ಮಾರ್ಟಿನ್ಗೆ ಗಂಭೀರ ಗಾಯ
2018ರ ಡಿಸೆಂಬರ್ 28ರಂದು ಮಾರ್ಟಿನ್ ಅಪಘಾತಕ್ಕೀಡಾಗಿದ್ದರು. ಅವರಿಗೆ ಗಂಭೀರ ಗಾಯಗಳಾಗಿತ್ತು. ಈಗಲೂ ಗಂಭೀರ ಸ್ಥಿತಿಯಲ್ಲೇ ಇರುವ ಜೇಕಬ್ಗೆ ಹೆಚ್ಚಿನ ಚಿಕಿತ್ಸೆಗೆ ಆರ್ಧಿಕ ನೆರವು ಬೇಕಿತ್ತು. ಭಾರತದ ಆಟಗಾರ ಅಸಹಾಯಕ ಸ್ಥಿತಿಯನ್ನು ಮನಗಂಡ ಗಂಗೂಲಿ ನೆರವಿಗೆ ಮುಂದಾಗುವ ಮೂಲಕ ಅಭಿಮಾನಿಗಳ ಮನಸ್ಸಿಗೆ ಇನ್ನೂ ಹತ್ತಿರವಾಗಿದ್ದಾರೆ.
ನಾನೂ ಜೊತೆಗಿದ್ದೇನೆ
'ಮಾರ್ಟಿನ್ ಮತ್ತು ನಾನು ಒಂದೊಮ್ಮೆ ಒಂದೇ ತಂಡದಲ್ಲಿದ್ದೆವು; ಇಷ್ಟೇ ನನಗೆ ನೆನಪಿದೆ. ಅವರು ಬೇಗ ಗುಣಮುಖರಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಮಾರ್ಟಿನ್ ಕುಟುಂಬಕ್ಕೆ ಧೈರ್ಯ ತುಂಬಲು, ನಾನೂ ಅವರ ಜೊತೆಯಿದ್ದೇನೆ ಎಂದು ತಿಳಿಸಬಯಸುತ್ತೇನೆ' ಎಂದು ದೊಡ್ಡ ಮನಸ್ಸಿನ ದಾದಾ 'ಟೆಲಿಗ್ರಾಫ್' ಜೊತೆ ಹೇಳಿಕೊಂಡಿದ್ದಾರೆ.
ನೆರವಿಗೆ ನಿಂತ ಟೀಮ್ ಇಂಡಿಯಾ
ಟೆಲಿಗ್ರಾಫ್ನಲ್ಲಿ ವರದಿಯಾಗಿರುವಂತೆ ಜೇಕಬ್ ಅವರ ಪ್ರತಿ ದಿನದ ಚಿಕಿತ್ಸೆ ಸುಮಾರು 70,000 ರೂ.ಗಳನ್ನು ಬೇಡುತ್ತೆ. ಹೀಗಾಗಿ ಗಂಗೂಲಿ ಪತ್ನಿ ಡೋನಾ ರಾಯ್ ಕೂಡ ಬಿಸಿಸಿಐನಿಂದ ನೆರವಿಗೆ ಯತ್ನಿಸಿದ್ದಾರಲ್ಲದೆ, ಜೇಕಬ್ಗೆ ಬಿಸಿಸಿಯಿಂದ 5 ಲಕ್ಷ ರೂ.ಗಳ ನೆರವು ದೊರಕಿಸಿದ್ದಾರೆ. ಇದರ ಜೊತೆಗೆ ಮಾಜಿ ವೇಗಿ ಜಹೀರ್ ಖಾನ್, ಇರ್ಫಾನ್ ಪಠಾಣ್, ಯುಸೂಫ್ ಪಠಾಣ್, ಮುನಾಫ್ ಪಟೇಲ್, ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಸೇರಿದಂತೆ ಕ್ರಿಕೆಟ್ ದಿಗ್ಗಜರು ಸಹಾಯಹಸ್ತ ನೀಡಿದ್ದಾರೆ.
ಹಾರ್ದಿಕ್-ರಾಹುಲ್ ಪರ ಬ್ಯಾಟಿಂಗ್
ಕಾಫೀ ವಿತ್ ಕರಣ್ ಟಿವಿ ಟಾಕ್ ಶೋನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಅಮಾನತಾಗಿದ್ದ ಯುವ ಆಟಗಾರರಾದ ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಬಗ್ಗೆ ಗಂಗೂಲಿ ಕಾಳಜಿ ತೋರಿಸಿದ್ದರು. ಮನುಷ್ಯರಾದವರು ತಪ್ಪು ಮಾಡುತ್ತಾರೆ. ಅದನ್ನು ಕ್ಷಮಿಸಿ ಯುವ ಆಟಗಾರರ ಭವಿಷ್ಯಕ್ಕೆ ಪ್ರೋತ್ಸಾಹಿಸುವುದರಲ್ಲಿ ಅರ್ಥವಿದೆ ಎಂದು ಗಂಗೂಲಿ ಹೇಳಿಕೆ ನೀಡಿದ್ದರು. ಪ್ರತಿಭಾನ್ವಿತ ಆಟಗಾರರು ತಂಡದಿಂದ ಹೊರಗುಳಿದರೆ ತಂಡಕ್ಕೂ ಅದರಿಂದ ಹಿನ್ನಡೆಯಾಗುವ ಕಳವಳ ಗಂಗೂಲಿ ಮಾತಿನಲ್ಲಿ ವ್ಯಕ್ತವಾಗಿರುವುದನ್ನು ನಾವಿಲ್ಲಿ ಗಮನಿಸಿಬಹುದು.