ನವದೆಹಲಿ, ಅ. 30: ಈಗಿನ ಭಾರತ ಕ್ರಿಕೆಟ್ ತಂಡದ ಸ್ಥಿತಿ ನೋಡಿದರೆ ನಾನು ವಾಪಸಾಗುವುದು ಕಷ್ಟಸಾಧ್ಯ ಎಂದು ಕಳೆದ ವಿಶ್ವಕಪ್ ಹೀರೊ ಯುವರಾಜ್ ಸಿಂಗ್ ಸ್ವತಃ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಆಲ್ ರೌಂಡರ್, ನಾನು ಭಾರತ ತಂಡದ ಜೆರ್ಸಿ ಮತ್ತೆ ಧರಿಸುವುದು ಅನುಮಾನ ಎಂದೇ ಕಾಣುತ್ತಿದೆ. ತಂಡಕ್ಕೆ ಮರಳಲು ಯತ್ನಿಸಿದರೂ ಅದು ಸಾಧ್ಯವಾಗುತ್ತಿಲ್ಲ ಎಂದು ಯುವರಾಜ್ ಸಿಂಗ್ ವಿಷಾದ ವ್ಯಕ್ತಪಡಿಸಿದ್ದಾರೆ.[ಯುವಿ, ವೀರು ವಿಶ್ವಕಪ್ ಗೆ ಅನುಮಾನː ಗಂಗೂಲಿ]