ಮಾತಾಡಲಿ ಬಿಡಿ
ತನ್ನ ಬಗ್ಗೆ ಮಾತನಾಡಿದ್ದ ಗವಾಸ್ಕರ್ ಮತ್ತು ಹೋಲ್ಡಿಂಗ್ ಉಲ್ಲೇಖಿಸಿ ಪಾಂಡ್ಯ, 'ಅವರು ಬಹಳಷ್ಟು ಕ್ರಿಕೆಟ್ ಆಡಿದ ಅನುಭವವುಳ್ಳವರು. ಮಾತನಾಡಲಿ ಬಿಡಿ ಪರವಾಗಿಲ್ಲ. ನಾನವರ ಬಗ್ಗೆ ತುಂಬಾ ಕೇಳಿದ್ದೇನೆ. ಹಾಗಾಗಿ ನಾನವರಿಗೆ ಗೌರವಿಸುತ್ತೇನೆ. ಅವರ ಟೀಕೆಗೆ ನಾನು ಯೋಗ್ಯನೆ' ಎಂದಿದ್ದಾರೆ.
ವಿಶ್ವ ಕಪ್ ವೇಳೆ ತಂಡ ಸೇರ್ಪಡೆ ಸಾಧ್ಯತೆ
'ಅವರು ಏನೇ ಅಂದರೂ ನಾನದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇನೆ' ಎಂದು ಪಾಂಡ್ಯ ತಿಳಿಸಿದರು. ಸದ್ಯ ವಿಶ್ರಾಂತಿಯಲ್ಲಿರುವ ಹಾರ್ದಿಕ್ ಗೆ ಇನ್ನೂ ಕೊಂಚ ಕಾಲ ವಿಶ್ರಾಂತಿ ನೀಡಲು ತಂಡ ನಿರ್ವಹಣಾ ಸಮಿತಿ ಬಯಸಿದೆ. ಕಾರಣ; ಮುಂಬರಲಿರುವ ವಿಶ್ವಕಪ್ ವೇಳೆಗೆ ಪಾಂಡ್ಯ ಬಲವನ್ನು ತಂಡದಲ್ಲಿ ಬಳಸಿಕೊಳ್ಳೋದು.
ಕ್ಯಾಪ್ಟನ್, ಕೋಚ್, ತಂಡ ಮುಖ್ಯ
ಮಾತು ಮುಂದುವರೆಸಿದ ಹಾರ್ದಿಕ್, 'ತಂಡಕ್ಕೆ ಸೇರ್ಪಡೆ, ವಿಶ್ರಾಂತಿ ಎಲ್ಲವೂ ತಂಡಕ್ಕೆ ಸಂಬಂಧಿಸಿದ್ದು. ನಾನವುಗಳ ಬಗ್ಗೆ ಯಾವತ್ತೂ ಏನನ್ನೂ ಮಾತನಾಡಲಾರೆ. ನಾನು ಈವರೆಗೂ ಹೀಗೇ ಆಡಿಕೊಂಡು ಬಂದವನು. ನನ್ನ ತಂಡದ ನಾಯಕ, ಕೋಚ್ ಮತ್ತು ತಂಡದ ಬೇಡಿಕೆಗನುಗುಣವಾಗಿ ನಾನು ನಡೆದುಕೊಳ್ಳುತ್ತೇನೆ' ಎಂದರು.
ಯಾವ ಮಾದರಿಯ ಕ್ರಿಕೆಟ್ ಗೂ ಸಿದ್ಧ
ನೀನು ಇಂಥ ಮಾದರಿಯ ಕ್ರಿಕೆಟ್ ಗೆ ಫಿಟ್ ಅಂತ ಅವರು ಬಯಸಿದರೆ ನಾನದಕ್ಕೆ ಬದ್ಧ ಎಂದು ತಿಳಿಸಿದ ಪಾಂಡ್ಯ ಎಂಎಸ್ ಧೋನಿ ಮತ್ತು ಕೊಹ್ಲಿ ಪ್ರಭಾವದ ಬಗ್ಗೆ ಮಾತನಾಡಿ, 'ಆಟದ ಸುಧಾರಣೆಗೆ ಸಂಬಂಧಿಸಿ ನಾನವರಿಂದ ವೈಯಕ್ತಿಕವಾಗಿ ತುಂಬಾ ಕಲಿತಿದ್ದೇನೆ' ಎಂದರು.