
ಮೋದಿ ಅವರ ಭೇಟಿಗಿಂತಲೂ ಹೆಚ್ಚು ಸುದ್ದಿ
ಈ ಹಸ್ತಲಾಘವ ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗಿಂತಲೂ ಹೆಚ್ಚು ಸುದ್ದಿ ಮಾಡಿದೆ.
ಹಸ್ತಲಾಘವ ಮಾಡಿರುವ ಚಿತ್ರ ಇಲ್ಲಿದೆ
ನನ್ನ ಸ್ನೇಹಿತರೇ ಅದರಲ್ಲೂ ಮುಖ್ಯವಾಗಿ ದೃಶ್ಯ ಮಾಧ್ಯಮಗಳೇ, ನಾನು ಹಾಗೂ ಧೋನಿ ಕ್ವಾರ್ಟರ್ಫೈನಲ್ ನಂತರ ಹಸ್ತಲಾಘವ ಮಾಡಿರುವ ಚಿತ್ರ ಇಲ್ಲಿದೆ ನೋಡಿ'' ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ.
ಎಲೆಕ್ಟ್ರಾನಿಕ್ ಮಾಧ್ಯಮ ಮಿತ್ರರೇ
ಎಲೆಕ್ಟ್ರಾನಿಕ್ ಮಾಧ್ಯಮ ಮಿತ್ರರೇ ದೃಶ್ಯ ಮಾಧ್ಯಮಗಳೇ, ಹಸ್ತಲಾಘವ ಮಾಡಿರುವ ಚಿತ್ರ ಇಲ್ಲಿದೆ ನೋಡಿ ಎಂದು ಮತ್ತೆ ಟ್ವೀಟ್ ಮಾಡಿದ್ದಾರೆ.

ಬ್ಯಾಟಿಂಗ್ ನಲ್ಲಿ ಗಂಭೀರ್ ವಿಫಲ
ಮೊದಲು ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಗುಜರಾತ್ ತಂಡ ನಾಯಕ ಪಾರ್ಥಿವ್ ಪಟೇಲ್ ಶತಕ (105), ಆರ್ಎಚ್ ಭಟ್ (60) ಮತ್ತು ಸಿಜೆ ಗಾಂಧಿ(ಔಟಾಗದೆ 44) ಉಪಯುಕ್ತ ಕೊಡುಗೆಯ ನೆರವಿನಲ್ಲಿ ಗುಜರಾತ್ ತಂಡ ನಿಗದಿತ 50 ಓವರ್ಗಳಲ್ಲಿ 273 ರನ್ ಗಳಿಗಳಿಗೆ ಆಲೌಟಾಯಿತು. ನಾಯಕ ಗೌತಮ್ ಗಂಭೀರ್ (9) ವಿಫಲರಾದರು. ಬುಮ್ರಾ ಮತ್ತು ಆರ್ಪಿ ಸಿಂಗ್ ಹೊರತುಪಡಿಸಿದರೆ ಇತರ ಯಾರಿಗೂ ವಿಕೆಟ್ ದಕ್ಕಲಿಲ್ಲ. ದಿಲ್ಲಿಗೆ ಬೆದರಿಕೆಯನ್ನುಂಟು ಮಾಡಿದ್ದ ಅಕ್ಷರ್ ಪಟೆಲ್ಗೆ 5 ಓವರ್ಗಳಲ್ಲಿ 30 ರನ್ ನೀಡಿದರೂ ವಿಕೆಟ್ ಸಿಗಲಿಲ್ಲ.


Click it and Unblock the Notifications











