For Quick Alerts
ALLOW NOTIFICATIONS  
For Daily Alerts
 

ಭಾರತದಲ್ಲಿ ಇಂಗ್ಲೆಂಡ್‌ನ 'ಬಜ್‌ಬಾಲ್' ಆಟ ನಡೆಯಲ್ಲ; ಸೌರವ್ ಗಂಗೂಲಿ

ಸದ್ಯ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಗೆಲ್ಲಲು ಆತಿಥೇಯ ಭಾರತಕ್ಕೆ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಬೆಂಬಲ ನೀಡಿದ್ದಾರೆ.

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ ಸುಮಾರು 350 ರನ್ ಗಳಿಸಿದ್ದರೆ ಉತ್ತಮ ಅವಕಾಶವನ್ನು ಹೊಂದಬಹುದಿತ್ತು ಎಂದು ಸೌರವ್ ಗಂಗೂಲಿ ಹೇಳಿದರು.

IND vs ENG: Englands Buzzball Game Will Not Work in India Says Sourav Ganguly

"ಭಾರತ ತಂಡವು ಸರಣಿಯನ್ನು ಗೆಲ್ಲುತ್ತದೆ. ಅದನ್ನು 4-0 ಅಥವಾ 5-0 ಅಂತರದಲ್ಲಿ ಗೆಲ್ಲುತ್ತಾರೆಯೇ ಎಂಬುದು ವಿಷಯ. ಪ್ರತಿ ಟೆಸ್ಟ್ ಪಂದ್ಯ ನಿರ್ಣಾಯಕವಾಗಿರುತ್ತದೆ. ಇಂಗ್ಲೆಂಡ್ ಅವರು ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದರೆ ಮೊದಲ ಟೆಸ್ಟ್ ಪಂದ್ಯವನ್ನು ಗೆಲ್ಲಬಹುದಿತ್ತು," ಎಂದು ಟೀಮ್ ಇಂಡಿಯಾ ಮಾಜಿ ನಾಯಕ ಅಭಿಪ್ರಾಯಪಟ್ಟರು.

"ಭಾರತದ ನೆಲದಲ್ಲಿ 230 ಅಥವಾ 240 ರನ್ ಗಳಿಸಿ ಭಾರತ ವಿರುದ್ಧ ಗೆಲ್ಲಲು ಸಾಧ್ಯವಿಲ್ಲ. ಇಂಗ್ಲೆಂಡ್ 350 ಅಥವಾ 400 ರನ್ ಗಳಿಸಿದ್ದರೆ, ಅವರು ಭಾರತವನ್ನು ಸೋಲಿಸಬಹುದಿತ್ತು. ಆದರೆ ಅವರು ಅದನ್ನು ಮಾಡಲು ಸಾಧ್ಯವಾಗಲಿಲ್ಲ. ಇದು ಇಂಗ್ಲೆಂಡ್‌ಗೆ ಕಠಿಣ ಸರಣಿಯಾಗಿದೆ. ಆ ಯುಗದ ಆಸ್ಟ್ರೇಲಿಯಾ ಹೊರತುಪಡಿಸಿ ಯಾವುದೇ ತಂಡವು ಇಲ್ಲಿ ಯಾವುದೇ ಪ್ರಭಾವವನ್ನು ಸೃಷ್ಟಿಸಲು ಸಾಧ್ಯವಾಗಲಿಲ್ಲ," ಎಂದು ಸೌರವ್ ಗಂಗೂಲಿ ತಿಳಿಸಿದರು.

ಇಂಗ್ಲೆಂಡ್‌ನ ಬಜ್‌ಬಾಲ್‌ ವಿಧಾನದ ಕುರಿತು ಮಾತನಾಡಿದ ಸೌರವ್ ಗಂಗೂಲಿ, ಭಾರತದ ಸ್ಪಿನ್ನಿಂಗ್ ಟ್ರ್ಯಾಕ್‌ಗಳಿಗೆ ಅವರ ಆಟ ಅನ್ವಯಿಸುವುದಿಲ್ಲ ಎಂದು ಹೇಳಿದರು.

IND vs ENG: Englands Buzzball Game Will Not Work in India Says Sourav Ganguly

"ಬಜ್‌ಬಾಲ್ ಪಂದ್ಯವನ್ನು ವೇಗವಾಗಿ ಆಡುವ ಒಂದು ವಿಧಾನವಾಗಿದೆ. ಭಾರತವು ಸ್ಪಿನ್ ವಿಕೆಟ್‌ಗಳನ್ನು ಹೊಂದಿದೆ ಮತ್ತು ಆದ್ದರಿಂದ, ಬಜ್‌ಬಾಲ್ ಆಟ ಇಲ್ಲಿ ಅನ್ವಯಿಸುವುದಿಲ್ಲ," ಎಂದು ಸೌರವ್ ಗಂಗೂಲಿ ತಿಳಿಸಿದರು.

ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ (ಯುಎಸ್ಎ) ನಲ್ಲಿ ನಡೆಯಲಿರುವ 2024ರ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಭಾರತ ತಂಡವನ್ನು ಮಾಜಿ ನಾಯಕ ಸೌರವ್ ಗಂಗೂಲಿ ಬೆಂಬಲಿಸಿದರು.

"ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಉತ್ತಮ ಅವಕಾಶವಿದೆ, ಇತ್ತೀಚೆಗೆ ಭಾರತ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಡಿದ್ದು, ಆಸ್ಟ್ರೇಲಿಯಾ ವಿರುದ್ಧ ಸೋತಿದ್ದು ಶೋಚನೀಯವಾಗಿತ್ತು. ಆದರೆ, ಪಂದ್ಯಾವಳಿಯುದ್ದಕ್ಕೂ ಉತ್ತಮ ರೀತಿಯಲ್ಲಿ ಆಡಿದ ನಂತರ, ಸೋಲುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ, ಆದರೆ ಇದು ಕ್ರೀಡೆಗಳಲ್ಲಿ ಸಂಭವಿಸುತ್ತದೆ," ಎಂದು ಹೇಳಿದರು.

"ಭಾರತ ತುಂಬಾ ಉತ್ತಮ ತಂಡವಾಗಿದೆ. ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಪರಿಸ್ಥಿತಿಗಳು ಭಾರತದಂತೆಯೇ ಇರುವುದರಿಂದ ಭಾರತಕ್ಕೆ ಮತ್ತೊಂದು ಅವಕಾಶ ದೊರೆಯಲಿದೆ. ಮುಂಬರುವ ಐಪಿಎಲ್ ಪಂದ್ಯಾವಳಿ ವಿಶ್ವಕಪ್‌ಗೆ ಸಿದ್ಧತೆಯಾಗಿ ಕಾರ್ಯನಿರ್ವಹಿಸುತ್ತದೆ," ಎಂದು ಅಭಿಪ್ರಾಯಪಟ್ಟರು.

ಯಶಸ್ವಿ ಜೈಸ್ವಾಲ್ ಎಲ್ಲ ಸ್ವರೂಪದ ಆಟಗಾರ ಎಂದ ಸೌರವ್ ಗಂಗೂಲಿ
ವಿರಾಟ್ ಕೊಹ್ಲಿ ಸೇರಿದಂತೆ ಇತರ ದೊಡ್ಡ ಆಟಗಾರರ ಅನುಪಸ್ಥಿತಿಯಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ಅವರಂತಹವರು ತಮ್ಮ ಅವಕಾಶಗಳನ್ನು ಎರಡೂ ಕೈಗಳಿಂದ ಹಿಡಿಯಬೇಕಾಗಿದೆ ಎಂದು ಸೌರವ್ ಗಂಗೂಲಿ ಹೇಳಿದರು.

"ಈ ಯುವ ಆಟಗಾರರು ಭಾರತ ತಂಡಕ್ಕಾಗಿ ಆಡಲು ಅರ್ಹರು. ಹಿರಿಯ ಆಟಗಾರರು ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಅವರು ಕೆಲವು ಟೆಸ್ಟ್ ಪಂದ್ಯಗಳನ್ನು ಕಳೆದುಕೊಳ್ಳುತ್ತಾರೆ. ಇದು ಯುವ ಆಟಗಾರರಿಗೆ ಉತ್ತಮ ಅವಕಾಶವಾಗಿದೆ. ಯಶಸ್ವಿ ಚೆನ್ನಾಗಿ ಆಡಿದ್ದು, ಶುಭ್ಮನ್ ಚೆನ್ನಾಗಿ ಆಡಬೇಕಿದೆ. ಬ್ಯಾಟಿಂಗ್ ಲೈನ್‌ಅಪ್‌ನಲ್ಲಿ ಸ್ಥಾನಕ್ಕಾಗಿ ಸಾಕಷ್ಟು ಪೈಪೋಟಿ ಇದೆ".

"ನನ್ನ ಪ್ರಕಾರ, ಯಶಸ್ವಿ ಜೈಸ್ವಾಲ್ ಎಲ್ಲ ಸ್ವರೂಪದ ಆಟಗಾರ. ರಿಷಭ್ ಪಂತ್ ಅವರು ಗಾಯದಿಂದ ಚೇತರಿಸಿಕೊಂಡ ನಂತರ, ದೊಡ್ಡ ಆಟಗಾರರಾಗಿದ್ದಾರೆ. ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಮತ್ತು ಶುಭ್ಮನ್ ಗಿಲ್ ಸಾಕಷ್ಟು ಹೊಂದಿಕೊಳ್ಳಬೇಕು," ಎಂದರು.

Story first published: Sunday, January 28, 2024, 11:20 [IST]
Other articles published on Jan 28, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+