
ಇದು ಒಟ್ಟು ತಂಡದ ನಿರ್ಧಾರ
"ಇಂಥಾ ಪಿಚ್ನಲ್ಲಿ ಆಡುವುದು ತಂಡದ ಒಟ್ಟಾರೆ ನಿರ್ಧಾರವಾಗಿತ್ತು. ಬ್ಯಾಟರ್ಗಳ ಮೇಲೆ ನಾಯವು ಹೆಚ್ಚುವರಿ ಒತ್ತಡವನ್ನು ಹೇರಲು ಬಯಸವುದಿಲ್ಲ. ನಾವು ಗೆದ್ದಾಗ ಯಾರು ಕೂಡ ಬ್ಯಾಟಿಂಗ್ ಬಗ್ಗೆ ಮಾತನಾಡುವುದಿಲ್ಲ. ನಾವು ಸೋಲು ಅನುಭವಿಸಿದಾಗ ಮಾತ್ರವೇ ಇದು ಸಾರ್ವಜನಿಕ ಚರ್ಚೆಯಾಗುತ್ತದೆ. ತಾವು ತಂಡವಾಗಿ ಇಂಥಾ ಪಿಚ್ನಲ್ಲಿ ಆಡುವ ನಿರ್ಧಾರವನ್ನು ತೆಗೆದುಕೊಂಡಿದ್ದೆವು. ನಮಗೆ ಬ್ಯಾಟಿಂಗ್ ನಡೆಸಲು ಕೂಡ ಇದು ಸವಾಲಾಗಲಿದೆ ಎಂಬುದು ತಿಳಿದಿದ್ದರೂ ನಾವು ಅದನ್ನು ಎದುರಿಸಲು ಸಿದ್ಧವಾಗಿದ್ದೆವು" ಎಂದಿದ್ದಾರೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ.

ಪಿಚ್ ಬಗ್ಗೆ ಮಾತನಾಡಿ ಸಾಕಾಗಿದೆ ಎಂದ ರೋಹಿತ್
ಇನ್ನು ಇಂದೋರ್ ಪಿಚ್ ಬಗೆಗಿನ ಚರ್ಚೆಗೂ ರೋಹಿತ್ ಶರ್ಮಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಿಚ್ ಬಗ್ಗೆ ಮಾತನಾಡಿ ಸಾಕಾಗಿದೆ ಎಂದ ರೋಹಿತ್ ಶರ್ಮಾ ಭಾರತದಲ್ಲಿ ಟೆಸ್ಟ್ ಆಡಿದಾಗ ಯಾವಾಗಲೂ ಪಿಚ್ ಬಗ್ಗೆಯೇ ಚರ್ಚೆಯಾಗುತ್ತದೆ ಎಂದಿದ್ದಾರೆ. ಇಂದೋರ್ನಲ್ಲಿ ಎರಡು ತಂಡಗಳು ಕೂಡ ಬ್ಯಾಟಿಂಗ್ ನಡೆಸಲು ಸಾಕಷ್ಟು ಪರದಾಡಿದ್ದು ಆತಿಥೇಯ ಭಾರತ ತಂಡ ಇಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ 109 ರನ್ಗಳಿಗೆ ಆಲೌಟ್ ಆದರೆ ಎರಡನೇ ಇನ್ನಿಂಗ್ಸ್ನಲ್ಲಿ 163 ರನ್ಗಳಿಸಿದ್ದಾರೆ.
"ಈಗ ಪಿಚ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತವೆ. ಪ್ರತಿ ಭಾರಿ ನಾವು ಭಾರತದಲ್ಲಿ ಆಡಿದಾಗಲೂ ಪಿಚ್ ಚರ್ಚೆಯ ಕೇಂದ್ರ ಬಿಂದುವಾಗಿರುತ್ತದೆ. ಯಾರೂ ಕೂಡ ನನ್ನಲ್ಲಿ ಲಿಯಾನ್ ಬಗ್ಗೆಯಾಗಲಿ ಪೂಜಾರ ಹಾಗೂ ಖವಾಜಾ ಎಷ್ಟು ಉತ್ತಮವಾಗಿ ಆಡಿದರು ಎಂಬುದನ್ನು ಕೇಳುವುದೇ ಇಲ್ಲ. ಅದರ ಬಗ್ಗೆ ಕೇಳಿದರೆ ನಾವು ವಿವರವಾಗಿ ಹೇಳಬಹುದು" ಎಂದಿದ್ದಾರೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ.
IND vs AUS 3rd Test: ಭಾರತ ತಂಡದಲ್ಲಿ ಆತನೊಬ್ಬ ಇದ್ದಿದ್ದರೆ ಇವರಿಬ್ಬರ ಆಟ ನಡೆಯುತ್ತಿರಲಿಲ್ಲ; ಕನೇರಿಯಾ

ಕೆಲ ಆಟಗಾರರು ಒತ್ತಡದಲ್ಲಿದ್ದಾರೆ
"ನಾವು ಆಡಲು ಬಯಸುವುದು ಇಂಥಾ ಪಿಚ್ನಲ್ಲಿಯೇ.ಇದು ನಮ್ಮ ಸಾಮರ್ಥ್ಯ. ಹೊರಗಡೆ ಜನರು ಏನು ಮಾತನಾಡುತ್ತಾರೆ ಎಂಬುದನ್ನು ನಾವು ತೆಲೆಕೆಡಿಸುವುದಿಲ್ಲ. ನಾವು ಫಲಿತಾಂಶಗಳನ್ನು ಪಡೆಯದಿದ್ದರೆ ಅದು ವಿಭಿನ್ನವಾಗಿರುತ್ತಿತ್ತು. ಆದರೆ ನಾವು ಫಲಿತಾಂಶಗಳನ್ನು ಪಡೆಯುತ್ತಿದ್ದೇವೆ. ಕೆಲ ಬ್ಯಾಟರ್ಗಳು ಒತ್ತಡದಲ್ಲಿದ್ದಾರೆ, ಕೆಲವು ಆಟಗಾರರು ಕಠಿಣ ಫಾರ್ಮ್ನಲ್ಲಿದ್ದಾರೆ ಆದರೆ ಅದು ಸರಿ ಹೋಗುತ್ತದೆ" ಎಂದಿದ್ದಾರೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ.
ಇಂದೋರ್ ಟೆಸ್ಟ್ ಮೂರು ದಿನಕ್ಕೆ ಮುಕ್ತಾಯವಾದ ಬಳಿಕ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಅಂತಿಮ ಟೆಸ್ಟ್ಗಾಗಿ ಅಹ್ಮದಾಬಾದ್ಗೆ ಪ್ರಯಾಣಿಸಲಿದೆ. ಮಾರ್ಚ್ 9ರಿಂದ ನರೇಂದ್ರಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯ ಆರಂಭವಾಗಲಿದೆ.


Click it and Unblock the Notifications
