ಬೆಂಕಿಯನ್ನು ಪ್ರಚೋದಿಸುವ ಅಗತ್ಯವಿಲ್ಲ ಎಂದ ಮೈಕಲ್ ವಾನ್
ಟೀಮ್ ಇಂಡಿಯಾ ತಂಟೆಗೆ ಹೋಗಬೇಡಿ ಎಂದು ಆಂಗ್ಲರಿಗೆ ಎಚ್ಚರಿಕೆಯನ್ನು ನೀಡಿರುವ ಮೈಕಲ್ ವಾನ್ ಪಂದ್ಯದ ವೇಳೆ ಟೀಮ್ ಇಂಡಿಯಾ ಆಟಗಾರರನ್ನು ಯಾವುದೇ ಕಾರಣಕ್ಕೂ ಪ್ರಚೋದಿಸಲು ಹೋಗಬೇಡಿ, ಟೀಮ್ ಇಂಡಿಯಾ ಆಟಗಾರರು ಬೆಂಕಿಯಿದ್ದಂತೆ ಅವರನ್ನು ಪ್ರಚೋದಿಸುವುದು ಅನಗತ್ಯ ಎಂದು ಮೈಕಲ್ ವಾನ್ ಎಚ್ಚರಿಕೆ ನೀಡಿದ್ದಾರೆ.
ಕೊಹ್ಲಿ ಮತ್ತು ರವಿ ಶಾಸ್ತ್ರಿ ಗರಡಿಯ ಹುಡುಗರು ತುಂಬಾ ಶಕ್ತಿಶಾಲಿ
ಇನ್ನೂ ಮುಂದುವರೆದು ಮಾತನಾಡಿರುವ ಮೈಕಲ್ ವಾನ್ ಪ್ರಸ್ತುತ ಭಾರತ ತಂಡದ ಆಟಗಾರರು ತುಂಬಾ ಶಕ್ತಿಶಾಲಿಗಳು, ಈಗಿರುವ ಭಾರತ ತಂಡ ತುಂಬಾ ತುಂಬಾ ಶಕ್ತಿಶಾಲಿ, ಅವರು ಕೊಹ್ಲಿ ಮತ್ತು ರವಿ ಶಾಸ್ತ್ರಿ ನೇತೃತ್ವದಲ್ಲಿ ಪಳಗಿರುವ ಆಟಗಾರರು. ಅಂಥವರನ್ನು ಕೆಣಕಿ ಕೆಟ್ಟ ಪರಿಸ್ಥಿತಿ ನಿರ್ಮಿಸಿಕೊಳ್ಳುವುದು ಬೇಡ ಎಂದು ಮೈಕಲ್ ವಾನ್ ಎಚ್ಚರಿಸಿದ್ದಾರೆ.
ಭಾರತೀಯರನ್ನು ಆಗಸ್ಟ್ 15ರಂದು ಕೆಣಕಬೇಡಿ ಎಂದಿದ್ದ ವಾಸಿಮ್ ಜಾಫರ್
ಇನ್ನು ಈ ಪಂದ್ಯದ ಕುರಿತು ಪ್ರತಿಕ್ರಿಯೆ ನೀಡಿದ್ದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಸ್ವಾತಂತ್ರ್ಯ ದಿನಾಚರಣೆಯ ದಿನ ಯಾವುದೇ ಕಾರಣಕ್ಕೂ ಭಾರತೀಯರನ್ನು ಕೆಣಕಬೇಡಿ ಕೆಣಕಿದರೆ ಅದರ ಫಲಿತಾಂಶ ಇದೇ ರೀತಿ ಇರುತ್ತದೆ ಎಂದು ಎದುರಾಳಿಗಳಿಗೆ ಎಚ್ಚರಿಕೆ ನೀಡಿದರು.