For Quick Alerts
ALLOW NOTIFICATIONS  
For Daily Alerts
 

IND vs ENG: ಸರ್ಫರಾಜ್ ಖಾನ್‌ ರನೌಟ್‌ಗೆ ಕ್ಷಮೆ ಕೇಳಿದ ರವೀಂದ್ರ ಜಡೇಜಾ!

ಗುರುವಾರ, ಫೆಬ್ರವರಿ 15ರಂದು ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡ ಉತ್ತಮ ಕಲೆಹಾಕಿದೆ.

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ 131 ರನ್ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ಅಜೇಯ 110 ರನ್‌ಗಳ ಶತಕ ಹಾಗೂ ಸರ್ಫರಾಜ್ ಖಾನ್ ಅವರ ಅಮೋಘ ಅರ್ಧಶತಕದ ನೆರವಿನಿಂದ ಭಾರತ ತಂಡ ಮೊದಲ ದಿನದಾಟದಂತ್ಯಕ್ಕೆ 86 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 315 ರನ್ ಗಳಿಸಿದೆ.

IND vs ENG: Ravindra Jadeja Apologizes For Sarfaraz Khan Run Out In 3rd Test

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ 33 ರನ್‌ಗಳಿಗೆ ಅಗ್ರ ಕ್ರಮಾಂಕದ 3 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿತ್ತು. ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಜೋಡಿ ನಾಲ್ಕನೇ ವಿಕೆಟ್‌ಗೆ 204 ರನ್‌ಗಳ ಜೊತೆಯಾಟ ನಿರ್ಮಿಸಿ ಭಾರತದ ಹೋರಾಟಕ್ಕೆ ಮರುಜೀವ ನೀಡಿದರು.

ನಾಯಕ ರೋಹಿತ್ ಶರ್ಮಾ 196 ಎಸೆತಗಳಲ್ಲಿ 14 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಮೇತ 131 ರನ್ ಗಳಿಸಿ ಔಟಾದರೆ, ನಂತರ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ರವೀಂದ್ರ ಜಡೇಜಾ ಕೂಡ ಶತಕ ಬಾರಿಸಿದ ಅಬ್ಬರಿಸಿದರು.

ಇನ್ನು ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯದಲ್ಲೇ ಅರ್ಧಶತಕ ಬಾರಿಸಿ ಉತ್ತಮವಾಗಿ ಆಡುತ್ತಿದ್ದ ಸರ್ಫರಾಜ್ ಖಾನ್ ರನೌಟ್ ಆಗಿದ್ದಕ್ಕೆ ರವೀಂದ್ರ ಜಡೇಜಾ ಕ್ಷಮೆಯಾಚಿಸಿದ್ದಾರೆ. ಶತಕವೀರ ರವೀಂದ್ರ ಜಡೇಜಾ ಅವರು ಇನ್‌ಸ್ಟಾಗ್ರಾಮ್ ಸ್ಟೋರಿನಲ್ಲಿ ಸರ್ಫರಾಜ್ ಖಾನ್ ಅವರ ರನೌಟ್ ಹೊಣೆಯನ್ನು ಹೊತ್ತುಕೊಂಡರು.

IND vs ENG: Ravindra Jadeja Apologizes For Sarfaraz Khan Run Out In 3rd Test

ಸರ್ಫರಾಜ್ ಖಾನ್ 62 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾಗ ರವೀಂದ್ರ ಜಡೇಜಾ ಅವರು ತಮ್ಮ 4ನೇ ಟೆಸ್ಟ್ ಶತಕ ತಲುಪಲು ಇಲ್ಲದ ಸಿಂಗಲ್ ರನ್ ತೆಗೆದುಕೊಳ್ಳಲು ಪ್ರಯತ್ನಿಸಿದರು. ಆದರೆ, ಆಲ್‌ರೌಂಡರ್ ಚೊಚ್ಚಲ ಆಟಗಾರ ಸರ್ಫರಾಜ್ ಖಾನ್‌ರನ್ನು ನಾನ್ ಸ್ಟ್ರೈಕರ್‌ನತ್ತ ಮರಳಿಸಲು ನಿರ್ಧರಿಸಿದರು, ಆದರೆ ಅದು ತುಂಬಾ ತಡವಾಗಿತ್ತು.

ಮಾರ್ಕ್ ವುಡ್ ನೇರವಾಗಿ ಥ್ರೋ ಮೂಲಕ ಸ್ಟಂಪ್‌ಗೆ ಹೊಡೆದರು. ಇದು ರಾಜ್‌ಕೋಟ್‌ನಲ್ಲಿ ಸರ್ಫರಾಜ್ ಖಾನ್ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ಕೊನೆಗೊಳಿಸಿತು.

ಅತ್ತ ಡಗೌಟ್‌ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೋಪಗೊಳ್ಳುವಂತೆ ಮಾಡಿತು ಮತ್ತು ಸಿಟ್ಟಿನಿಂದ ತಮ್ಮ ಕ್ಯಾಪ್ ಅನ್ನು ನೆಲಕ್ಕೆ ಎಸೆದರು.

IND vs ENG: Ravindra Jadeja Apologizes For Sarfaraz Khan Run Out In 3rd Test

ಸೋಷಿಯಲ್ ಮೀಡಿಯಾದಲ್ಲಿ ರವೀಂದ್ರ ಜಡೇಜಾ ಅವರ ನಿರ್ಧಾರವನ್ನು ಅಭಿಮಾನಿಗಳು ಟೀಕಿಸಿದ್ದಾರೆ. ಆಲ್‌ರೌಂಡರ್ ಇದೀಗ ತನ್ನಿಂದಾದ ದೋಷಕ್ಕೆ ಕ್ಷಮೆಯಾಚಿಸುವ ಹೇಳಿಕೆ ಬಿಡುಗಡೆ ಮಾಡಿದ್ದು, ಅದು ಸರ್ಫರಾಜ್ ಖಾನ್ ರನೌಟ್‌ಗೆ ಕಾರಣವಾಯಿತು ಮತ್ತು ಅವರ ಇನ್ನಿಂಗ್ಸ್‌ಗಾಗಿ ಮೆಚ್ಚುಗೆ ಸೂಚಿಸಿದ್ದಾರೆ.

"ರನೌಟ್ ಆಗಿದ್ದು ಸರ್ಫರಾಜ್ ಖಾನ್‌ಗೆ ಬೇಸರವಾಗಿದೆ. ಅದು ನನ್ನ ತಪ್ಪು ನಿರ್ಧಾರ. ಚೆನ್ನಾಗಿ ಆಡಿದ್ದೀಯಾ ಸರ್ಫರಾಜ್ ವೆಲ್ ಡನ್," ಎಂದು ರವೀಂದ್ರ ಜಡೇಜಾ ಅವರ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ಇನ್ನು ಮೊದಲ ದಿನದಾಟದ ನಂತರ, ಪತ್ರಿಕಾಗೋಷ್ಠಿಯಲ್ಲಿ ಸರ್ಫರಾಜ್ ಖಾನ್ ರನೌಟ್ ಬಗ್ಗೆ ಹೇಳಿಕೆ ನೀಡಿದ್ದು, ತಮ್ಮ ಅದ್ಭುತ ಇನ್ನಿಂಗ್ಸ್ ಮೂಲಕ ಅವರಿಗೆ ಮಾರ್ಗದರ್ಶನ ನೀಡಿದ ರವೀಂದ್ರ ಜಡೇಜಾ ಅವರಿಗೆ ಧನ್ಯವಾದ ತಿಳಿಸಿದರು. ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ತನ್ನ ಬಳಿಗೆ ಬಂದು, ಇದು ನನ್ನ ತಪ್ಪು ಸಂವಹನದ ನಿರ್ಧಾರವೆಂದು ಹೇಳಿದ್ದಾರೆ ಎಂದು 26 ವರ್ಷದ ಸರ್ಫರಾಜ್ ಖಾನ್ ತಿಳಿಸಿದರು.

"ರವೀಂದ್ರ ಜಡೇಜಾ ಇನ್ನಿಂಗ್ಸ್ ಮೂಲಕ ನನಗೆ ಮಾರ್ಗದರ್ಶನ ನೀಡುತ್ತಿದ್ದರು. ಅವರು ನನಗೆ ಕ್ರೀಸ್‌ನಲ್ಲಿ ಸ್ವಲ್ಪ ಸಮಯ ಕಳೆಯಲು ಹೇಳಿದರು ಮತ್ತು ರನ್‌ಗಳು ತಾನಾಗೇ ಬರುತ್ತವೆ ಎಂದು ತಿಳಿಸಿದರು. ಅವರು ನನ್ನ ಬಳಿಗೆ ಬಂದು ಸ್ವಲ್ಪ ಸಂವಹನ ತಪ್ಪಾಗಿದೆ ಎಂದು ಹೇಳಿದರು. ನಾನು ಅದಕ್ಕೆ ಓಕೆ ಎಂದೆ," ಅಂತಾ ಸರ್ಫರಾಜ್ ಖಾನ್ ಬಹಿರಂಗಪಡಿಸಿದ್ದಾರೆ.

ನಿಧಾನವಾಗಿ ಇನ್ನಿಂಗ್ಸ್ ಆರಂಭಿಸಿ ಇಂಗ್ಲೆಂಡ್ ಬೌಲರ್‌ಗಳ ವಿರುದ್ಧ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ಸರ್ಫರಾಜ್ ಖಾನ್ ತಮ್ಮ ದಿನದಂದು ಕನಸಿನ ಪದಾರ್ಪಣೆ ಮಾಡಿದರು. ಕೇವಲ 48 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ತಲುಪಿದರು, ಇದು ಟೆಸ್ಟ್‌ನಲ್ಲಿ ಭಾರತೀಯರ ಜಂಟಿ ವೇಗದ ಅರ್ಧಶತಕವಾಗಿದೆ.

ರವೀಂದ್ರ ಜಡೇಜಾ ಮೊದಲ ದಿನದಲ್ಲಿ 5ನೇ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಅಗ್ರ ಕ್ರಮಾಂಕದ ಕುಸಿತದಿಂದ ಭಾರತ ತಂಡವನ್ನು ರಕ್ಷಿಸಿದರು. ರಾಜ್‌ಕೋಟ್‌ನಲ್ಲಿ ಮೊದಲ ದಿನದಾಟದ ಅಂತ್ಯಕ್ಕೆ ಆಲ್‌ರೌಂಡರ್ ರವೀಂದ್ರ ಜಡೇಜಾ 110 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.

Story first published: Thursday, February 15, 2024, 22:48 [IST]
Other articles published on Feb 15, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+