ಬುಧವಾರ, ಡಿಸೆಂಬರ್ 27ರಂದು ಸೆಂಚುರಿಯನ್ನಲ್ಲಿ ನಡೆದ ಕಠಿಣ ಪರಿಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಮೋಘ ಶತಕ ಗಳಿಸುವ ಮೂಲಕ ಭಾರತ ತಂಡದ ವಿಕೆಟ್ಕೀಪರ್-ಬ್ಯಾಟರ್ ಕೆಎಲ್ ರಾಹುಲ್ ಗಮನಾರ್ಹ ಟೆಸ್ಟ್ ಪುನರಾಗಮನ ಮಾಡಿದರು.
ಇದೇ ವೇಳೆ ಭಾರತದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಅವರು ಕೆಎಲ್ ರಾಹುಲ್ ಅವರನ್ನು 'ಸಂಕಟ ಮೋಚನ' ಎಂದು ಶ್ಲಾಘಿಸಿದ್ದಾರೆ. ಇದು ಕಠಿಣ ಪರಿಸ್ಥಿತಿಯ ನಡುವೆ ಭಾರತ ತಂಡಕ್ಕಾಗಿ ಅವರ ರಕ್ಷಣಾತ್ಮಕ ಆಟವನ್ನು ಸೂಚಿಸುತ್ತದೆ.

ಭಾರತ ತಂಡ 92 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್ಗೆ ಆಗಮಿಸಿದ ಕೆಎಲ್ ರಾಹುಲ್ ಸ್ಥಿರತೆ ಮತ್ತು ನಿರ್ಣಾಯಕ ಆಟವನ್ನು ಪ್ರದರ್ಶಿಸಿದರು. ಮಧ್ಯಮ ಕ್ರಮಾಂಕ ಮತ್ತು ಕೆಳ ಕ್ರಮಾಂಕದ ಬ್ಯಾಟರ್ಗಳೊಂದಿಗೆ ಉತ್ತಮ ಜೊತೆಯಾಟವನ್ನು ರಚಿಸಿದರು.
ಕೆಎಲ್ ರಾಹುಲ್ ಅವರ ಆಕ್ರಮಣಕಾರಿ ಇನ್ನಿಂಗ್ಸ್ನಲ್ಲಿ 137 ಎಸೆತಗಳನ್ನು ಎದುರಿಸಿ 14 ಬೌಂಡರಿ ಮತ್ತು ನಾಲ್ಕು ಸಿಕ್ಸರ್ಗಳ ಸಮೇತ 101 ರನ್ ಗಳಿಸಿ ಕೊನೆಯವರಾಗಿ ಔಟಾದರು. ಅಸ್ಥಿರವಾದ ಟೆಸ್ಟ್ ಫಾರ್ಮ್ನೊಂದಿಗೆ ಹೆಣಗಾಡುತ್ತಿದ್ದ ಬ್ಯಾಟರ್ಗೆ ಶತಕವು ತಮ್ಮ ಅದ್ಭುತ ಪುನರಾಗಮನವನ್ನು ಗುರುತಿಸಿತು.
ಕೆಎಲ್ ರಾಹುಲ್ ಇದೀಗ ದಕ್ಷಿಣ ಆಫ್ರಿಕಾದ ಸೆಂಚುರಿಯನ್ನಲ್ಲಿ ಬಹು ಶತಕಗಳನ್ನು ಗಳಿಸಿದ ಮೊದಲ ವಿದೇಶಿ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಪಡೆದರು. 2021ರಲ್ಲಿ ತಮ್ಮ ಹಿಂದಿನ 123 ರನ್ಗಳ ಶತಕಕ್ಕೆ ಇದನ್ನು ಸೇರಿಸಿದರು.
