ಅರ್ಜುನ ರಣತುಂಗ ಮುಟ್ಟಿ ನೋಡಿಕೊಳ್ಳುವ ಉತ್ತರ ಕೊಟ್ಟ ಗಂಭೀರ್
ನವದಹೆಲಿ, ಜುಲೈ 14: 2011ರ ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯವನ್ನು ರದ್ದುಗೊಳಿಸಿರುವುದಾಗಿ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ಅಧ್ಯಕ್ಷ ಅರ್ಜುನ ರಣತುಂಗ ಅವರ ಆರೋಪವನ್ನು ಭಾರತದ ಹಿರಿಯ ಕ್ರಿಕೆಟಿಗ ಗೌತಮ್ ಗಂಭೀರ್ ಅಲ್ಲಗಳೆದಿದ್ದಾರೆ.
2011ರ ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ 97 ರನ್ ಸಿಡಿಸಿದ್ದ ಗಂಭೀರ್, ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ''ರಣತುಂಗ ಹೇಳಿಕೆಗೆ ಪ್ರತಿಯಾಗಿ ನಾನೊಂದು ಹೇಳಿಕೆ ನೀಡುವುದರಿಂದ ರಣತುಂಗ ಅವರ ಹೇಳಿಕೆಗೆ ಭಾರೀ ಪ್ರಚಾರ ಕೊಡುವುದು ನನಗೆ ಇಷ್ಟವಿಲ್ಲ'' ಎಂದಿದ್ದಾರೆ.
ತಮ್ಮ ಮಾತನ್ನು ಮುಂದುವರಿಸಿ, '' ಶ್ರೀಲಂಕಾ ತಂಡ 1996ರ ವಿಶ್ವಕಪ್ ಗೆದ್ದಾಗ, ರಣತುಂಗ ಅವರಿಗೆ ಆ ವಿಜಯ ಸರಿ ಎನ್ನಿಸಿತ್ತೇ ಎಂದು ಪ್ರಶ್ನಿಸಿದ ಗಂಭೀರ್, ಆಗ ತಂಡ ಗೆದ್ದಾಗ ಖುಷಿಪಟ್ಟು ಈಗ ತಂಡ ಸೋತಿದ್ದ ಪಂದ್ಯವನ್ನು ಗುಮಾನಿಯನ್ನು ನೋಡುವುದು ಎಷ್ಟರ ಮಟ್ಟಿಗೆ ಸರಿ? ಕ್ರಿಕೆಟ್ ರಂಗದ ಹಿರಿಯರಾಗಿರುವ ರಣತುಂಗ ಅಂಥವರೇ ಇಂಥ ಮಾತುಗಳನ್ನಾಡಿದಾಗ ಬೇಸರವಾಗುತ್ತದೆ'' ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications