ಕೋಲ್ಕತ್ತಾ, ಜೂನ್ 30 : ಟೀಂ ಇಂಡಿಯಾದ ಕೋಚ್ ಹುದ್ದೆ ಕೈತಪ್ಪಿದ್ದರಿಂದ ಬೇಸರಗೊಂಡು ಸೌರವ್ ಗಂಗೂಲಿ ಅವರ ವಿರುದ್ಧ ರವಿಶಾಸ್ತ್ರಿ ಅವರು ಕಿಡಿಕಾರಿದ್ದು ಗೊತ್ತಿರಬಹುದು. ರವಿಶಾಸ್ತ್ರಿ ಅವರು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಗಂಗೂಲಿ ಅವರು ಶಾಸ್ತ್ರಿ ಹೇಳಿಕೆಯಿಂದ ನೋವಾಗಿದೆ ಎಂದಿದ್ದಾರೆ.
ರವಿಶಾಸ್ತ್ರಿ ಅವರು ನನ್ನ ಮೇಲೆ ಮಾಡಿರುವ ಆರೋಪದಿಂದ ಅಪಾರ ನೋವಾಗಿದೆ ಎಂದು ಎಂದು ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಸಲಹಾ ಸಮಿತಿ ಸದಸ್ಯ ಸೌರವ್ ಗಂಗೂಲಿ ಹೇಳಿದ್ದಾರೆ. [ಟೀಂ ಇಂಡಿಯಾ ಕೋಚ್ ಆಗಿ ಅನಿಲ್ ಕುಂಬ್ಳೆ ಆಯ್ಕೆ]
ಶಾಸ್ತ್ರಿ ಅವರು ನನ್ನ ಸ್ಥಿತಿಯನ್ನು ಅರಿಯದೆ ಈ ರೀತಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಅಂದು ಐದು ಗಂಟೆಗೆ ಬಂಗಾಳ ಕ್ರಿಕೆಟ್ ಸಂಸ್ಥೆ(ಸಿಎಬಿ) ಯ ಸಭೆ ಏರ್ಪಾಡು ಮಾಡಲಾಗಿತ್ತು. ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷನಾಗಿ ನಾನು ಅಲ್ಲಿ ಇರಬೇಕಾಗಿತ್ತು. ಆದ್ದರಿಂದ ಶಾಸ್ತ್ರಿ ಅವರ ಸಂದರ್ಶನ ಸಮಯದಲ್ಲಿ ಹಾಜರಿರಲಿಲ್ಲ.
