ಭಾರತ ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಅವರು ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರನ್ನು ಶ್ಲಾಘಿಸಿದ್ದಾರೆ ಮತ್ತು ಯುವ ಆಟಗಾರನ ಬ್ಯಾಟಿಂಗ್ ಶೈಲಿಯನ್ನು ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿಗೆ ಹೋಲಿಸಿದರು.
ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯು 22 ವರ್ಷದ ಯಶಸ್ವಿ ಜೈಸ್ವಾಲ್ ಅವರಿಗೆ ನೆನಪಿಡುವ ಮೌಲ್ಯವಾಗಿದೆ.

ಹೈದರಾಬಾದ್ ಮತ್ತು ವಿಶಾಖಪಟ್ಟಣದಲ್ಲಿ ನಡೆದ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಯಶಸ್ವಿ ಜೈಸ್ವಾಲ್ ಅವರ ಬ್ಯಾಟಿಂಗ್ ಪ್ರದರ್ಶನಗಳು ಕ್ರಿಕೆಟ್ ವಲಯದಿಂದ ಚಪ್ಪಾಳೆ ಗಿಟ್ಟಿಸಿವೆ. ವಿಶೇಷವಾಗಿ ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅವರ ಟೆಸ್ಟ್ ಶತಕ ಚೊಚ್ಚಲ ದ್ವಿಶತಕಕ್ಕೆ ಪರಿವರ್ತನೆಯಾಯಿತು.
ಯಶಸ್ವಿ ಜೈಸ್ವಾಲ್ ಅವರ ಬ್ಯಾಟಿಂಗ್ ಸ್ಥಿರತೆ ಮತ್ತು ಶಾಂತತೆಯು ಅನೇಕ ಕ್ರಿಕೆಟ್ ಪಂಡಿತರಿಗೆ ಮಾತನಾಡುವ ವಿಷಯವಾಗಿದೆ. ಏಕೆಂದರೆ ಯುವ ಬ್ಯಾಟರ್ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಭಾರತ ಕ್ರಿಕೆಟ್ ತಂಡದ ಯುವ ಪೀಳಿಗೆಯ ಪ್ರಮುಖ ಆಟಗಾರರಲ್ಲಿ ಒಬ್ಬರು ಎಂದು ಅನೇಕರು ಈಗಾಗಲೇ ಯಶಸ್ವಿ ಜೈಸ್ವಾಲ್ರನ್ನು ಕರೆದಿದ್ದಾರೆ.

ಹೈದರಾಬಾದ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಅವರ 80 ರನ್ಗಳ ಆಕ್ರಮಣಕಾರಿ ಆಟ ಆಡುವುದರಿಂದ ಹಿಡಿದು, ವಿಶಾಖಪಟ್ಟಣ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ತಮ್ಮ ಚೊಚ್ಚಲ ದ್ವಿಶತಕದ ಸಮಯದಲ್ಲಿ ಆಕ್ರಮಣಶೀಲತೆ ಮತ್ತು ಎಚ್ಚರಿಕೆಯ ನಡುವೆ ಉತ್ತಮ ಸಮತೋಲನವನ್ನು ಸಾಧಿಸುವವರೆಗೆ ಯಶಸ್ವಿ ಜೈಸ್ವಾಲ್ ಪ್ರಗತಿ ಸಾಧಿಸಿದ್ದಾರೆ.
ರಾಜ್ಕೋಟ್ನಲ್ಲಿ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಡುತ್ತಿರುವ ಯಶಸ್ವಿ ಜೈಸ್ವಾಲ್, ಇಂಗ್ಲೆಂಡ್ ವಿಶೇಷವಾಗಿ ಗಮನಹರಿಸಲಿರುವ ಆಟಗಾರರಲ್ಲಿ ಒಬ್ಬರು.

ಸ್ಟಾರ್ ಸ್ಪೋರ್ಟ್ಸ್ ಪ್ರಸಾರ ಮಾಡಿದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ತಮ್ಮ ಆಫ್-ಸೈಡ್ ಬ್ಯಾಟಿಂಗ್ ಪರಾಕ್ರಮಕ್ಕೆ ಬಂದಾಗ ಯಶಸ್ವಿ ಜೈಸ್ವಾಲ್ ಮತ್ತು ಸೌರವ್ ಗಂಗೂಲಿ ನಡುವಿನ ಹೋಲಿಕೆಯನ್ನು ಎತ್ತಿ ತೋರಿಸಿದರು.
ಯಶಸ್ವಿ ಜೈಸ್ವಾಲ್ ಅವರಿಗೆ ಹಿರಿಯ ರಾಷ್ಟ್ರೀಯ ತಂಡದೊಂದಿಗೆ ಸುದೀರ್ಘ ಅವಧಿಯನ್ನು ಹೊಂದಲು ಮಾಜಿ ವೇಗದ ಬೌಲರ್ ಇರ್ಫಾನ್ ಪಠಾಣ್ ಬೆಂಬಲ ನೀಡಿದರು.
"ನಾನು ಉತ್ಸುಕನಾಗುವ ಒಬ್ಬ ಆಟಗಾರನಿದ್ದಾನೆ, ಅವನೇ ಯಶಸ್ವಿ ಜೈಸ್ವಾಲ್. ಈಗ ಅವನು ಐಪಿಎಲ್ನಲ್ಲಿ ಯಾವ ರೀತಿ ಪ್ರದರ್ಶನ ನೀಡುತ್ತಾರೋ ನೋಡಬೇಕು. ನಾವು ಅವನ ಆಟವನ್ನು ನೋಡಿ ಎಂತಹ ಆಕರ್ಷಕ ಆಟಗಾರ ಎಂದೆಣಿಸಿದೆವು, ಅವನು ಆಫ್ಸೈಡ್ ಆಟದ ರಾಜ ಎಂದು ಹೇಳುತ್ತಿದ್ದೆವು," ಎಂದು ಇರ್ಫಾನ್ ಪಠಾಣ್ ಹೇಳಿದರು.
ಯಶಸ್ವಿ ಜೈಸ್ವಾಲ್ ಭಾರತೀಯ ಟೆಸ್ಟ್ ತಂಡದಲ್ಲಿ ಮೊದಲ ಆಯ್ಕೆಯ ಆರಂಭಿಕ ಆಟಗಾರನಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದಾರೆ. ಅವರ ಬ್ಯಾಟಿಂಗ್ ಲೈನ್ಅಪ್ನ ಮೇಲ್ಭಾಗದಲ್ಲಿ ಬಹು ಬೇಡಿಕೆಯ ಎಡ-ಬಲ ಸಂಯೋಜನೆಯನ್ನು ತಂಡಕ್ಕೆ ಒದಗಿಸಿದ್ದಾರೆ.
ರಾಜ್ಕೋಟ್ನಲ್ಲಿ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರಂತಹ ಆಟಗಾರರ ಸೇವೆ ಇಲ್ಲದಿರುವ ಭಾರತ ತಂಡಕ್ಕೆ ಯಶಸ್ ಜೈಸ್ವಾಲ್ವಿ ಅವರು ಅಗ್ರ ಕ್ರಮಾಂಕದಲ್ಲಿ ಸ್ಕೋರ್ ಮಾಡುವ ಭಾರವನ್ನು ಹೊತ್ತುಕೊಳ್ಳುವ ಅಗತ್ಯವಿದೆ.