ಇನ್ನು ದಕ್ಷಿಣ ಆಫ್ರಿಕಾದಲ್ಲಿ ಕನಿಷ್ಠ ಎರಡು ಶತಕಗಳನ್ನು ಬಾರಿಸಿದ ಏಷ್ಯನ್ ಬ್ಯಾಟರ್ಗಳ ಪಟ್ಟಿಯಲ್ಲಿ ಅವರನ್ನು ಅಜರ್ ಮಹಮೂದ್, ತಿಲನ್ ಸಮರವೀರ ಮತ್ತು ವಿರಾಟ್ ಕೊಹ್ಲಿ ಅವರ ಗೌರವಾನ್ವಿತ ಪಟ್ಟಿಯಲ್ಲಿ ಸ್ಥಾನ ಪಡೆಯುವಂತೆ ಮಾಡಿದೆ.
ಕೆಎಲ್ ರಾಹುಲ್ ತಮ್ಮ ಹೃದಯದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ಗೆ ವಿಶೇಷ ಸ್ಥಾನ ನೀಡಿದ್ದಾರೆ. ಅದೇ ದಿನ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಅವರು ಸಾಧಾರಣ ಆರಂಭವನ್ನು ಹೊಂದಿದ್ದರು.
ಆದಾಗ್ಯೂ, ಸೆಂಚುರಿಯನ್ನಲ್ಲಿ 2021ರ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ 123 ಮತ್ತು 23 ರನ್ಗಳೊಂದಿಗೆ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದೀಗ ಅವರ ಮೂರನೇ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ, ಅವರು ಕಠಿಣ ಪರಿಸ್ಥಿತಿಗಳಲ್ಲಿ ಭವ್ಯವಾದ ಶತಕದೊಂದಿಗೆ ತಮ್ಮ ಟೆಸ್ಟ್ ಪುನರಾಗಮನ ಗುರುತಿಸಿದ್ದಾರೆ.
ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಕೆಎಲ್ ರಾಹುಲ್ ಪುನರಾಗಮನ
ಕೆಎಲ್ ರಾಹುಲ್ ಏಕದಿನ ಪಂದ್ಯಗಳಲ್ಲಿ ಯಶಸ್ವಿಯಾಗಿ ಪುನರಾಗಮನ ಮಾಡಿದ ನಂತರ, ಭಾರತದ ಏಷ್ಯಾ ಕಪ್ ಚಾಂಪಿಯನ್ಗೆ ಮತ್ತು ಐಸಿಸಿ ಏಕದಿನ ವಿಶ್ವಕಪ್ ಫೈನಲ್ಗೆ ತಲುಪಲು ಗಣನೀಯ ಕೊಡುಗೆ ನೀಡಿದರು. ಪ್ರಸ್ತುತ ಟೆಸ್ಟ್ ಕ್ರಿಕೆಟ್ಗೆ ಅದ್ಭುತವಾಗಿ ಮರಳಿದ್ದಾರೆ.
ಆರಂಭಿಕ ಹೋರಾಟಗಳ ಹೊರತಾಗಿಯೂ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್ ಮತ್ತು ಕೆಎಲ್ ರಾಹುಲ್ ಒಳಗೊಂಡ ಜೊತೆಯಾಟದಿಂದಾಗಿ ಭಾರತವು ಸ್ಪರ್ಧಾತ್ಮಕ ಮೊತ್ತವನ್ನು 245 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.
ಕಗಿಸೊ ರಬಾಡ, ನಾಂದ್ರೆ ಬರ್ಗರ್ ಮತ್ತು ಮಾರ್ಕೊ ಜಾನ್ಸೆನ್ ನೇತೃತ್ವದ ಹರಿಣ ಬೌಲರ್ಗಳು ಭಾರತೀಯ ಬ್ಯಾಟರ್ಗಳಿಗೆ ಸವಾಲು ಒಡ್ಡಿದರು. ಆದರೆ ಕೆಎಲ್ ರಾಹುಲ್ ಅವರ ಶತಕವು ಭಾರತ ತಂಡವನ್ನು ಗೌರವಾನ್ವಿತ ಸ್ಕೋರ್ಗೆ ತಿರುಗಿಸಿತು.