For Quick Alerts
ALLOW NOTIFICATIONS  
For Daily Alerts
 

IND vs NZ: ರಚಿನ್‌ರ ಸುಲಭ ಕ್ಯಾಚ್ ಕೈಚೆಲ್ಲಿದ ರವೀಂದ್ರ ಜಡೇಜಾ; ಸ್ಟ್ಯಾಂಡ್‌ನಲ್ಲಿ ಪತ್ನಿ ರಿವಾಬಾ ರಿಯಾಕ್ಷನ್ ವೈರಲ್!

ಭಾನುವಾರ, ಅಕ್ಟೋಬರ್ 22ರಂದು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಹೈ-ವೋಲ್ಟೇಜ್ ಪಂದ್ಯದಲ್ಲಿ ಕ್ರಿಕೆಟ್ ಅಭಿಮಾನಿಗಳು ನಾಟಕೀಯ ಘಟನೆಗೆ ಸಾಕ್ಷಿಯಾದರು.

ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡುವ ಆಯ್ಕೆ ಮಾಡಿಕೊಂಡರು. ಹೀಗಾಗಿ ಟಾಮ್ ಲ್ಯಾಥಮ್ ನಾಯಕತ್ವದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಮಾಡಬೇಕಾಯಿತು.

IND vs NZ: Ravindra Jadeja Drops An Easy Catch Of Rachin; Rivaba Jadejas Reaction Goes viral

ಇನ್ನು ಭಾರತ ತಂಡದ ಅಲ್‌ರೌಂಡರ್ ರವೀಂದ್ರ ಜಡೇಜಾ ಇದೀಗ ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಫೀಲ್ಡರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ಅವರ ಅದ್ಭುತ ಕ್ಯಾಚ್‌ಗಳು ಭಾರತೀಯ ಕ್ರಿಕೆಟ್ ತಂಡಕ್ಕೆ ದೊಡ್ಡ ಲಾಭ ತಂದುಕೊಟ್ಟಿವೆ.

ಆದಾಗ್ಯೂ, ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 2023ರ ವಿಶ್ವಕಪ್ ಪಂದ್ಯದ ವೇಳೆ ರವೀಂದ್ರ ಜಡೇಜಾ ಅವರು ರಚಿನ್ ರವೀಂದ್ರ ಅವರಿಗೆ ದೊಡ್ಡ ಜೀವದಾನ ನೀಡಿದರು. ಸುಲಭ ಕ್ಯಾಚ್ ಕೈಚೆಲ್ಲಿದ್ದರಿಂದ ಅಭಿಮಾನಿಗಳು ಮತ್ತು ಕ್ರಿಕೆಟ್ ಪರಿಣಿತರು ದಿಗ್ಭ್ರಮೆಗೊಂಡರು.

ರವೀಂದ್ರ ಜಡೇಜಾ ಅವರ ಅಪರೂಪದ ಎಡವಟ್ಟು ಎಲ್ಲರ ಗಮನ ಸೆಳೆಯಿತು. ಈ ಘಟನೆಗೆ ಸ್ಟ್ಯಾಂಡ್‌ನಲ್ಲಿದ್ದ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ ಕೂಡ ನಿರಾಶೆ ವ್ಯಕ್ತಪಡಿಸಿದರು.

IND vs NZ: Ravindra Jadeja Drops An Easy Catch Of Rachin; Rivaba Jadejas Reaction Goes viral

ರಚಿನ್ ರವೀಂದ್ರ ಅದನ್ನು ನೇರವಾಗಿ ರವೀಂದ್ರ ಜಡೇಜಾಗೆ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ಹೊಡೆದರು. ಆದರೆ ಬಾಲ್ ಅನ್ನು ಪಡೆದುಕೊಳ್ಳುವಲ್ಲಿ ವಿಫಲವಾದ ಕಾರಣ ಆಲ್‌ರೌಂಡರ್ ಕ್ಯಾಚ್ ಪೂರ್ಣಗೊಳಿಸಲಿಲ್ಲ.

ಬೇರೆ ಯಾವುದೇ ದಿನದಲ್ಲಿ, ರವೀಂದ್ರ ಜಡೇಜಾ ಕಣ್ಣು ಮುಚ್ಚಿ ಕ್ಯಾಚ್ ಪಡೆದುಕೊಳ್ಳುತ್ತಿದ್ದರು. ಆದರೆ, ಈ ಬಾರಿ ಅದು ಅವರ ಕೈಯಿಂದ ಜಾರಿತು. ಪ್ರೇಕ್ಷಕರು ನಿರಾಶೆಗೊಂಡರು ಮತ್ತು ಅವರ ಪತ್ನಿ ರಿವಾಬಾ ಜಡೇಜಾ ರಿಯಾಕ್ಷನ್ ಕೂಡ ವೈರಲ್ ಆಗಿದೆ.

ರಿವಾಬಾ ಜಡೇಜಾ ನಿರಾಶಾದಾಯಕ ಪ್ರತಿಕ್ರಿಯೆ

ಕ್ಯಾಚ್ ತಪ್ಪಿದ ಅವಕಾಶದಿಂದ ಪ್ರೇಕ್ಷಕರು ಸಾಮೂಹಿಕವಾಗಿ ಏದುಸಿರು ಬಿಡುತ್ತಿದ್ದಂತೆ, ಟೀಮ್ ಇಂಡಿಯಾವನ್ನು ಹುರಿದುಂಬಿಸಲು ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಅವರು ಹಾಜರಿದ್ದ ಸ್ಟ್ಯಾಂಡ್‌ಗೆ ಕ್ಯಾಮರಾ ಪ್ಯಾನ್ ಮಾಡಲಾಯಿತು.

ಅವರು ತಮ್ಮ ನಿರಾಶೆಯನ್ನು ಮರೆಮಾಡಲು ಸಾಧ್ಯವಾಗಲಿಲ್ಲ. ಗುಜರಾತ್‌ನಲ್ಲಿ ಶಾಸಕಿ ಕೂಡ ಆಗಿರುವ ರಿವಾಬಾ ಅವರ ಪ್ರತಿಕ್ರಿಯೆಯ ವಿಡಿಯೋ ಬಹು ಬೇಗವಾಗಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗಿದೆ.

ಭಾರತ ಈ ಪಂದ್ಯದಲ್ಲಿ ಎರಡು ಬದಲಾವಣೆಗಳನ್ನು ಮಾಡಿದ್ದು, ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಪಾದದ ಗಾಯಕ್ಕೆ ಒಳಗಾದ ಹಾರ್ದಿಕ್ ಪಾಂಡ್ಯ ಮತ್ತು ಶಾರ್ದೂಲ್ ಠಾಕೂರ್ ಬದಲಿಗೆ ಸೂರ್ಯಕುಮಾರ್ ಯಾದವ್ ಮತ್ತು ಮೊಹಮ್ಮದ್ ಶಮಿಯನ್ನು ಆಯ್ಕೆ ಮಾಡಿದೆ.

Story first published: Sunday, October 22, 2023, 17:39 [IST]
Other articles published on Oct 22, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+