
ತರಬೇತಿ ವೇಳೆ ಸ್ಪಿನ್ ಬೌಲರ್ ಗಳ ದಂಡು
ಭಾರತದ ತರಬೇತಿ ಶಿಬಿರದಲ್ಲಿ ಹಲವು ಸ್ಪಿನ್ನರ್ ಗಳು ಕಾಣಿಸಿಕೊಂಡಿದ್ದಾರೆ. ವಾಷಿಂಗ್ಟನ್ ಸುಂದರ್, ಸೌರಭ್ ಕುಮಾರ್, ಸಾಯಿ ಕಿಶೋರ್, ರಾಹುಲ್ ಚಹಾರ್, ಜಯಂತ್ ಯಾದವ್ ಮತ್ತು ಪುಲ್ಕಿತ್ ನಾರಂಗ್ ನೆಟ್ಸ್ನಲ್ಲಿ ಭಾರತದ ಬ್ಯಾಟರ್ ಗಳಿಗೆ ಬೌಲಿಂಗ್ ಮಾಡುವ ಮೂಲಕ ನೆರವಾಗಿದ್ದಾರೆ.
"ಆಟಗಾರರು ಮತ್ತು ತರಬೇತುದಾರರಿಗೆ ಮಾನ್ಯತೆ ನೀಡಲು ಅಂತಾರಾಷ್ಟ್ರೀಯ ಸರಣಿಯ ಉತ್ತಮ ಅವಕಾಶವಾಗಿದೆ. ಭಾರತ ತಂಡದ ಎಲ್ಲಾ ವಿಭಾಗಗಳಲ್ಲಿ ಬೆಂಚ್ ಬಲವನ್ನು ಹೆಚ್ಚಿಸುವುದು ಅವರ ಉಪಾಯವಾಗಿದೆ" ಎಂದು ಹೇಳಲಾಗಿದೆ.

ವಿಶೇಷ ತರಬೇತಿ ಪಡೆದಿರುವ ಆಸ್ಟ್ರೇಲಿಯಾ
ಆಸ್ಟ್ರೇಲಿಯಾ ಬ್ಯಾಟರ್ ಗಳು ಭಾರತದ ಸ್ಪಿನ್ ದಾಳಿಯನ್ನು ಎದುರಿಸಲು ವಿಶೇಷವಾದ ಸಿದ್ಧತೆ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ 5 ದಿನ ಅಭ್ಯಾಸ ಮಾಡಿದ ಅವರು ನೆಟ್ಸ್ನಲ್ಲಿ ಬೌಲಿಂಗ್ ಮಾಡಲು ಮಹೇಶ್ ಪಿಥಿಯಾ ಸೇರಿದಂತೆ ಭಾರತದ ಯುವ ಸ್ಪಿನ್ನರ್ ಗಳ ಮೊರೆ ಹೋಗಿದ್ದರು.
ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ವಿರುದ್ಧ ಆಡಲು ಆಸ್ಟ್ರೇಲಿಯಾ ವಿಶೇಷವಾಗಿ ಸಿದ್ಧತೆ ಮಾಡಿಕೊಂಡಿರುವುದರಿಂದ ದ್ರಾವಿಡ್ ಅವರಿಗೆ ವಿಶೇಷ ತರಬೇತಿ ನೀಡುವ ಮೂಲಕ ಬೌಲಿಂಗ್ ಶೈಲಿಯಲ್ಲಿ ಸ್ವಲ್ಪ ಬದಲಾವಣೆ ಮಾಡುವ ಉದ್ದೇಶವಿರಬಹುದು ಎನ್ನಲಾಗಿದೆ.

ಮೊದಲ ಟೆಸ್ಟ್ನಲ್ಲಿ ಮೂವರು ಸ್ಪಿನ್ನರ್ ಗಳು
ಮೊದಲನೇ ಟೆಸ್ಟ್ನಲ್ಲಿ ಭಾರತ ತಂಡದಲ್ಲಿ ಮೂವರು ಸ್ಪಿನ್ನರ್ ಗಳು ಆಡಲಿದ್ದಾರೆ ಎಂದು ಉಪನಾಯಕ ಕೆಎಲ್ ರಾಹುಲ್ ಮಂಗಳವಾರ ತಿಳಿಸಿದ್ದರು. ಜಡೇಜಾ ಮತ್ತು ಅಶ್ವಿನ್ ಮೊದಲ ಆಯ್ಕೆಯಾಗಿದ್ದು ಉಳಿದ ಒಂದು ಸ್ಥಾನಕ್ಕೆ ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ನಡುವೆ ಪೈಪೋಟಿ ನಡೆಯುತ್ತಿದೆ.
ನಾಗ್ಪುರ ಪಿಚ್ ಬಗ್ಗೆ ಅತೃಪ್ತಿ ಹೊಂದಿರುವ ಕೋಚ್ ರಾಹುಲ್ ದ್ರಾವಿಡ್ ಪಿಚ್ ಟೆಸ್ಟ್ ಆರಂಭಕ್ಕೆ ಮೂರು ದಿನಕ್ಕೆ ಮುನ್ನ ಪಿಚ್ ಬದಲಾವಣೆ ಮಾಡಲು ಕ್ಯುರೇಟರ್ ಗಳಿಗೆ ಒತ್ತಾಯಿಸಿದ್ದರು. ಅಧಿಕಾರಿಗಳು ಮತ್ತು ಕ್ಯುರೇಟರ್ ಗಳು ಪಿಚ್ ಬದಲಾವಣೆ ಮಾಡಲು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ.


Click it and Unblock the Notifications
