For Quick Alerts
ALLOW NOTIFICATIONS  
For Daily Alerts
 

IND vs SA 3rd ODI: ಭಾರತ ತಂಡದಲ್ಲಿ ಬದಲಾವಣೆ ಸಾಧ್ಯತೆ, ಆಲ್‌ರೌಂಡರ್‌ ಎಂಟ್ರಿ?

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯ ಶನಿವಾರ ವಿಶಾಖಪಟ್ಟಣಂದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸುವುದು ಉಭಯ ತಂಡಗಳಿಗೆ ಮಹತ್ವದಾಗಿದೆ. ಈಗಾಗಲೇ ಎರಡೂ ತಂಡಗಳು ತಲಾ ಒಂದು ಪಂದ್ಯವನ್ನು ಗೆದ್ದಿದ್ದರಿಂದ ಮೂರನೇ ಪಂದ್ಯ ರೋಚಕತೆ ಹುಟ್ಟಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದಲ್ಲಿ ಬದಲಾವಣೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ರಾಯ್ಪುರದಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಬೃಹತ್ ಮೊತ್ತವನ್ನು ಡಿಫೇಂಡ್‌ ಮಾಡಿಕೊಳ್ಳುವಲ್ಲಿ ಎಡವಿದೆ. ಅನುಭವಿ ಬ್ಯಾಟರ್ಸ್‌ ಹಾಗೂ ಯುವ ಬ್ಯಾಟರ್‌ ಎರಡನೇ ಏಕದಿನ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿದರು. ಆದರೆ ಬೌಲರ್‌ಗಳನ್ನು ರನ್‌ಗಳಿಗೆ ಕಡಿವಾಣ ಹಾಕುವಲ್ಲಿ ಎಡವಿದರು. ಅಲ್ಲದೆ ವಿಕೆಟ್‌ಗಳನ್ನು ಸಹ ಹಿಂದೆ ಬಿದ್ದರು. ಹೀಗಾಗಿ ಮೂರನೇ ಪಂದ್ಯದಲ್ಲಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ. ಈ ಬಾರಿ ಅಪಾಯದ ತೂಗುಗತ್ತಿ ಕನ್ನಡಿಗನ ಮೇಲೆ ನೇತಾಡುತ್ತಿದೆ.

Ind vs SA 3rd ODI Prasidh Krishna likely out Nitish Kumar Reddy may debut for crucial decider

ರಾಯ್ಪುರದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭಾರತದ ಪರ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದ ಕರ್ನಾಟಕದ ಸ್ಟಾರ್ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣಾ ಬಿಗುವಿನ ದಾಳಿ ನಡೆಸುವಲ್ಲಿ ವಿಫಲರಾಗಿದ್ದರು. ಇವರು ಎರಡನೇ ಏಕದಿನ ಪಂದ್ಯದಲ್ಲಿ 8.2 ಓವರ್‌ಗಳಲ್ಲಿ 85 ರನ್‌ ನೀಡಿ ಕೈ ಸುಟ್ಟುಕೊಂಡಿದ್ದರು. ಈ ವೇಳೆ ಇವರ ಎಕಾನಮಿ ಸಹ 10ರ ಮೇಲೆ ಇತ್ತು. ಮೂರನೇ ಪಂದ್ಯದಲ್ಲಿ ಇವರಿಗೆ ತಂಡದಿಂದ ಕೈ ಬಿಟ್ಟು ಯುವ ಆಲ್‌ರೌಂಡರ್ ನಿತೀಶ್‌ ಕುಮಾರ್ ರೆಡ್ಡಿ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ಆಧಾರವಾಗಬಲ್ಲರು.

ಆಲ್‌ರೌಂಡರ್‌ಗೆ ಅವಕಾಶ

ಮೂರನೇ ಹಾಗೂ ನಿರ್ಣಾಯಕ ಪಂದ್ಯಕ್ಕಾಗಿ ತಂಡದಲ್ಲಿ ಬದಲಾವಣೆ ಮಾಡಬಹುದು. ಈ ಬದಲಾವಣೆಯಿಂದ ತಂಡದ ಸಮತೋಲನ ಹೆಚ್ಚುತ್ತದೆ. ನಿತೀಶ್‌ ಕುಮಾರ್‌ ರೆಡ್ಡಿ ಆರನೇ ಬೌಲರ್‌ ಆಗಿ ತಂಡಕ್ಕೆ ನೆರವಾಬಲ್ಲರು. ಒಂದು ವೇಳೆ ಈ ಬದಲಾವಣೆ ಮಾಡುವಲ್ಲಿ ತಂಡ ಯಶಸ್ವಿಯಾದರೆ, ಇವರು ಡೆತ್‌ ಓವರ್‌ಗಳಲ್ಲಿ ಸ್ಥಿರ ಬೌಲಿಂಗ್ ಪ್ರದರ್ಶನ ನೀಡಬಹುದು. ಇವರನ್ನು ತಂಡಕ್ಕೆ ಸೇರಿಸಿಕೊಳ್ಳುವುದು ತಂಡಕ್ಕೆ ಡಬಲ್ ಬಲ ತುಂಬಲಿದೆ.

Ind vs SA 3rd ODI Prasidh Krishna likely out Nitish Kumar Reddy may debut for crucial decider

ಒಂದು ವೇಳೆ ಪ್ರಸಿದ್ಧ ವಿಶಾಖಾಪಟ್ಟಣಂನಲ್ಲಿ ಬೆಚ್ ಕಾಯ್ದರೆ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್‌ ವೇಗದ ಬೌಲಿಂಗ್ ನೊಗವನ್ನು ಹೊರಲಿದ್ದಾರೆ. ಕುಲದೀಪ್ ಯಾದವ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ ಸ್ಪಿನ್ ಬೌಲರ್‌ ರೂಪದಲ್ಲಿ ಎದುರಾಳಿಗಳಿಗೆ ಕಾಡಬಹುದು. ನಿತೀಶ್‌ ಕುಮಾರ್ ರೆಡ್ಡಿ ಈ ಸಮಯದಲ್ಲಿ ಆರನೇ ಬೌಲರ್ ಆಗಿ ತಂಡಕ್ಎಕ ಆಧಾರವಾಗಬಲ್ಲರು. ಉಳಿದಂತೆ ತಂಡದಲ್ಲಿ ಹೆಚ್ಚಿನ ಬದಲಾವಣೆ ಮಾಡುವ ಅವಶ್ಯಕತೆ ಇಲ್ಲ. ವಿಶಾಖಪಟ್ಟಣಂನಲ್ಲಿ ಜಯ ಸಾಧಿಸಿ ಟೀಮ್ ಇಂಡಿಯಾ ಏಕದಿನ ಸರಣಿಯನ್ನು ಗೆಲ್ಲುವ ಆಸೆಯನ್ನು ಹೊಂದಿದೆ. ಈ ಆಸೆ ಫಲಿಸ ಬೇಕಾದಲ್ಲಿ ಸಂಘಟಿತ ಆಟ ಅನಿವಾರ್ಯವಾಗಿದೆ.

Story first published: Friday, December 5, 2025, 8:20 [IST]
Other articles published on Dec 5, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+