ಚೆನ್ನೈ: ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 20ನೇ ಪಂದ್ಯ ಅತ್ಯಂತ ರೋಚಕ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಯಾಕೆಂದರೆ ಈ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ಸನ್ ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೂಪರ್ ಓವರ್ ಪಂದ್ಯದಲ್ಲಿ ಸೆಣಸಾಡಿದ್ದವು.
ಐಪಿಎಲ್ನಿಂದ ಹೊರ ಬೀಳುತ್ತಿದ್ದಾರೆ ಆಟಗಾರರು, ಟೂರ್ನಿ ನಿಲ್ಲುತ್ತಾ?!
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ಗೆ 4 ವಿಕೆಟ್ ಕಳೆದು 159 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್ 20 ಓವರ್ಗೆ 7 ವಿಕೆಟ್ ಕಳೆದು 159 ರನ್ ಗಳಿಸಿ ಪಂದ್ಯ ಟೈ ಮಾಡಿಕೊಂಡಿತ್ತು. ಕೇನ್ ವಿಲಿಯಮ್ಸನ್ ಅಜೇಯ 66, ಜಗದೀಶ್ ಸುಚಿತ್ 14 ರನ್ ಗಳಿಸಿ ಪಂದ್ಯವನ್ನು ಸೂಪರ್ ಓವರ್ ಕಡೆಗೆ ಕೊಂಡೊಯ್ದಿದ್ದರು.
ಸೂಪರ್ ಓವರ್ನಲ್ಲಿ ಹೈದರಾಬಾದ್ ಪರ ನಾಯಕ ಡೇವಿಡ್ ವಾರ್ನರ್ ಮತ್ತು ಕೇನ್ ವಿಲಿಯಮ್ಸನ್ ಬಂದಿದ್ದರಾದರೂ 6 ಎಸೆತಗಳಿಗೆ ಕೇವಲ 7 ರನ್ ಗಳಿಸಿದರು. 8 ರನ್ ಗುರಿ ಬೆನ್ನಟ್ಟಿದ ಡೆಲ್ಲಿ 8 ರನ್ ಬಾರಿಸಿ ಗೆಲುವನ್ನಾಚರಿಸಿತು. ಸೂಪರ್ ಓವರ್ನಲ್ಲಿ ಸೋಲಿಗೆ ಕಾರಣವೇನೆಂದು ವಿಲಿಯಮ್ಸನ್ ಪಂದ್ಯದ ಬಳಿಕ ಹೇಳಿದ್ದಾರೆ.
ಭಾರತ ಸರ್ಕಾರ, ಐಪಿಎಲ್ ಫ್ರಾಂಚೈಸಿ ಪ್ರಶ್ನಿಸಿದ ಆ್ಯಂಡ್ರ್ಯೂ ಟೈ
'ನಾನು ಸೂಪರ್ ಓವರ್ನಲ್ಲಿ ಎರಡನೇ ಬಾರಿಗೆ ಬ್ಯಾಟಿಂಗ್ಗೆ ಬರುವಾಗ ದಣಿದಿದ್ದೆ. ಪಂದ್ಯದುದ್ದಕ್ಕೂ ಯಾವಾಗೆಲ್ಲ ಸೂಪರ್ ಓವರ್ ಇರುತ್ತದೋ ಆಗ ಬ್ಯಾಟಿಂಗ್ ಸೈಡ್ ಚೇಸ್ ಮಾಡುತ್ತಿದ್ದರೆ ಅಲ್ಲಿ ಸಾಕಷ್ಟು ಸ್ಪರ್ಧೆ ಇರುತ್ತದೆ,' ಎಂದು ಪಂದ್ಯದ ಬಳಿಕ ಮಾತನಾಡಿದ ವಿಲಿಯಮ್ಸನ್ ಹೇಳಿದ್ದಾರೆ.