
ಶ್ರೀಲಂಕಾ ವಿರುದ್ಧ ಜಯ ಸಾಧಿಸಿದ ಭಾರತ
ಶ್ರೀಲಂಕಾ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿಯನ್ನು ವೈಟ್ ವಾಶ್ ಮಾಡಿದ ಭಾರತ. ಸರಣಿ ಶ್ರೇಷ್ಠ ಎನಿಸಿದ ಭಾರತದ ವೇಗಿ ಜಸ್ ಪ್ರೀತ್ ಬೂಮ್ರಾಗೆ ಉಡುಗೊರೆ ರೂಪದಲ್ಲಿ ಸಿಕ್ಕ ವಾಹನ

ವಾಹನ ಚಲಾಯಿಸಿದ ಧೋನಿ
ಸರಣಿ ಶ್ರೇಷ್ಠ ಎನಿಸಿದ ಭಾರತದ ವೇಗಿ ಜಸ್ ಪ್ರೀತ್ ಬೂಮ್ರಾಗೆ ಉಡುಗೊರೆ ರೂಪದಲ್ಲಿ ಸಿಕ್ಕ ವಾಹನದ ಡ್ರೈವರ್ ಸೀಟು ಹತ್ತಿದ ಧೋನಿ ಅವರು ಮೈದಾನದ ತುಂಬಾ ವಾಹನ ಓಡಿಸಿದರು.

ಒಂದೇ ವಾಹನದಲ್ಲಿ ಭಾರತ ತಂಡ
ರೋಹಿತ್ ಶರ್ಮ, ಜಸ್ ಪ್ರೀತ್ ಬೂಮ್ರಾ ಹಾಗೂ ಭುವನೇಶ್ವರ್ ಕುಮಾರ್ ಅವರು ವಾಹನದ ಹಿಂಬದಿಯಲ್ಲಿ ಕುಳಿತು ಸವಾರಿ ಮಾಡಿದರು.

ವಾಹನ ಟಾಪ್ ಮೇಲೇರಿದ ಆಟಗಾರರು
ಐದು ಏಕದಿನ ಕ್ರಿಕೆಟ್ ಪಂದ್ಯಗಳ ಸರಣಿಯನ್ನು ಗೆದ್ದ ಭಾರತ ತಂಡವು ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಚರಿಸಿತು. ಈ ಸಂದರ್ಭದಲ್ಲಿ ಆಟಗಾರರು ವಾಹನದ ಮೇಲೇರಿ ಕುಳಿತಿರುವುದು.
ಭಾರತದ ವಿಜಯೋತ್ಸವ
ಶ್ರೀಲಂಕಾದ ವಿರುದ್ಧ ಏಕದಿನ ಸರಣಿ ಗೆದ್ದ ಭಾರತದ ವಿಜಯೋತ್ಸವದ ವಿಡಿಯೋ ಹಂಚಿಕೊಂಡ ವಿರಾಟ್ ಕೊಹ್ಲಿ.


Click it and Unblock the Notifications











