
ಚೇತೇಶ್ವರ್ ಪೂಜಾರಾರನ್ನು ಕೈಬಿಡಲು ಇದು ಸುಸಮಯ
ಚೇತೇಶ್ವರ್ ಪೂಜಾರ ಕಳಪೆ ಪ್ರದರ್ಶನದ ಕುರಿತು ಬೇಸರ ವ್ಯಕ್ತಪಡಿಸಿರುವ ನೆಟ್ಟಿಗರೊಬ್ಬರು ಟೀಮ್ ಇಂಡಿಯಾದಿಂದ ಚೇತೇಶ್ವರ್ ಪೂಜಾರಾರನ್ನು ಕೈಬಿಡಲು ಇದು ಸರಿಯಾದ ಸಮಯ ಎಂದು ಟ್ವೀಟ್ ಮಾಡಿದ್ದಾರೆ. ಚೇತೇಶ್ವರ್ ಪೂಜಾರ ಅವರನ್ನು ತಂಡದಿಂದ ಕೈ ಬಿಟ್ಟರೆ ಕೆಎಲ್ ರಾಹುಲ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬಹುದು ಮತ್ತು ಶುಬ್ಮನ್ ಗಿಲ್ ರೋಹಿತ್ ಶರ್ಮಾ ಜೊತೆ ಆರಂಭಿಕ ಆಟಗಾರರಾಗಿ ಕಣಕ್ಕಿಳಿಯಬಹುದು ಎಂದು ಕೂಡ ಈ ನೆಟ್ಟಿಗ ಟ್ವೀಟ್ ಮೂಲಕ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾನೆ.

ಬಿಸಿಸಿಐ ಬಳಿ ಬೇಡಿಕೊಂಡ ನೆಟ್ಟಿಗ
ಚೇತೇಶ್ವರ್ ಪೂಜಾರ ಕಳಪೆ ಆಟವನ್ನು ನೋಡಿ ಬೇಸತ್ತ ನೆಟ್ಟಿಗ ನೋರ್ವ ಬಿಸಿಸಿಐ ಬಳಿ ಚೇತೇಶ್ವರ ಪೂಜಾರರನ್ನು ತಂಡದಿಂದ ಹೊರಗಿಡುವಂತೆ ಬೇಡಿಕೆ ಇಟ್ಟಿದ್ದಾನೆ. ಟ್ವೀಟ್ ಮಾಡುವಾಗ ಬಿಸಿಸಿಐಗೆ ಹ್ಯಾಕ್ ಮಾಡಿರುವ ಈ ನೆಟ್ಟಿಗ ದಯವಿಟ್ಟು ಚೇತೇಶ್ವರ್ ಪೂಜಾರಾ ಬದಲು ಯುವ ಆಟಗಾರರಿಗೆ ತಂಡದಲ್ಲಿ ಆಡುವ ಅವಕಾಶವನ್ನು ನೀಡಿ, ಆದಷ್ಟು ಬೇಗ ಸೂರ್ಯಕುಮಾರ್ ಯಾದವ್ ತಂಡವನ್ನು ಸೇರಿಕೊಳ್ಳಲಿ ಎಂದು ಟ್ವೀಟ್ ಮಾಡಿದ್ದಾನೆ.

ಪೂಜಾರ ಮುಂದಿನ ಇನ್ನಿಂಗ್ಸ್ನಲ್ಲಿ ಶತಕ ಬಾರಿಸಿದರೂ ತಂಡದಿಂದ ಹೊರಗಿಡಿ ಎಂದ ನೆಟ್ಟಿಗ
ಪೂಜಾರ ಸತತವಾಗಿ ಕಳಪೆ ಪ್ರದರ್ಶನ ನೀಡುತ್ತಿರುವುದಕ್ಕೆ ಬೇಸತ್ತ ಮತ್ತೋರ್ವ ನೆಟ್ಟಿಗ ಮುಂದಿನ ಇನ್ನಿಂಗ್ಸ್ನಲ್ಲಿ ಚೇತೇಶ್ವರ್ ಪೂಜಾರ ಶತಕ ಬಾರಿಸಿ ಅತ್ಯುತ್ತಮ ಪ್ರದರ್ಶನ ನೀಡಿದರೂ ಸಹ ದಯವಿಟ್ಟು ತಂಡದಿಂದ ಆತನನ್ನು ಹೊರಗಿಡಿ ಎಂದು ಕಿಡಿಕಾರಿದ್ದಾನೆ.


Click it and Unblock the Notifications












