
ತಪ್ಪುಗಳಿಂದಲೇ ಕಲಿಯಬೇಕು
ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಸೌರವ್ ಗಂಗೂಲಿ, 'ಪಂತ್ ಅವರ ಶಾಟ್ ಸೆಲೆಕ್ಷನ್ ಬಗ್ಗೆ ಟೀಕೆಗಳು ಕೇಳಿ ಬರುತ್ತಿವೆ. ಅದು ಸರಿಯೆ. ಆದರೆ ಪಂತ್ ಸುಧಾರಿಸಬೇಕಾದರೆ ಅಂಥ ತಪ್ಪುಗಳಿಂದಲೇ ಕಲಿಯಬೇಕಿದೆ. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ,' ಎಂದರು.

ನಿರಾಸೆ ಮೂಡಿಸುತ್ತಿರುವ ಪಂತ್
ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಎರಡು ಪಂದ್ಯಗಳಲ್ಲಿ ಆಡಿದ್ದ ಪಂತ್, ಕ್ರಮವಾಗಿ 19, 4 ರನ್ ಗಳಿಸಿ ನಿರಾಸೆ ಅನುಭವಿಸಿದ್ದರು. ಪ್ರತೀಸಾರಿಯೂ ದೊಡ್ಡ ಹೊಡೆತಗಳಿಗೆ ಮುಂದಾಗುವ ಪಂತ್ ಬೇಗನೆ ವಿಕೆಟ್ ಒಪ್ಪಿಸುತ್ತಿದ್ದಾರೆ. ಇದು ಭಾರತದ ಆಯ್ಕೆ ಸಮಿತಿಗೂ ತಲೆ ನೋವು ತರುತ್ತಿದೆ.

ನಾಳೆ ಅಗ್ರಸ್ಥಾನಕ್ಕೇರುತ್ತಾನೆ
ಮಾತು ಮುಂದುವರೆಸಿದ ದಾದಾ, 'ಪಂತ್ ಯುವ ಬ್ಯಾಟಿಂಗ್ ತಂಡದಲ್ಲಿದ್ದಾರೆ. ತಂಡದ ಎಲ್ಲಾ ಆಟಗಾರರ ಬೆಂಬಲದೊಂದಿಗೆ ನಾಯಕನ ಬೆಂಬಲ ಹೆಚ್ಚಿನ ಮಟ್ಟದಲ್ಲಿ ಪಂತ್ಗೆ ಸಿಗಬೇಕು. ಹೀಗಾದರೆ ನಾಳೆ ಪಂತ್ ಅಗ್ರ ಸ್ಥಾನಿಗರ ಪಟ್ಟಿ ಸೇರಲಿದ್ದಾನೆ,' ಎಂದು ಭರವಸೆ ವ್ಯಕ್ತಪಡಿಸಿದರು.

ಎಲ್ಲಾ ಮಾದರಿಗೂ ಪರಿಹಾರ
'ಅಂತಾರಾಷ್ಟ್ರೀಯ ಕ್ರಿಕೆಟ್ಗೆ ರಿಷಬ್ ಪ್ರವೇಶಿಸಿದ ರೀತಿ ನನಗೆ ಅದ್ಭುತವಾಗಿತ್ತು. ನನಗನ್ನಿಸುವಂತೆ ಆತ ಭಾರತೀಯ ಕ್ರಿಕೆಟ್ನಲ್ಲಿ ಎಲ್ಲಾ ಮಾದರಿಗೂ ಪರಿಹಾರವಾಗಬಲ್ಲ. ಆತ ಪಂದ್ಯ ಗೆಲ್ಲಿಸುವ ಆಟಗಾರನಾಗಿ ಬಹುಕಾಲ ಟೀಮ್ ಇಂಡಿಯಾದಲ್ಲಿ ಆಡಲಿದ್ದಾನೆ,' ಎಂದು ಸೌರವ್ ಗಂಗೂಲಿ ಪಂತ್ ಅವರನ್ನು ಹರಸಿದ್ದಾರೆ.


Click it and Unblock the Notifications












