
ಪಿಚ್ ಅರ್ಥೈಸಲು ವಿಫಲ
ಟೀಮ್ ಇಂಡಿಯಾ ಇಂದೋರ್ ಟೆಸ್ಟ್ನ ಪಿಚ್ಚನ್ನು ಅರ್ಥೈಸಿಕೊಳ್ಳಲು ವಿಫಲವಾಗಿದೆ. ಅರ್ಥ ಮಾಡಿಕೊಳ್ಳುವ ವೇಳೆಗಾಗಲೇ ಟೀಮ್ ಇಂಡಿಯಾ ಆಲೌಟ್ ಆಗಿತ್ತು ಎಂಬುದು ವಿಪರ್ಯಾಸ. ತಂಡದ ಯಾವುದೇ ಆಟಗಾರ ಕ್ರೀಸ್ನಲ್ಲಿ ಹೆಚ್ಚು ಹೊತ್ತು ನೆಲೆಯೂರಲು ಸಾಧ್ಯವಾಗಲಿಲ್ಲ. ಇಂದೋರ್ನ ಪಿಚ್ನ ಲಾಭವನ್ನು ಭಾರತದ ಬ್ಯಾಟರ್ಗಳಿಗಿಂತಲೂ ಆಸ್ಟ್ರೇಲಿಯಾದ ಬೌಲರ್ಗಳು ಅದ್ಭುತವಾಗಿ ನಿಭಾಯಿಸುವಲ್ಲಿ ಯಶಸ್ವಿಯಾದರು. ಹೀಗಾಗಿ ಟೀಮ್ ಇಂಡಿಯಾ ಮೇಲೆ ಒತ್ತಡ ಹೇರಿ ವಿಕೆಟ್ ಕಬಳಿಸುವಲ್ಲಿ ಆಸ್ಟ್ರೇಲಿಯಾ ಯಶಸ್ವಿಯಾಗಿದೆ.

ಆತುರಪಟ್ಟ ಬ್ಯಾಟಿಂಗ್ ವಿಭಾಗ, ಅತಿಯಾದ ಆತ್ಮವಿಶ್ವಾಸ
ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗ ಇಂದೋರ್ ಟೆಸ್ಟ್ನಲ್ಲಿ ಆತುರಕ್ಕೆ ಒಳಪಟ್ಟು ವಿಕೆಟ್ ಕಳೆದುಕೊಂಡಿರುವುದು ಕೂಡ ಹಿನ್ನಡೆಗೆ ಕಾರಣವಾಗಿದೆ. ಸ್ವತಃ ನಾಯಕ ರೋಹಿತ್ ಶರ್ಮಾ ಅನಗತ್ಯ ಹೊಡೆತಕ್ಕೆ ಕೈಹಾಕಿ ವಿಕೆಟ್ ಕಳೆದುಕೊಂಡಿದ್ದಾರೆ. ಮೊದಲ ಓವರ್ನಲ್ಲಿಯೇ ಎರಡು ಜೀವದಾನ ಪಡೆದುಕೊಂಡರೂ ರೋಹಿತ್ ಶರ್ಮಾ ಅದನ್ನು ಸಮರ್ಥವಾಗಿ ಬಳಸಿಕೊಳ್ಳಲು ವಿಫಲವಾದರು. ಅಲ್ಲದೆ ಟೀಮ್ ಇಂಡಿಯಾ ಆಟಗಾರರ ಅತಿಯಾದ ಆತ್ಮವಿಶ್ವಾಸ ಕೂಡ ಈ ಪಂದ್ಯದ ಹಿನ್ನಡೆಗೆ ಕಾರಣವಾಗಿದೆ. ಮೊದಲ ಎರಡು ಪಂದ್ಯಗಳಲ್ಲಿ ಸುಲಭ ಗೆಲುವು ಸಾಧಿಸಿದ್ದ ಟೀಮ್ ಇಂಡಿಯಾ ಇಂದೋರ್ ಟೆಸ್ಟ್ಗೆ ಅತಿಯಾದ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದಿದ್ದರು. ಇದು ಕೂಡ ತಂಡದ ಹಿನ್ನಡೆಗೆ ಕಾರಣವಾಗಿದೆ.

ಆಸಿಸ್ ಸ್ಪಿನ್ನರ್ಗಳ ಶಿಸ್ತಿನ ಆಟ, ಸ್ಮಿತ್ ನಾಯಕತ್ವ
ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೂರನೇ ಪಂದ್ಯದ ಮೊದಲ ದಿನದ ಸಂಪೂರ್ಣ ಶ್ರೇಯಸ್ಸು ಆಸ್ಟ್ರೇಲಿಯಾದ ಸ್ಪಿನ್ ವಿಭಾಗಕ್ಕೆ ಸೇರುತ್ತದೆ. ಟಾಸ್ ಸೋತರು ಕೂಡ ಪಿಚ್ನ ಲಾಭವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾದರು. ಅದರಲ್ಲೂ ಸ್ಪಿನ್ನರ್ ಕನ್ನೇಮನ್ ಈ ಪಂದ್ಯದಲ್ಲಿ ಐದು ವಿಕೆಟ್ಗಳ ಗೊಂಚಲು ಪಡೆದಿದ್ದು ಅನುಭವಿ ನಾಥನ್ ಲಿಯಾನ್ 3 ವಿಎಕಟ್ ಸಂಪಾದಿಸಿದರು. ಇನ್ನು ಹಂಗಾಮಿ ನಾಯಕ ಸ್ಟೀವ್ ಸ್ಮಿತ್ ಇಂದೋರ್ ಪಿಚ್ನ ವರ್ತನೆಯನ್ನು ಶೀಘ್ರವಾಗಿ ಅರ್ಥೈಸಿಕೊಂಡು ಬೌಲರ್ಗಳನ್ನು ಪರಿಣಾಮಕಾರಿಯಾಗಿ ಬದಲಾಯಿಸಿಕೊಂಡು ಭಾರತದ ಮೇಲೆ ಒತ್ತಡ ಹೇರಿದ್ದಾರೆ. ಇದು ಕೂಡ ಟೀಮ್ ಇಂಡಿಯಾದ ಹಿನ್ನಡೆಗೆ ಕಾರಣವಾಯಿತು.


Click it and Unblock the Notifications
