರುಗೇಟು
ಪರಾಗ್ ಜಿಂಬಾಬ್ವೆ ಸರಣಿಗೆ ತಂಡದಲ್ಲಿ ಆಯ್ಕೆಯಾದ ನಂತರ, ಭಾರತದ ಮಾಜಿ ವೇಗದ ಬೌಲರ್ ಎಸ್ ಶ್ರೀಶಾಂತ್ ಈ ಹೇಳಿಕೆಗಾಗಿ ಯುವ ಬ್ಯಾಟರ್ನನ್ನು ಟೀಕಿಸಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ನಲ್ಲಿ ಮಾತನಾಡಿದ ಶ್ರೀಶಾಂತ್, "ಕೆಲವು ಯುವ ಆಟಗಾರರು ಆಯ್ಕೆಯಾಗದ ಕಾರಣ ವಿಶ್ವಕಪ್ ಅನ್ನು ವೀಕ್ಷಿಸುವುದಿಲ್ಲ ಎಂದು ಹೇಳಿದ್ದಾರೆ.
ಮೊದಲು ನೀವು ದೇಶಭಕ್ತರಾಗಬೇಕು. ನಂತರ ನೀವು ಕ್ರಿಕೆಟ್ ಪ್ರೇಮಿಯಾಗಬೇಕು ಎಂದು ನಾನು ಹೇಳಲು ಬಯಸುತ್ತೇನೆ. ತಂಡದಲ್ಲಿ ಆಯ್ಕೆಯಾದ ಅವರನ್ನು ಪೂರ್ಣ ಹೃದಯ, ಮನಸ್ಸು ಮತ್ತು ಉತ್ಸಾಹದಿಂದ ಬೆಂಬಲಿಸಬೇಕು ಎಂದು ರಿಯಾನ್ ಪರಾಗ್ ಅವರಿಗೆ ತಿರುಗೇಟು ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications