
ಮೊದಲ ದಿನ ಯಶಸ್ಸು ಸಾಧಿಸಿದ ಠಾಕೂರ್
ಇನ್ನು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ದಿನದಾಟದಲ್ಲಿ ಶಾರ್ದೂಲ್ ಠಾಕೂರ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. 13 ಓವರ್ಗಳ ಬೌಲಿಂಗ್ ಮಾಡಿದ ಠಾಕೂರ್ 41 ರನ್ ನೀಡಿ 2 ವಿಕೆಟ್ ಕಬಳಿಸಿದ್ದಾರೆ. ಇದರಲ್ಲಿ ಒಂದು ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ವಿಕೆಟ್ ಕೂಡ ಸೇರಿದೆ. ಜೋ ರೂಟ್ ಇಂಗ್ಲೆಂಡ್ ತಂಡದ ಪರವಾಗಿ ಉತ್ತಮ ಆಟವನ್ನು ಪ್ರದರ್ಶಿಸಿ ಅರ್ಧ ಶತಕವನ್ನು ಗಳಿಸಿದ್ದರು. ಬಳಿಕ ಶಾರ್ದೂಲ್ಗೆ ವಿಕೆಟ್ ಒಪ್ಪಿಸಿದ್ದಾರೆ.

ಅಗ್ಗಕ್ಕೆ ಔಟ್ ಮಾಡುವ ಸಾಮರ್ಥ್ಯ
ಆಜ್ತಕ್ ವಾಹಿನಿಯ ಜೊತೆಗೆ ಮಾತನಾಡಿದ ಮದನ್ಲಾಲ್ ಭಾರತೀಯ ಬೌಲರ್ಗಳ ಪ್ರದರ್ಶನವನ್ನು ಹೊಗಳಿದ್ದಾರೆ. "ಆರಂಭಿಕ ಸೆಶನ್ನಲ್ಲಿ ಪರಿಸ್ಥೊತಿಗೆ ಒಗ್ಗಿಕೊಳ್ಳಲು ಅವರು ಕೆಲ ಸಮಯಗಳನ್ನು ತೆಗೆದುಕೊಂಡರು. ಯಾಕೆಂದರೆ ಇದು ಸರಣಿಯ ಮೊದಲ ದಿನವಾಗಿತ್ತು. ಆದರೆ ಎರಡನೇ ಹಾಗೂ ಮೂರನೇ ಸೆಶನ್ನಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಆರಂಭಿಸಿದರು. ಇಂತಾ ಸಂದರ್ಭದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಬ್ಯಾಟಿಂಗ್ಲೈನ್ಅಪ್ ಹೊಂದಿದ್ದರೂ ಇಂಗ್ಲೆಂಡ್ ತಂಡಕ್ಕೆ ಭಾರತದ ಬೌಲರ್ಗಳು ಕಠಿಣವಾದರು. ನಮ್ಮ ಬೌಲರ್ಗಳು ಇಂದು ನೀಡಿದ ಪ್ರದರ್ಶನದಂತೆ ಇಂಗ್ಲೆಂಡ್ ತಂಡವನ್ನು ಅಗ್ಗಕ್ಕೆ ಔಟ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ" ಎಂದು ಮದನ್ಲಾಲ್ ಹೇಳಿದ್ದಾರೆ.

ಕೋಹ್ಲಿ- ಶಾಸ್ತ್ರಿ ನಿರ್ಧಾರ ಅದ್ಭುತ
"ಈ ಟೆಸ್ಟ್ನಲ್ಲಿ ಶಾರ್ದೂಲ್ ಠಾಕೂರ್ ಅವರನ್ನು ಆಡಿಸುವ ನಿರ್ಧಾರವನ್ನು ತೆಗೆದುಕೊಂಡ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿ ನಿರ್ಧಾರವನ್ನು ನಾನು ಪ್ರಶಂಸಿಸುತ್ತೇನೆ. ಆತನೋರ್ವ ಅದ್ಭುತವಾದ ಔಟ್ಸ್ವಿಂಗ್ ಬೌಲರ್. ಚೆಂಡನ್ನು ಬ್ಯಾಟ್ಸ್ಮನ್ನಿಂದ ದೂರಹೋಗುವಂತೆ ಎಸೆದು ಅವರಿಗೆ ಕಠಿಣವಾಗಬಲ್ಲವ ಸಾಮರ್ಥ್ಯವಿದೆ" ಎಂದಿದ್ದಾರೆ ಮದನ್ಲಾಲ್.

ಟೀಮ ಟೀಮ್ ಇಂಡಿಯಾದ ಮಾಸ್ಟರ್ಸ್ಟ್ರೋಕ್ ನಿರ್ಧಾರ
ಮುಂದುವರಿದು ಮಾತನಾಡಿದ ಮದನ್ಲಾಲ್ "ಇಂಗ್ಲೆಂಡ್ನ ಪರಿಸ್ಥಿತಿಯಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯ ಶಾರ್ದೂಲ್ ಠಾಕೂರ್ಗೆ ಇದೆ.ನನ್ನ ಪ್ರಕಾರ ಇದೊಂದು ಮಾಸ್ಟರ್ಸ್ಟ್ರೋಕ್ ನಿರ್ಧಾರ. ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಹೇಗೆ ಬೌಲಿಂಗ್ ಮಾಡಿದ್ದರು ಎಂಬುದನ್ನು ನಾವು ನೋಡಿದ್ದೇವೆ. ಈಗ ಅವರು ಇಂಗ್ಲೆಂಡ್ನಲ್ಲಿಯೂ ಅದೇ ರೀತಿಯ ಪ್ರದರ್ಶನವನ್ನು ನೀಡಬಲ್ಲವರಾಗಿದ್ದಾರೆ" ಎಂದು ಮದನ್ಲಾಲ್ ಭಾರತೀಯ ಬೌಲರ್ಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.


Click it and Unblock the Notifications












