
ಡ್ರೆಸ್ಸಿಂಗ್ ರೂಮ್ ನಲ್ಲಿ ಏನಾಗುತ್ತಿದೆ?
ಕ್ಯಾಪ್ಟನ್ ಕೂಲ್ ಧೋನಿ ಮತ್ತು ಇತರ ಆಟಗಾರರ ನಡುವೆ ಡ್ರೆಸ್ಸಿಂಗ್ ರೂಮ್ ನಲ್ಲಿ ನಡೆಯುತ್ತಿರುವ ಇತ್ತೀಚಿನ ವಿದ್ಯಮಾನಗಳು, ಗುಂಪುಗಾರಿಕೆಯ ಬಗ್ಗೆ ಈಗಾಗಲೇ ವರದಿಯಾಗಿದೆ. ಇದರ ಮಧ್ಯೆ, ಆಶ್ಚರ್ಯ ರೀತಿಯಲ್ಲಿ ಮಾಧ್ಯಮದವರ ಮುಂದೆ ಪ್ರತ್ಯಕ್ಷರಾದ ಅಶ್ವಿನ್ ನಾಯಕ ಧೋನಿ ಪರವಾಗಿ ಮಾತನಾಡಿದ್ದಾರೆ.

ಸೋಲಿಗೆ ಧೋನಿ ಮಾತ್ರ ಕಾರಣವಲ್ಲ
ಬಾಂಗ್ಲಾ ದೇಶದ ವಿರುದ್ದ ಸರಣಿ ಸೋಲಿಗೆ ನಾಯಕ ಧೋನಿ ಮಾತ್ರ ಕಾರಣರಲ್ಲ. ಇಡೀ ತಂಡ ಇದಕ್ಕೆ ಕಾರಣ. ಪ್ರತೀ ಪಂದ್ಯ ಆರಂಭವಾಗುವುದಕ್ಕೆ ಮುನ್ನ ಮ್ಯಾಚ್ ಗೆಲ್ಲಲೇ ಬೇಕು ಎನ್ನುವ ಉದ್ದೇಶದಿಂದ ಮೈದಾನಕ್ಕೆ ಇಳಿಯುತ್ತೇವೆ. ತಂಡದ ಸೋಲು, ನಾಯಕನೊಬ್ಬನ ಸೋಲಾಗಲು ಸಾಧ್ಯವಿಲ್ಲ - ಅಶ್ವಿನ್

ನಾಯಕನಿಗಾಗಿ ಪ್ರಾಣ ಬಿಡುತ್ತೇನೆ
ನಾಯಕನ ಬಗ್ಗೆ ನಿಮ್ಮ ಸಮರ್ಥನೆಯ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಅಶ್ವಿನ್, Off course man, ನಾಯಕನ ಪರವಾಗಿ ನಿಲ್ಲದಿದ್ದರೇ ಇನ್ಯಾವಾಗ ಅವರನ್ನು ಸಪೋರ್ಟ್ ಮಾಡುವುದು. ಒಂದು ವೇಳೆ ಧೋನಿ, ಮೈದಾನದಲ್ಲೇ ನೀನು ಸಾಯಿ ಎಂದರೆ ಅದಕ್ಕೆ ನಾನು ರೆಡಿ - ಅಶ್ವಿನ್

ತನ್ನ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಾ..
ಇದುವರೆಗೆ ಇಡೀ ತಂಡ ಒಂದು ಆರ್ಮಿ ತರ ಇದ್ದೇವೆ. ನಾಯಕ ಧೋನಿ ಅಂತಾ ಈ ಮಾತನ್ನು ನಾನು ಹೇಳುತ್ತಿಲ್ಲ. ಯಾವುದೇ ನಾಯಕನನ್ನು ನಾವು ಹಿಂಬಾಲಿಸಿದಾಗ, ಅವರು ಹೇಳಿದಂತೆ ನಾವು ನಡೆದುಕೊಳ್ಳಬೇಕಾಗುತ್ತದೆ - ಅಶ್ವಿನ್

ಒಂದು ಗೆಲುವು, ಎಲ್ಲದಕ್ಕೂ ಪರಿಹಾರ
ನಾವು ಇತ್ತೀಚೆಗೆ ಆಡಿದ ಪಂದ್ಯಗಳಲ್ಲಿ ಶೇ. 75ರಷ್ಟು ಪಂದ್ಯವನ್ನು ಗೆದ್ದಿದ್ದೇವೆ. ಬಾಂಗ್ಲಾ ದೇಶದ ಜೊತೆಗಿನ ಕೊನೆಯ ಪಂದ್ಯದಲ್ಲಿ ನಾವು ಗೆದ್ದರೆ, ಎಲ್ಲಾ ಚರ್ಚೆಗೆ ಫುಲ್ ಸ್ಟಾಪ್ ಬೀಳಲಿದೆ - ಅಶ್ವಿನ್.


Click it and Unblock the Notifications