ಜಡೇಜಾ ಭಾರತದ ಪ್ರಮುಖ ಅಸ್ತ್ರ
ಮೊಣಕಾಲು ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಆಲ್ರೌಂಡರ್ ರವೀಂದ್ರ ಜಡೇಜಾ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮಿಂಚಲು ಸಿದ್ಧವಾಗಿದ್ದಾರೆ.
2017ರಲ್ಲಿ ಭಾರತದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಜಡೇಜಾ ಅದ್ಭುತ ಪ್ರದರ್ಶನ ನೀಡಿದ್ದರು. ಸರಣಿಯಲ್ಲಿ 25 ವಿಕೆಟ್ ಪಡೆಯುವ ಮೂಲ ಸರಣಿಯ ಆಟಗಾರ ಪ್ರಶಸ್ತಿ ಪಡೆದುಕೊಂಡಿದ್ದರು. ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಅತ್ಯುತ್ತಮ ಬ್ಯಾಟಿಂಗ್ ಮಾಡುವುದು ಭಾರತಕ್ಕೆ ದೊಡ್ಡ ಆಸ್ತಿಯಾಗಿದೆ. ಇತ್ತೀಚೆಗೆ ರಣಜಿ ಟ್ರೋಫಿ ಪಂದ್ಯದಲ್ಲಿ ಸೌರಾಷ್ಟ್ರ ನಾಯಕನಾಗಿ ಆಡಿದ್ದ ಜಡೇಜಾ, ತಮಿಳುನಾಡು ವಿರುದ್ಧದ ಪಂದ್ಯದಲ್ಲಿ 8 ವಿಕೆಟ್ ಪಡೆದು ಎದುರಾಳಿಗಳಿಗೆ ಈಗಾಗಲೇ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಇದುವರೆಗೂ ಮೂರು ಬಾರಿ ಲ್ಯಾಬುಸ್ಚಾಗ್ನೆ ವಿಕೆಟ್ ಪಡೆದಿದ್ದಾರೆ. ನಂಬರ್ 1 ಬ್ಯಾಟರ್ ಮತ್ತು ನಂಬರ್ 1 ಆಲ್ರೌಂಡರ್ ನಡುವಿನ ಹಣಾಹಣಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಅಶ್ವಿನ್ ಬೌಲಿಂಗ್ ಬಗ್ಗೆ ಭಯ
ರವಿಚಂದ್ರನ್ ಅಶ್ವಿನ್ ಕಳೆದ ಬಾರಿ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಹೆಚ್ಚಿನ ತೊಂದರೆ ನೀಡಿದ್ದರು. ಮಾರ್ನಸ್ ಲ್ಯಾಬುಸ್ಚಾಗ್ನೆಯವರನ್ನು ಎರಡು ಬಾರಿ ಔಟ್ ಮಾಡಿದ್ದರು.
ರವಿಚಂದ್ರನ್ ಅಶ್ವಿನ್ ಬೌಲಿಂಗ್ ವಿರುದ್ಧ ಆಡಲು ಲ್ಯಾಬುಸ್ಚಾಗ್ನೆ ಕಷ್ಟಪಟ್ಟಿರುವುದು ಸ್ಪಷ್ಟವಾಗಿ ತಿಳಿದಿದೆ. ರವಿಚಂದ್ರನ್ ಅಶ್ವಿನ್ ಬೌಲಿಂಗ್ನಲ್ಲಿ ಆಡುವುದು ಕಷ್ಟ ಎಂದು ಲ್ಯಾಬುಸ್ಚಾಗ್ನೆ ಒಪ್ಪಿಕೊಂಡಿದ್ದಾರೆ. ಅವರ ಬೌಲಿಂಗ್ ಎದುರಿಸಲು ಬ್ಯಾಟಿಂಗ್ ಶೈಲಿಯಲ್ಲಿ ಬದಾಲಾವಣೆ ಮಾಡಿಕೊಳ್ಳಬೇಕಾಯಿತು ಎಂದು ಅವರು ಒಪ್ಪಿಕೊಂಡಿದ್ದಾರೆ.
ಇಬ್ಬರೂ ಕೂಡ ಅತ್ಯಂತ ಬುದ್ಧಿವಂತ ಆಟಗಾರರು, ಟೆಸ್ಟ್ ಆಟದಲ್ಲಿ ಕೌಶಲ್ಯದ ಜೊತೆ ಮೈಂಡ್ ಗೇಮ್ ಕೂಡ ಮುಖ್ಯವಾಗುತ್ತದೆ. ಯಾರು ಯಾರ ಮೇಲೆ ಸವಾರಿ ಮಾಡುತ್ತಾರೆ ಎನ್ನುವುದು ಫೆಬ್ರವರಿ 9ರ ಬಳಿಕ ತಿಳಿಯಲಿದೆ.
ಮೊಹಮ್ಮದ್ ಸಿರಾಜ್ ಸ್ವಿಂಗ್
ಮೊಹಮ್ಮದ್ ಸಿರಾಜ್ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯದಲ್ಲಿ ಮೊದಲು ಔಟ್ ಮಾಡಿದ್ದೇ ಮಾರ್ನಸ್ ಲ್ಯಾಬುಸ್ಚಾಗ್ನೆಯವರನ್ನು. ಸಿರಾಜ್ ಇಂದು ಭಾರತದ ಪ್ರಮುಖ ಬೌಲರ್ ಗಳಲ್ಲಿ ಒಬ್ಬರು. ಏಕದಿನ ಮಾದರಿಯಲ್ಲಿ ಸದ್ಯ ನಂಬರ್ 1 ಆಗಿರುವ ಸಿರಾಜ್ ಆಸ್ಟ್ರೇಲಿಯಾ ತಂಡಕ್ಕೆ ಸಾಕಷ್ಟು ತೊಂದರೆ ಕೊಟ್ಟಿದ್ದಾರೆ.
ಕಳೆದ ಬಾರಿ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಸಿರಾಜ್ 13 ವಿಕೆಟ್ ಪಡೆದುಕೊಂಡಿದ್ದರು. ಅವರು ಎರಡು ಬಾರಿ ಲ್ಯಾಬುಸ್ಚಾಗ್ನೆಯನ್ನು ಔಟ್ ಮಾಡಿದ್ದಾರೆ. ಪಿಚ್ ಏನಾದರೂ ಸ್ವಿಂಗ್ಗೆ ನೆರವು ನೀಡಿದರೆ ಸಿರಾಜ್ ಮಾರಕವಾಗುತ್ತಾರೆ.