ನವೆಂಬರ್ 19ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್ನ ಫೈನಲ್ನಲ್ಲಿ ಆಸ್ಟ್ರೇಲಿಯಾ ತಂಡ ಆರು ವಿಕೆಟ್ಗಳಿಂದ ಸೋಲಿಸುವ ಮೂಲಕ ಭಾರತದ ಮೂರನೇ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಕನಸು ಭಗ್ನಗೊಂಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತನ್ನ ನಿಗದಿತ 50 ಓವರ್ಗಳಲ್ಲಿ 240 ರನ್ಗಳ ಕಡಿಮೆ ಮೊತ್ತವನ್ನು ಕಲೆಹಾಕುವುದರಲ್ಲಿ ಸರ್ವಪತನ ಕಂಡಿತು. ಇದಕ್ಕೆ ಪ್ರತ್ಯುತ್ತರವಾಗಿ, ಟ್ರಾವಿಸ್ ಹೆಡ್ 120 ಎಸೆತಗಳಲ್ಲಿ 137 ರನ್ಗಳ ಅಮೋಘ ಶತಕದ ನೆರವಿನಿಂದ ಆಸ್ಟ್ರೇಲಿಯಾ 43 ಓವರ್ಗಳಲ್ಲಿ ಗುರಿಯನ್ನು ಸುಲಭವಾಗಿ ಬೆನ್ನಟ್ಟಿತು ಮತ್ತು ದಾಖಲೆಯ ಆರನೇ ಬಾರಿಗೆ ವಿಶ್ವಕಪ್ ಪ್ರಶಸ್ತಿಯನ್ನು ಎತ್ತಿಹಿಡಿಯಿತು.

ಇದೇ ವೇಳೆ ಭಾರತದ ಮಾಜಿ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್ ಅವರು, ಮಧ್ಯಮ ಓವರ್ಗಳಲ್ಲಿ ಸಾಕಷ್ಟು ಆಕ್ರಮಣಕಾರಿಯಾಗಿ ಆಡಲಿಲ್ಲ ಎಂದು ಭಾರತೀಯ ಬ್ಯಾಟರ್ಗಳ ಮೇಲೆ ತೀವ್ರವಾಗಿ ಕಿಡಿಕಾರಿದ್ದಾರೆ.
ನಾಯಕ ರೋಹಿತ್ ಶರ್ಮಾ 31 ಎಸೆತಗಳಲ್ಲಿ 47 ರನ್, ಕೆಎಲ್ ರಾಹುಲ್ 107 ಎಸೆತಗಳಲ್ಲಿ 66 ರನ್, ರವೀಂದ್ರ ಜಡೇಜಾ 22 ಎಸೆತಗಳಲ್ಲಿ 9 ರನ್ ಮತ್ತು ಸೂರ್ಯಕುಮಾರ್ ಯಾದವ್ 28 ಎಸೆತಗಳಲ್ಲಿ 18 ರನ್ ಅವರ ಉತ್ತಮ ಆರಂಭದ ನಂತರ ಭಾರತವು ದೊಡ್ಡ ಮೊತ್ತ ಗಳಿಸಲು ವಿಫಲವಾಯಿತು ಮತ್ತು ಭಾರತವು ಸಾಧಾರಣ ಮೊತ್ತಕ್ಕೆ ತೃಪ್ತಿಪಟ್ಟುಕೊಂಡಿತು.
"ಇದು ಎರಡು ಅಲಗಿನ ಕತ್ತಿ. ಆದರೆ ನಾನು ಯಾವಾಗಲೂ ಹೇಳುತ್ತಿದ್ದೇನೆ, ಅತ್ಯಂತ ಧೈರ್ಯಶಾಲಿ ತಂಡವು ವಿಶ್ವಕಪ್ ಗೆಲ್ಲುತ್ತದೆ. ಜೊತೆಯಾಟ ನಿರ್ಮಿಸಲು ನಿಮಗೆ ಸಮಯ ಬೇಕಾಗುತ್ತದೆ ಎಂದು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ 11ರಿಂದ 40 ಓವರ್ಗಳು ಬಹಳ ದೀರ್ಘ ಸಮಯ. ಯಾರಾದರೂ ಆಕ್ರಮಣಕಾರಿ ಆಟದ ರಿಸ್ಕ್ ತೆಗೆದುಕೊಳ್ಳಬೇಕಿತ್ತು," ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ಮಾತು ಮುಂದುವರೆಸಿದ ಗೌತಮ್ ಗಂಭಿರ್, ನಾಲ್ಕನೇ ವಿಕೆಟ್ಗೆ 109 ಎಸೆತಗಳಲ್ಲಿ 67 ರನ್ಗಳ ಜೊತೆಯಾಟದಲ್ಲಿ ವಿರಾಟ್ ಕೊಹ್ಲಿ ಜೊತೆಗಿನ ಪಾಲುದಾರಿಕೆಯಲ್ಲಿ ಕೆಎಲ್ ರಾಹುಲ್ ಹೆಚ್ಚು ಆಕ್ರಮಣಕಾರಿಯಾಗಬೇಕಿತ್ತು ಎಂದು ಗೌತಮ್ ಗಂಭೀರ್ ತಿಳಿಸಿದರು.
"ವಿರಾಟ್ ಕೊಹ್ಲಿ ಇನ್ನಿಂಗ್ಸ್ ಅನ್ನು ಮುನ್ನಡೆಸುವ ಪಾತ್ರವನ್ನು ವಹಿಸಿದ್ದಾರೆ. ಆದರೆ ಉಳಿದವರೆಲ್ಲರೂ ಆಕ್ರಮಣಕಾರಿ ಆಗಿರಬೇಕು. ವಿಶೇಷವಾಗಿ ಕೆಎಲ್ ರಾಹುಲ್ ಒಂದು ಹೆಜ್ಜೆ ಮುಂದಿಡಬೇಕಿತ್ತು. ಇದು ಯಾವ ಹಾನಿಯನ್ನುಂಟು ಮಾಡುತ್ತದೆ? ನಾವು 150 ಆಲೌಟ್ ಆಗುತ್ತಿದ್ದೆವು".
"ಆದರೆ ನಾವು ಧೈರ್ಯಶಾಲಿಗಳಾಗಿದ್ದರೆ, ನಾವು 310 ರನ್ ಗಳಿಸಬಹುದು ಮತ್ತು ಭಾರತ ಇಂದು ವಿಶ್ವ ಚಾಂಪಿಯನ್ ಆಗಿರುತ್ತಿತ್ತು. ಇದು 1990ರ ದಶಕವಲ್ಲ, 240 ಉತ್ತಮ ಸ್ಕೋರ್ ಅಲ್ಲ. ನಿಮಗೆ 300-ಪ್ಲಸ್ ಮೊತ್ತದ ಅಗತ್ಯವಿದೆ. ಭಾರತವು ಮಧ್ಯಮ ಕ್ರಮಾಂಕದಲ್ಲಿ ಸಾಕಷ್ಟು ಧೈರ್ಯಶಾಲಿಯಾಗಿರಲಿಲ್ಲ," ಎಂದು ಗೌತಮ್ ಗಂಭೀರ್ ಹೇಳಿದರು.