ಯುದ್ಧ ಮಾಡುತ್ತಲೇ ಎದುರಾಳಿಗೆ ಯುದ್ಧ ಪಾಠ!
39ನೇ ಓವರ್ ಮುಗಿದು 40ನೇ ಓವರ್ನ ಮೊದಲ ಎಸೆತ ಎಸೆಯೋಕೂ ಮುನ್ನ ಬೌಲರ್ ಸಬ್ಬೀರ್ ರಹ್ಮಾನ್ ಅವರನ್ನು ಸ್ಟ್ರೈಕ್ನಲ್ಲಿದ್ದ ಧೋನಿ ನಿಲ್ಲಿಸಿದ್ದರು. ಕ್ವ್ಯಾರ್-ಲೆಗ್ ಫೀಲ್ಡರ್ ತನ್ನ ಎಡಭಾಗಕ್ಕೆ ಬಂದು ನಿಲ್ಲಲಿ. ಆಗ ಫೀಲ್ಡಿಂಗ್ ಸರಿ ಹೋಗತ್ತೆ ಎಂದು ಸಲಹೆ ನೀಡಿದ್ದರು.
ಧೋನಿ-ರಾಹುಲ್ ಅಬ್ಬರ
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತಕ್ಕೆ ಎಂಎಸ್ ಧೋನಿ ಮತ್ತು ಕೆಎಲ್ ರಾಹುಲ್ ಅವರ ಶತಕದ ಬೆಂಬಲ ದೊರೆಯಿತು. ಧೋನಿ 78 ಎಸೆತಗಳಿಗೆ 113 ರನ್, ರಾಹುಲ್ 99 ಎಸೆತಗಳಿಗೆ 108 ರನ್ ಬಾರಿಸಿದ್ದರಿಂದ ಭಾರತ, ಬಾಂಗ್ಲಾ ವಿರುದ್ಧ 95 ರನ್ಗಳ ಜಯ ದಾಖಲಿಸಿತು.
ಧೋನಿ ಆಜ್ಞೆ ಪಾಲಿಸಿದ ಸಬ್ಬೀರ್
ಬ್ಯಾಟಿಂಗ್ ಮಾಡುತ್ತಿದ್ದ ಧೋನಿ, ಎದುರಾಳಿ ಬಾಂಗ್ಲಾ ತಂಡಕ್ಕೆ ಫೀಲ್ಡಿಂಗ್ ಸಲಹೆ ನೀಡಿದರು ಅಂದೆವಲ್ಲ? ಬಾಂಗ್ಲಾ ತಂಡ ಧೋನಿ ಆಜ್ಞೆಯನ್ನು ಪಾಲಿಸಿತ್ತು ಕೂಡ. ಧೋನಿ ಸಲಹೆ ನೀಡುತ್ತಲೇ ಶಬ್ಬೀರ್, ತನ್ನ ತಂಡದ ನಾಯಕ ಮುಶ್ರಾಫೆ ಮೊರ್ತಾಝ ಒಪ್ಪಿಗೆಯನ್ನೂ ಪಡೆಯದೆ ಪೀಲ್ಡರ್ಗೆ ಧೋನಿ ಆಜ್ಞೆ ಪಾಲಿಸಲು ಸೂಚಿಸಿದ್ದು ಪಂದ್ಯದ ವೇಳೆ ಕಾಣಸಿಕ್ಕಿತ್ತು.
ಧೋನಿ ಎಲ್ಲರಿಗೂ ಮಾರ್ಗದರ್ಶಕ
ಭಾರತ vs ಬಾಂಗ್ಲಾ ಅಭ್ಯಾಸ ಪಂದ್ಯದಲ್ಲಿ ಧೋನಿ, ಬಾಂಗ್ಲಾಕ್ಕೆ ಫೀಲ್ಡಿಂಗ್ ಸಲಹೆ ನೀಡಿದ್ದನ್ನು ಗಮನಿಸಿದ ಕ್ರಿಕೆಟ್ ಅಭಿಮಾನಿಗಳು ಹಲವಾರು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. 'ಧೋನಿ ಎದುರಾಳಿಗೂ ಸಲಹೆ ನೀಡುತ್ತಾರೆ. ಅವರು ಎಲ್ಲರಿಗೂ ಮಾರ್ಗದರ್ಶಕ' ಎಂದು ಕ್ರಿಕೆಟ್ ಪ್ರಿಯರು ಟ್ವೀಟ್ ಮಾಡಿದ್ದಾರೆ.


Click it and Unblock the Notifications
