ನವದೆಹಲಿ, ಆಗಸ್ಟ್ 01 : ಟೀಂ ಇಂಡಿಯಾದ ಒಂದು ಕಾಲದ ಭರವಸೆಯ ಆಟಗಾರ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ಅವರು ಬಡವರಿಗೆ ಉಚಿತವಾಗಿ ಆಹಾರ ನೀಡುವ ಕಾಯಕದಲ್ಲಿ ತೊಡಗಿದ್ದಾರೆ.
ತಮ್ಮ ಫೌಂಡೇಶನ್ ಮೂಲಕ ನವದೆಹಲಿಯ ಬಡವರಿಗೆಲ್ಲ ಉಚಿತವಾಗಿ ಆಹಾರ ಪೂರೈಸುವ ಸಮುದಾಯ ಅಡುಗೆ ಮನೆ ಯೋಜನೆಗೆ ಚಾಲನೆ ನೀಡಿದ್ದಾರೆ. ದೆಹಲಿಯ ಪಟೇಲ್ ನಗರದಲ್ಲಿ ಮೊದಲ ಕಮ್ಯೂನಿಟಿ ಕಿಚನ್ ಆರಂಭವಾಗಿದೆ.
