For Quick Alerts
ALLOW NOTIFICATIONS  
For Daily Alerts
 

'ಯಾರನ್ನೂ ಬಲವಂತ ಮಾಡಲ್ಲ, ಆಯ್ಕೆ ಅವನದು': ಇಶಾನ್ ಕಿಶನ್ ವಿಚಾರದಲ್ಲಿ ರಾಹುಲ್ ದ್ರಾವಿಡ್ ಖಡಕ್ ಸಂದೇಶ!

ಸೋಮವಾರ, ಜನವರಿ 5ರಂದು ವಿಶಾಖಪಟ್ಟಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಭಾರತ ತಂಡವು 106 ರನ್‌ಗಳಿಂದ ಗೆಲುವು ಸಾಧಿಸುವ ಮೂಲಕ ಐದು ಪಂದ್ಯಗಳ ಸರಣಿಯು 1-1 ಅಂತರದ ಸಮಬಲಗೊಂಡಿದೆ.

ಪಂದ್ಯದ ನಂತರ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಸುದ್ದಿಗೋಷ್ಠಿಯಲ್ಲಿ ಕೆಲವು ಪ್ರಶ್ನೆಗಳಿಗೆ ನೇರವಾಗಿ ಮತ್ತು ಪ್ರಾಮಾಣಿಕವಾಗಿ ಉತ್ತರಿಸಿದ್ದಾರೆ.

IND vs ENG: Rahul Dravid Send A Strong Message Regarding Ishan Kishans Comeback

ಸದ್ಯ ಭಾರತ ತಂಡದಿಂದ ಹೊರಗುಳಿದಿರುವ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ಕುರಿತ ಪ್ರಶ್ನೆಗೆ ರಾಹುಲ್ ದ್ರಾವಿಡ್ ಸ್ವಲ್ಪ ಖಾರವಾಗಿಯೇ ಪ್ರತಿಕ್ರಿಸಿದರು.

ಇಶಾನ್ ಕಿಶನ್ ಅವರು ಕೆಲವು ರೀತಿಯ ಕ್ರಿಕೆಟ್ ಅನ್ನು ಯಾವಾಗ ಆಡಲು ಪ್ರಾರಂಭಿಸುತ್ತಾರೆ ಎಂಬುದನ್ನು ನಿರ್ಧರಿಸುವ ಅಗತ್ಯವಿದೆ ಮತ್ತು ನಂತರ ಮಾತ್ರ ಅವರನ್ನು ರಾಷ್ಟ್ರೀಯ ಆಯ್ಕೆಗೆ ಪರಿಗಣಿಸಬಹುದು. ಅಂತರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್ ಎರಡರಿಂದಲೂ ಇಶಾನ್ ಕಿಶನ್ ಅವರ ಸುದೀರ್ಘ ವಿರಾಮದ ಪ್ರಶ್ನೆಗಳನ್ನು ಉದ್ದೇಶಿಸಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸೋಮವಾರ ಹೇಳಿದರು.

ಬಹಳ ಹಿಂದೆಯೇ ಎಲ್ಲ ಸ್ವರೂಪಗಳಾದ್ಯಂತ ಭಾರತ ತಂಡದ ಸಾಮಾನ್ಯ ಸದಸ್ಯನಾಗಿರುವ ಇಶಾನ್ ಕಿಶನ್ ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ಮಧ್ಯದಲ್ಲಿ ವೈಯಕ್ತಿಕ ಕಾರಣಗಳನ್ನು ನೀಡಿ ವಿರಾಮವನ್ನು ಕೇಳಿದಾಗಿನಿಂದ ಕ್ರಿಕೆಟ್‌ನಿಂದ ಕಾಣೆಯಾಗಿದ್ದಾರೆ.

ಇಶಾನ್ ಕಿಶನ್ ನವೆಂಬರ್‌ನಲ್ಲಿ ಕೊನೆಯ ಬಾರಿಗೆ ಭಾರತ ತಂಡಕ್ಕೆ ಆಡಿದ್ದರು ಮತ್ತು ಸದ್ಯ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಜಾರ್ಖಂಡ್ ತಂಡದ ಪರವಾಗಿಯೂ ಕಾಣಿಸಿಕೊಂಡಿಲ್ಲ.

ಇನ್ನು ಇಂಗ್ಲೆಂಡ್ ವಿರುದ್ಧ ಸರಣಿ ಸಮಬಲದ ಗೆಲುವಿನ ನಂತರ, ರಾಹುಲ್ ದ್ರಾವಿಡ್ ಮತ್ತೊಮ್ಮೆ ಇಶಾನ್ ಕಿಶನ್ ಅನುಪಸ್ಥಿತಿಯ ಕುರಿತು ಊಹಾಪೋಹಗಳನ್ನು ತೆರವುಗೊಳಿಸಲು ಪ್ರಯತ್ನಿಸಿದರು.

"ಯಾವುದೇ ಆಟಗಾರನಿಗೂ ಭಾರತ ತಂಡಕ್ಕೆ ಹಿಂತಿರುಗಲು ದಾರಿ ಇದೆ. ನಾನು ಇಶಾನ್ ಕಿಶನ್ ಬಗ್ಗೆ ಮಾತ್ರ ಪಾಯಿಂಟ್ ಮಾಡಿ ಹೇಳಲು ಬಯಸುವುದಿಲ್ಲ. ಇದನ್ನು ನಾನು ಸಾಧ್ಯವಾದಷ್ಟು ಉತ್ತಮವಾಗಿ ವಿವರಿಸಲು ಪ್ರಯತ್ನಿಸಿದ್ದೇನೆ. ವಿಷಯವೆಂದರೆ, ಇಶಾನ್ ಕಿಶನ್ ವಿರಾಮ ಕೋರಿದ್ದರು, ಅವರಿಗೆ ವಿಶ್ರಾಂತಿ ನೀಡಲು ನಾವು ಸಂತೋಷಪಟ್ಟಿದ್ದೇವೆ," ಎಂದು ಮಾಧ್ಯಮ ಸಂವಾದದಲ್ಲಿ ರಾಹುಲ್ ದ್ರಾವಿಡ್ ಹೇಳಿದರು.

"ಇಶಾನ್ ಕಿಶನ್ ಯಾವಾಗಲಾದರೂ ಸಿದ್ಧನಾಗಿದ್ದರೆ, ಅವನು ದೇಶೀಯ ಕ್ರಿಕೆಟ್ ಆಡಲೇಬೇಕೆಂದು ನಾನು ಹೇಳಲಿಲ್ಲ. ಅವನು ಸಿದ್ಧವಾದಾಗ, ಅವನು ಸ್ವಲ್ಪ ಕ್ರಿಕೆಟ್ ಆಡಬೇಕು ಮತ್ತು ಹಿಂತಿರುಗಬೇಕು ಎಂದು ನಾನು ಹೇಳಿದೆ. ಆಯ್ಕೆ ಅವನದು, ನಾವು ಎಲ್ಲವನ್ನೂ ಮಾಡಲು ಅವರನ್ನು ಒತ್ತಾಯಿಸುತ್ತಿಲ್ಲ," ಎಂದು ರಾಹುಲ್ ದ್ರಾವಿಡ್ ಖಡಕ್ ಸಂದೇಶ ಮತ್ತು ಈ ವಿಷಯದ ಬಗ್ಗೆ ತಂಡದ ಮ್ಯಾನೇಜ್‌ಮೆಂಟ್ ನಿಲುವನ್ನು ಸ್ಪಷ್ಟಪಡಿಸಿದರು.

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಸರಣಿಯಲ್ಲಿ ಕೆಎಸ್ ಭರತ್ ಅವರ ಕಳಪೆ ಪ್ರದರ್ಶನವನ್ನು ಪರಿಗಣಿಸಿದರೆ, ಇಶಾನ್ ಕಿಶನ್ ಅವರ ಸೇವೆಯನ್ನು ಭಾರತವು ಪಡೆಬಹುದು.

2022ರ ಡಿಸೆಂಬರ್‌ನಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡ ರಿಷಭ್ ಪಂತ್ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಕೆಎಸ್ ಭರತ್ ಜೊತೆಗೆ ಧ್ರುವ್ ಜುರೆಲ್ ಕೂಡ ಇಂಗ್ಲೆಂಡ್ ವಿರುದ್ಧ ಮೊದಲ ಎರಡು ಟೆಸ್ಟ್‌ ಪಂದ್ಯಗಳ ಭಾಗವಾಗಿದ್ದರು.

"ನಾವು ರಿಷಭ್ ಪಂತ್ ಜೊತೆ ನಾವು ಸಂಪರ್ಕದಲ್ಲಿಲ್ಲ ಎಂದು ಅಲ್ಲ, ಸಂಪರ್ಕದಲ್ಲಿದ್ದೇವೆ. ಅವರು ಇನ್ನೂ ಸರಿಯಾಗಿ ಆಡಲು ಪ್ರಾರಂಭಿಸಿಲ್ಲ, ಆದ್ದರಿಂದ ಈ ಸಮಯದಲ್ಲಿ ನಾವು ಪರಿಗಣಿಸಬಹುದಾದ ವಿಷಯವಲ್ಲ".

"ಏಕೆಂದರೆ ರಿಷಭ್ ಪಂತ್ ಸಂಪೂರ್ಣವಾಗಿ ಸಿದ್ಧವಾಗಿಲ್ಲ ಎಂದು ನಮಗೆ ತಿಳಿದಿದೆ. ಅವನು ಯಾವಾಗ ಸಿದ್ಧನಾಗಬೇಕೆಂದು ಅವನು ನಿರ್ಧರಿಸುತ್ತಾನೆ. ರಿಷಭ್ ಪಂತ್ ಗಾಯಗೊಂಡಿರುವ ಮತ್ತು ಇತರ ವಿಷಯಗಳೊಂದಿಗೆ ನಮಗೆ ಆಯ್ಕೆಗಳಿವೆ. ಆಯ್ಕೆಗಾರರು ಎಲ್ಲಾ ಆಯ್ಕೆಗಳನ್ನು ಪರಿಗಣಿಸುತ್ತಾರೆ ಎಂದು ನನಗೆ ಖಾತ್ರಿಯಿದೆ," ಎಂದು ರಾಹುಲ್ ದ್ರಾವಿಡ್ ತಿಳಿಸಿದರು.

Story first published: Tuesday, February 6, 2024, 8:36 [IST]
Other articles published on Feb 6, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+